ಹುಬ್ಬಳ್ಳಿ: ಹುಬ್ಬಳ್ಳಿಯ ರಾಜಪೂತ ಸಮಾಜದಿಂದ ಶ್ರೀ ಮಹಾರಾಣಾ ಪ್ರತಾಪ್ ಸಿಂಹರ 485 ನೆಯ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಅಪ್ರತಿಮ ವೀರ, ಸ್ವಾಭಿಮಾನಿ, ಶೌರ್ಯದ ಪರಾಕಾಷ್ಠೆ ಯನ್ನು ಮೆರೆದ ಮಹಾರಾಣಾ ಪ್ರತಾಪ್ರು ನಮಗೆಲ್ಲರಿಗೂ ಪ್ರೇರಣೆ. ಆದರೆ ಸ್ವಾತಂತ್ರ್ಯದ ನಂತರ ಮಹಾರಾಣಾ ಪ್ರತಾಪ್ ರ ಜೀವನದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಿಲ್ಲ. ಮಹಾರಾಣಾರನ್ನು ಗೆಲ್ಲಲಾಗದ ಅಕ್ಬರನ ಬಗ್ಗೆ ಹೆಚ್ಚು ಹೇಳಲಾಯಿತು. ಹಳದಿಘಾಟ ಯುದ್ದದಲ್ಲಿಯೂ ಮೊಘಲರ ಸೈನ್ಯಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಸಮಗ್ರ ಹಿಂದೂ ಸಮಾಜದ ಏಳ್ಗೆಗಾಗಿ ಮಹಾರಾಣಾ ಶ್ರಮಿಸಿದರು. ಇತ್ತೀಚಿನ ಆಪರೇಷನ್ ಸಿಂದೂರ ಇರಬಹುದು ಈ ಹಿಂದೆ ನಡೆದ ಎಲ್ಲಾ ಯುದ್ದಗಳಲ್ಲಿ ನಮ್ಮ ಸೈನ್ಯದ ರಜಪೂತ ರೆಜಿಮೆಂಟ್ ಹೆಚ್ಚಿನ ಶೌರ್ಯ ಮೆರೆದು ಸಾವಿರಕ್ಕೂ ಹೆಚ್ಚು ಸೇವಾ ಮೆಡಲ್ಗಳನ್ನು ಪಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ IAS ಪರೀಕ್ಷೆಯಲ್ಲಿ ದೇಶಕ್ಕೆ 206 ಸ್ಥಾನವನ್ನು ಪಡೆದ ಕು. ಇಸಿಕಾ ಸಿಂಗ್ ಅವರನ್ನು ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅವರು ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳಿಸಿಕೊಳ್ಳಬೇಕು. ಸೋಲನ ಸವಾಲಾಗಿ ಸ್ವೀಕರಿಸಬೇಕು. ನಿರಂತರ ಪ್ರಯತ್ನ, ಪರಿಶ್ರಮ ಅವಶ್ಯ. ಬಡತನದಲ್ಲಿ ಬೆಳೆದ ಅಬ್ದುಲ್ ಕಲಾಂ ಅವರು ತಮ್ಮ ಪರಿಶ್ರಮ, ಪ್ರತಿಭೆಯಿಂದ ದೇಶದ ರಾಷ್ಟಪತಿ ಆದರು.ಮನೆಯವರ ಬೆಂಬಲ ಕೂಡ ನನಗೆ ಬಹಳ ಚೆನ್ನಾಗಿ ಸಿಕ್ಕಿತು. ದೇಶ ಸೇವೆಯನ್ನು ನಾನು ಪ್ರಾಮಾಣಿಕತೆಯಿಂದ ಮಾಡುತ್ತೇನೆ ಎಂದು ಹೇಳಿದರು.
ಮೆರವಣಿಗೆ ಉದ್ಘಾಟನೆಯನ್ನು ಸುಭಾಸಸಿಂಗ ಜಮಾದಾರ ಮಾಡಿದರು. ಕಾರ್ಯಕ್ರಮದಲ್ಲಿ ಪಿ.ಎಚ್. ಡಿ ಪದವಿ ಶ್ರೀಮತಿ ಆಶಾ ಬಾತಖಂಡೆ ಮತ್ತು ಶ್ರೀ ವಿನಾಯಕಸಿಂಗ ರಜಪೂತ ಅವರನ್ನು ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸ್ವಾಗತ ಪರಿಚಯವನ್ನು ಸಮಾಜದ ಅಧ್ಯಕ್ಷ ರಾದ ಶ್ರೀ ರಾಮಸಿಂಗ ರಜಪೂತ, ನಿರ್ವಹಣೆಯನ್ನು ಉದಯಸಿಂಗ ಹಜಾರೆ, ವಂದಾನಾರ್ಪಣೆಯನ್ನು ಕಾರ್ಯದರ್ಶಿ ಹನುಮಂತ ಸಿಂಗ ಬಾತಖಂಡೆ ಮಾಡಿದರು.
ಲಕ್ಷಣ ಗಾಂಡಗಳೇಕರ, ಸುಮೀತ ಕಲ್ಲೂರ, ಕಿರಣಸಿಂಗ ರಜಪೂತ, ರಾಜಾರಾಮಸಿಂಗ ರಾಜಪೂತ, ಪ್ರತಾಪಸಿಂಗ ಹಜಾರೆ, ಶ್ರೀಮತಿ ಶೋಭಾ ಕಿಲ್ಲೇದಾರ, ಶ್ರೀಮತಿ ರೂಪಾ ಜಮಾದಾರ, ಶ್ರೀಮತಿ ಆಶಾ ಮತ್ತು ಲತಾ ರಾಜಪೂತ, ಎಂ. ಆರ್. ರಾಜಪೂತ, ಅಮರಸಿಂಗ ರಾಜಪೂತ, ನಾರಾಯಣಸಿಂಗ ರಾಜಪೂತ, ಬಲದೇವ ಠಾಕೂರ್, ಶ್ರೀನಿವಾಸ ಸಿಂಗ ರಾಜಪೂತ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ