ಬೆಂಗಳೂರು: ನೆಲಮಂಗಲದ ಕಲಾಗ್ರಣಿ ಪ್ರತಿಷ್ಠಾನದ ಗುರುಗಳಾದ ವಿದುಷಿ ಶ್ರೀಮತಿ ಸೌನಿಯಾ ಪಡುವಾಲ್ ಅವರು ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ಮೇ 14, ಬುಧವಾರ ಸಂಜೆ ತಮ್ಮ ಶಿಷ್ಯೆಯರಾದ ಆರ್. ಚಂದನ, ಆರ್. ಕುಸ್ಮಿತಾ, ಬಿ.ಕೆ. ಕುಸುಮಾ, ವಿ. ಭವಾನಿ, ಕೆ. ದೀಕ್ಷಿತಾ, ಎಂ.ಜಿ. ಯುಕ್ತಿತಾ, ಎಸ್.ಹೆಚ್. ಸ್ರಿಗ್ವಿ, ಜ್ಞಾನವಿ ಪ್ರಸನ್ನ ಮತ್ತು ಎನ್.ಸಿ. ನಮೃತ. ಈ ಒಂಭತ್ತು ಬಾಲೆಯರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಿದ್ದರು.
ಹಿಮ್ಮೇಳದ ಕಲಾವಿದರು: ವಿದುಷಿ ರಾಧಿಕಾ ಪಡುವಾಲ್ (ಗಾಯನ), ವಿದುಷಿ ಸೋನಿಯಾ ಪಡುವಾಲ್ (ನಾಟ್ಟುವಾಂಗಮ್), ವಿದ್ವಾನ್ ಗಿರಿಧರ್ (ಮೃದಂಗ), ವಿದ್ವಾನ್ ಎನ್.ಆರ್. ಕೃಷ್ಣಭಟ್ (ಕೊಳಲು), ವಿದ್ವಾನ್ ಕಾರ್ತೀಕ್ ವೈಧತ್ರಿ (ರಿದಂ ಪ್ಯಾಡ್), ಮತ್ತು ಮಾ|| ಅಚ್ಯುತ್ ಜಗದೀಶ್ (ವೀಣಾ) ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೆಂಕಟೇಶ್ ಬಾಬು (ಪ್ರಭಾತ್ ವಸ್ತ್ರ ವೈಭವ್) ಆಗಮಿಸಿದ್ದರು. ನಾಗಜ್ಯೋತಿ ಹೆಬ್ಬಾರ್ ನಿರೂಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ