ನಮ್ಮ ರಾಜಕೀಯ ಪಕ್ಷದವರಿಗೊಂದು ಕಳಕಳಿಯ ಮನವಿ. ನೀವು ನಿಮ್ಮ ರಾಜಕೀಯ ಸೇೂಲು ಗೆಲುವಿನ ಲೆಕ್ಕಾಚಾರದ ಪಗಡೆಯಾಟವನ್ನು ಯಾವುದೇ ರಂಗದಲ್ಲಿ ಆಡಿಕೊಳ್ಳಿ; ಆದರೆ ಜನಸಾಮಾನ್ಯರ ಆರೇೂಗ್ಯ ಶಿಕ್ಷಣ ರಾಷ್ಟ್ರದ ರಕ್ಷಣೆಯ ವಿಷಯದ ಮೇಲೆ ಮಾತ್ರ ಆಡಿಕೊಳ್ಳಬೇಡಿ. ಇದು ಜನಸಾಮಾನ್ಯರ ಬದುಕನ್ನು ಹಾಳು ಮಾಡುತ್ತದೆ ಮಾತ್ರವಲ್ಲ ರಾಷ್ಟ್ರದ ಭದ್ರತೆಯನ್ನು ಹಾಳು ಮಾಡುತ್ತದೆ. ಖಂಡಿತವಾಗಿಯೂ ಹೇಳುತ್ತೇನೆ ಜನರು ಮಾತ್ರ ನಿಮ್ಮನ್ನು ಯಾವ ಸಂದರ್ಭದಲ್ಲಿ ಕ್ಷಮಿಸಲಾರರು ಅನ್ನುವುದು ಪ್ರತಿಯೊಂದು ದೇಶದಲ್ಲಿ ಸಾಬೀತಾಗಿದೆ.
ಕನಾ೯ಟಕ ಸರ್ಕಾರದ ಆರೇೂಗ್ಯ ಇಲಾಖೆ ಇತ್ತೀಚೆಗೆ ತೆಗೆದುಕೊಂಡ ಒಂದು ಪ್ರಮುಖ ನಿಧಾ೯ರವೆಂದರೆ ರಾಜ್ಯದಲ್ಲಿರುವ ಪ್ರತಿಯೊಂದು ಸರಕಾರಿ ಆಸ್ಪತ್ರೆಯಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವುದು. ಆರೇೂಗ್ಯ ಸಚಿವರ ಹೇಳಿಕೆ ಎಂದರೆ ಇದು ನಮ್ಮ ಸರಕಾರಿ ನೀತಿ. ಅಂದರೆ ಸರಕಾರಿ ಆಸ್ಪತ್ರೆಗೆ ಬರುವ ಪ್ರತಿಯೆಾಬ್ಬರಿಗೂ ಎಲ್ಲವೂ ಉಚಿತವಾಗಿ ಲಭ್ಯವಾಗಬೇಕು. ಅಂದರೆ ಜನಸಾಮಾನ್ಯರು ಇಲ್ಲಿ ತಮ್ಮ ಜೇಬಿಗೆ ಕೈ ಹಾಕುವ ಪ್ರಶ್ನೆಯೇ ಬರಬಾರದು ಅನ್ನುವ ಅರ್ಥದಲ್ಲಿ ಹೇಳಿದ್ದಾರೆ. ಈ ಹೇಳಿಕೆಯನ್ನು ಸ್ವಾಗತಿಸೇೂಣ. ಆದರೆ ಜನಸಾಮಾನ್ಯರು ಕೇಳುವ ಕೆಲವೊಂದು ಮೂಲಭೂತ ಪ್ರಶ್ನೆಗಳಿಗೂ ಸಚಿವರು ಹಾಗೂ ಅವರ ಇಲಾಖೆ ಸ್ವಷ್ಟವಾಗಿ ಉತ್ತರಿಸಬೇಕಾದ ಅಗತ್ಯವಿದೆ.
1. ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಖಾಯಿಲೆಗಳಿಗೆ ಎಲ್ಲಾ ತರದ ಔಷಧಿಗಳು ಎಲ್ಲಾ ಸಮಯದಲ್ಲಿ ಎಲ್ಲಾ ರೇೂಗಿಗಳಿಗೆ ಉಚಿತವಾಗಿ ನೀಡುತ್ತೇವೆ ಅನ್ನುವ ವಾಗ್ದಾನ ಮಾಡಬಹುದಾ?
2. ಎಲ್ಲಾ ಖಾಯಿಲೆಗಳಿಗೆ ಎಲ್ಲ ಪರಿಣಿತ ವೈದ್ಯಕೀಯ ತಂಡ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ ಅನ್ನುವುದನ್ನು ಖಾತ್ರಿ ಪಡಿಸುತ್ತೀರಾ?
3. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ದಾದಿಗಳ ಮತ್ತು ವೈದ್ಯಕೀಯ ಉಪಕರಣಗಳ ಕೊರತೆ ಇಲ್ಲ. ಮಾತ್ರವಲ್ಲ ಉತ್ತಮ ಗುಣಮಟ್ಟದ ಸೇವೆ ಸದಾ ಕಾಲಕ್ಕೂ ಲಭ್ಯವಿದೆ ಅನ್ನುವುದನ್ನು ನೀವು ತೆಗೆದುಕೊಂಡ ಸರಕಾರಿ ಆರೇೂಗ್ಯ ನೀತಿ ಖಚಿತ ಪಡಿಸುತ್ತದೆಯಾ ಅಥವಾ ಕೊನೆಗೆ ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡಿಲ್ಲ. ಹಾಗಾಗಿ ನಾವು ಸೇೂತಿದ್ದೇವೆ ಅಂತ ಕೈ ಎತ್ತುವ ಪರಿಸ್ಥಿತಿಯಾ ಅನ್ನುವುದನ್ನು ಕೂಡ ಜನರಿಗೆ ಮೊದಲೇ ತಿಳಿಸಿಬಿಡಿ.
4. ಸರಕಾರಿ ಆಸ್ಪತ್ರೆ ವಿಷಯ ಬಂದಾಗ ಇದು ನಮ್ಮ ನೀತಿ ಅನ್ನುವ ಸಚಿವರಿಗ್ಗೊಂದು ಇನ್ನೊಂದು ಸೂಕ್ಷ್ಮವಾದ ಪ್ರಶ್ನೆ ಸರಕಾರಿ ಮೆಡಿಕಲ್ ಕಾಲೇಜು ಬಂದಾಗ ಪಿ.ಪಿ.ಪಿ. ಎಂದು ಸುಲಭವಾಗಿ ಆಟವಾಡಿ ತಪ್ಪಿಸಿಕೊಳ್ಳುತ್ತೀರಿ. ಅಲ್ಲಿಯೂ ಇದೇ ನೀತಿಯನ್ನು ಅನುಸರಿಸ ಬಹುದಲ್ಲಾ?
5. ಶಿಕ್ಷಣ ಕ್ಷೇತ್ರಕ್ಕೂ ಬಂದಾಗ ಸರಕಾರಿ ಶಾಲೆಯ ಅಭಿವೃದ್ಧಿಗೆ ಖಾಸಗಿ ಸಹಾಯ ಹಸ್ತಕ್ಕೆ ಕೈ ಚಾಚಲು ಹಿಂದೆ ಮುಂದೆ ನೇೂಡದ ಸರ್ಕಾರ ಅಲ್ಲಿ ನಮ್ಮ ಘನತೆ ಪ್ರತಿಷ್ಟೆಯನ್ನು ಯಾಕೆ ಉಳಿಸಿಕೊಳ್ಳ ಬಾರದು? ಅದೇ ಸರಕಾರಿ ಸಂಸ್ಥೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಕಡಿಮೆ ಬೆಲೆಗೆ ಲಭ್ಯವಿರುವ ಜನೌಷಧಿಕೇಂದ್ರ ಮಾತ್ರ ಸರ್ಕಾರದ ಪ್ರತಿಷ್ಠೆಗೆ ಅಡ್ಡ ಬರುತ್ತದಾ? ದಯವಿಟ್ಟು ಒಣ ಪ್ರತಿಷ್ಥೆಯ ಪ್ರಶ್ನೆ ಬಿಡಿ. ಜನಸಾಮಾನ್ಯರಿಗೂ ಅರ್ಥವಾಗಿದೆ..ನಿಮಗೆ ಈ ಜನೌಷಧಿ ಕೇಂದ್ರ ತೊಂದರೆ ಮಾಡಿದ್ದಲ್ಲ. ಈ ನಾಮಫಲಕದೊಳಗಿರುವ ದೇಶದ ಪ್ರಧಾನಿಗಳ ಹೆಸರು ಮತ್ತು ಭಾವ ಚಿತ್ರ ತುಂಬಾ ಕಿರಿ ಕಿರಿಮಾಡಿದೆ ಅನ್ನುವುದು ನಮಗೆ ಅರ್ಥವಾಗಿದೆ ಬಿಡಿ; ಈ ಆರೇೂಗ್ಯ ಶಿಕ್ಷಣ ಇವೆಲ್ಲವೂ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ ಅನ್ನುವುದನ್ನು ಕೂಡ ನೆನಪಿಸಿಕೊಳ್ಳಲೇ ಬೇಕು.
ಶಿಕ್ಷಣ ಆರೇೂಗ್ಯ ರಕ್ಷಣೆ ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಬೇಡ ಅನ್ನುವ ಮಾತುಗಳನ್ನು ನೆನಪಿಸುವ ನೀವುಗಳೇ ಮೂಲಭೂತ ವಿಷಯಗಳಲ್ಲಿ ರಾಜಕೀಯ ತಂದು ಕುಾರಿಸುವುದನ್ನು ಜನ ಸಹಿಸುವುದಿಲ್ಲ. ಈ ಪಾಠವನ್ನು ಮತ್ತೆ ಮುಂದಿನ ಚುನಾವಣೆಯಲ್ಲಿ ತೇೂರಿಸುವ ಸಂದರ್ಭವನ್ನು ಸೃಷ್ಟಿ ಮಾಡಿಕೊಳ್ಳಬೇಡಿ. ಅಧಿಕಾರಕ್ಕೆ ಬರಲು ಯೇೂಗ ಬೇಕು. ಅದನ್ನು ಉಳಿಸಿಕೊಳ್ಳಲು ಯೇೂಗ್ಯತೆ ಬೇಕು. ಇದು ಪ್ರಬುದ್ಧ ಮತದಾರರು ನೀಡುವ ಸಕಾಲಿಕ ಸಂದೇಶವೂ ಹೌದು.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ