ದಾವಣಗೆರೆ: “ಕಾವ್ಯ ಕುಂಚ” 5ನೇ ಭಾಗದ ಕವನ ಲೋಕಾರ್ಪಣೆ

Upayuktha
1 minute read
0


ದಾವಣಗೆರೆ:
ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ “ಕಾವ್ಯ ಕುಂಚ” 5ನೇ ಭಾಗದ ಕವನ ಸಂಕಲನ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಪುಸ್ತಕ ಮನೆಯ ಗ್ರಂಥಾಲಯದಲ್ಲಿ ಲೋಕಾರ್ಪಣೆ ಸಮಾರಂಭ ಯಶಸ್ವಿಯಾಗಿ ನಡೆಯಿತು ಎಂದು ಕವನ ಸಂಕಲನದ ಪ್ರಧಾನ ಸಂಪಾದಕಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಪುಸ್ತಕ ಮನೆ ಬಳಗದ ಅಧ್ಯಕ್ಷ ಸದಾಶಿವ ಹರಪಾಳೆ ಕವನ ಸಂಕಲನ ಲೋಕಾರ್ಪಣೆ ಮಾಡಿದರು. ಪಿ.ಕೆ.ಪಿ.ಎಸ್. ಅಧ್ಯಕ್ಷ ರೇವಣಸತ್ತಿ, ನಿರ್ದೇಶಕ ಕೇದಾರಿ ವಳಸಂಗ, ಗ್ರಾಮ ಪಂಚಾಯಿತಿ ಸದಸ್ಯ ತುಕರಾಂ ದೇವಖಾಎ, ಸಿಕಂದರ್ ಮುಜಾವರ್, ಸೋಮಣ್ಣ ಝರೆ, ಪತ್ರಕರ್ತರಾದ ಶಶಿ ಪುಂಡಿಫಲ್ಲೆ, ಪ್ರಕಾಶ್ ಬಿರಾದಾರ, ಶಿಕ್ಷಕರಾದ ವಿನಾಯಕ ಹಿರೇಮಠ, ಸುರೇಶ್ ಹಾಲಳ್ಳಿ, ಪುಸ್ತಕ ಮನೆಯ ಸದಸ್ಯರಾದ ಪುರಂದರ ನಾಟೀಕರ್, ಮಾಂತೇಶ್ ಭೋಸಲೆ ಸಹದೇವ ಸೂರ್ಯವಂದೆ, ಹಣಮಂತ ಗಬ್ಬೂರು ಸೈನಿಕರಾದ ಬಾಳೇಶ್ ಮರಗಾಳೆ, ಯುವ ಕವಿ ಬೀರಪ್ಪ ಡಂಬಳಿ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top