ವಿಜಯನಗರ: ಇಂಡೋ-ಅಮೆರಿಕನ್ ಡಿಗ್ರೀ ಕಾಲೇಜು, ಬಳ್ಳಾರಿ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರ ಸಹಯೋಗದೊಂದಿಗೆ ನಕ್ಷತ್ರ ಎಲ್ ಆರ್ ಹೋಟೆಲ್ನಲ್ಲಿ “Students Excellence Programme” on Mapping out Your Path to Professional Success” ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕುಲಪತಿ ಪ್ರೊ. ಎಂ ಮುನಿರಾಜು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಕುಲಸಚಿವ ರುದ್ರೇಶ ಎಸ್ ಎನ್ ಕೆಎಎಸ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಕಾಲೇಜಿನ ಆಡಳಿತ ಮಂಡಳಿಯ ಛೇರ್ಮಾನ್ಗಳಾದ ಪಿ. ಹೆಚ್ ನಾಯ್ಡು, ಕಾಲೇಜಿನ ಪ್ರಾಂಶುಪಾಲ ಶೇಖ್ ಸಲೀಮ್ ಬಾಷಾ, ಕಾಲೇಜಿನ ಉಪ ಪ್ರಾಚಾರ್ಯ ಸುಧೀರ್ ಕುಮಾರ್, ರಾಜೇಶ್, ರಾಜಾ, ಪಿ.ಆರ್.ಓ, ಆಡಳಿತಾಧಿಕಾರಿ ಉದಯ್ ಭಾಸ್ಕರ್ ಉಪಸ್ಥಿತರಿದ್ದರು.
ಕುಲಪತಿ ಪ್ರೊ,ಮುನಿರಾಜುರವರು ಮಾತನಾಡಿ, “Students Excellence Programme” on Mapping out Your Path to Professional Success”ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಜಿ ಪಿ ದಿನೇಶ್ ಪ್ರಾಧ್ಯಾಪಕರು ವಿಶ್ರೀಕೃವಿ ಬಳ್ಳಾರಿ, ಡಾ. ಅರ್ಚನಾ ಹೆಚ್ ಎನ್, ಸಹ ಪ್ರಾಧ್ಯಾಪಕರು, ವಿಶ್ರೀಕೃವಿ ಬಳ್ಳಾರಿ, ಡಾ ನಿರ್ಮಲಾ ಜೆ ಸಹಾಯಕ ಪ್ರಾಧ್ಯಾಪಕರು, ವಿಶ್ರೀಕೃವಿ ಬಳ್ಳಾರಿ ಹಾಗೂ ಡಾ. ಸುನೀಲ್ ಕುಮಾರ್ ಎಂ ಎಸ್, ಸಹಾಯಕ ಪ್ರಾಧ್ಯಾಪಕರು, ವಿಶ್ರೀಕೃವಿ ಬಳ್ಳಾರಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಕುರಿತು ಮನವರಿಕೆ ಮಾಡಿಕೊಟ್ಟರು.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು, ಕಾರ್ಯಾಗಾರ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಪ್ರಾಂಶುಪಾಲ ಶೇಖ್ ಸಲೀಮ್ ಬಾಷಾರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ