ಕೆನರಾ ಕಾಲೇಜಿನಲ್ಲಿ 'ಸಂಶೋಧನಾ ವಿಧಾನ' ಕಾರ್ಯಾಗಾರ

Upayuktha
0


ಮಂಗಳೂರು: ಕೆನರಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶ, ಮೂಲ ವಿಜ್ಞಾನ ವಿಭಾಗ ಹಾಗೂ ಗಣಕ ವಿಜ್ಞಾನ ವಿಭಾಗ ಜಂಟಿಯಾಗಿ 'ಸಂಶೋಧನಾ ವಿಧಾನ 'ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿತ್ತು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗೇಶ್ ಎಚ್ ಆರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ವಿಜ್ಞಾನ ವಿಷಯದಲ್ಲಿ ಸಂಶೋಧನಾ ಕಾರ್ಯವನ್ನು ಮಾಡುವಾಗ ಅದಕ್ಕೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಳ್ಳುವ, ಪರಿಶೀಲಿಸಿ ವಿಶ್ಲೇಷಿಸಿ ಪ್ರಕಟಿಸುವ ಬಗ್ಗೆ ಸೂಕ್ತ ವಿಚಾರಗಳನ್ನು ತಿಳಿಸಿದರು.


ಕೆನರಾ ಆಡಳಿತ ಮಂಡಳಿಯ ಪದಾಧಿಕಾರಿ ಬಿ ವಿಕ್ರಂ ಪೈ ಅಧ್ಯಕ್ಷತೆ ವಹಿಸಿದ್ದು ಸಂಶೋಧನಾ ಕಾರ್ಯ ಕೈಗೊಳ್ಳುವ ಬಗ್ಗೆ ಪ್ರಾಧ್ಯಾಪಕರಿಗೆ ಧೈರ್ಯ ತುಂಬಿದರು. ಐ ಕ್ಯೂ ಎ ಸಿ ಸಂಯೋಜಕಿ ಪ್ರೊ.ಪ್ರತಿಮಾ ಬಾಳಿಗ ಸ್ವಾಗತಿಸಿ, ಪ್ರೊ. ಬಬಿತ ಎಸ್ ವಂದಿಸಿದರು. ಪ್ರೊ. ಜಯಭಾರತಿ ಕೆ.ಪಿ ಅತಿಥಿಗಳನ್ನು ಪರಿಚಯಿಸಿದರು. ಆಶಾ ಕಿರಣ್ ಪಕ್ಕಳ ಪ್ರಸ್ತಾವಿಕವಾಗಿ ಮಾತನಾಡಿದರು. ವಿನುತಾ ನಿರೂಪಿಸಿದರು. ಕಾಲೇಜು ಪ್ರಾಂಶುಪಾಲೆ ಡಾ ಪ್ರೇಮಲತಾ ವಿ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ಉಪ ಪ್ರಾಂಶುಪಾಲೆ ಡಾ.ಕಲ್ಪನಾ ಪ್ರಭು ಉಪಸ್ಥಿತರಿದ್ದರು.


 ಡಾ ವಾಸುದೇವ ಐ ಎಸ್ ಇ ವಿಭಾಗ,ಎನ್ ಎಂ ಎ ಎಂ ನಿಟ್ಟೆ,  ಡಾ ಅರುಣ್ ಎಂ ಐಸ್ಲೂರ್  (ಎಫ್ ಆರ್ ಎಸ್ ಇ) ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು,ಎನ್ ಐ ಟಿ ಕೆ ಸುರತ್ಕಲ್,  ಡಾ.ಶಾಮ್ ಪ್ರಸಾದ್ ವಾರಿಜಾ ರಘು, ಸಂಶೋಧನ ಕೇಂದ್ರದ ಅಸೋಸಿಯಟ್ ಪ್ರೊಫೆಸರ್, ಯೆನಪೋಯ ಡೀಮ್ಡ್ ಟು ಬಿ ಯೂನಿವರ್ಸಿಟಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು ಎರಡು ದಿನಗಳ ಕಾರ್ಯಾಗಾರವನ್ನು ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top