ಉಡುಪಿ: ಭದ್ರಾವತಿಯಲ್ಲಿರುವ RAF 97 ಬೆಟಾಲಿಯನ್ ನಲ್ಲಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಸಂತುದೇವಿ ಇವರನ್ನು ಪೂಜ್ಯ ಪರ್ಯಾಯ ಶ್ರೀಪಾದರು ಶ್ರೀ ಕೃಷ್ಣಾನುಗ್ರಹರೂಪದಲ್ಲಿ ಪ್ರಸಾದವನ್ನು ನೀಡಿ ಅನುಗ್ರಹಿಸಿದರು. ಅಲ್ಲದೆ ಕೋಟಿ ಗೀತಾ ಲೇಖನ ದೀಕ್ಷೆಯನ್ನು ನೀಡಿದರು.
ಸಂತು ದೇವಿ ಅವರು ಹರಿಯಾಣದಲ್ಲಿ ಜನಿಸಿದ 1986ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಸೇರ್ಪಡೆಗೊಂಡಿದ್ದು ಲೇಡಿ ಸಿಂಗಮ್ ಎಂದು ಪ್ರಖ್ಯಾತಿಯನ್ನು ಪಡೆದಿದ್ದಾರೆ.
39 ವರ್ಷಗಳ ಸೇವೆಯಲ್ಲಿ 2005ರ ಜುಲೈ 5ರಂದು ಅಯೋಧ್ಯೆಯಲ್ಲಿ ನಡೆದ ಆತಂಕವಾದಿಗಳ ಆಕ್ರಮಣದ ಸಂದರ್ಭದಲ್ಲಿ 5 ಮಂದಿ ಆತಂಕವಾದಿಗಳನ್ನು ಹೊಡೆದುರುಳಿಸಿ ಈ ಕಾರ್ಯಕ್ಕೆ ರಾಷ್ಟ್ರಪತಿಗಳಿಂದ PPMG (ಪ್ರೆಸಿಡೆಂಟ್ ಪೊಲೀಸ್ ಮೆಡಲ್ ಫಾರ್ ಗ್ಯಾಲೆಂಟರಿ) ಸೇನಾಪದಕ ಪಡೆದಿದ್ದಾರೆ.
ಕಾಶ್ಮೀರದ ಲಾವೇಪುರದಲ್ಲಿ 2020ರ ಫೆಬ್ರವರಿ 6 ರಂದು ನಡೆದ ಆತಂಕವಾದಿ ಕಾರ್ಯಾಚರಣೆಯಲ್ಲಿ ಮೂವರು ಆತಂಕವಾದಿಗಳನ್ನು ಹತ್ಯೆಗೈದು ಒಬ್ಬ ಆತಂಕವಾದಿಯನ್ನು ಬಂಧಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿ, ಅದಕ್ಕಾಗಿ D. G. Disk ಪದಕವನ್ನು ಹಾಗೂ ಇನ್ನಿತರ ಸೇನಾ ಪದಕಗಳ ಗೌರವವನ್ನು ಪಡೆದಿದ್ದಾರೆ. ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ಅಸ್ಸಾಂ, ಮಣಿಪುರ, ಮಧ್ಯಪ್ರದೇಶ ಮುಂತಾದೆಡೆ ಕಾರ್ಯ ನಿರ್ವಹಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ