ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ 75ನೇ ವರ್ಷದ ಮಹತ್ವದ ಘಟ್ಟದಲ್ಲಿ ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್ ಮೂಲಕ ಭಾರತದ ಭವಿಷ್ಯವನ್ನು ರೂಪಿಸುವ ತನ್ನ ಬದ್ಧತೆಯನ್ನು ಹಿಂದುಜಾ ಸಮೂಹ ಪುನರುಚ್ಚರಿಸಿದೆ, ಇದು ನಿರಾಶ್ರಿತರ ಮಕ್ಕಳಿಗೆ ಪ್ರಾಥಮಿಕ ಶಾಲೆಯಾಗಿ ಆರಂಭವಾದ ಸಂಸ್ಥೆ ಇಂದು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕಾಲೇಜು ಆಗಿ ಬೆಳೆದಿದೆ. ಇದೀಗ ಸಂಸ್ಥೆ ಸ್ವಾಯತ್ತ ವಿಶ್ವವಿದ್ಯಾಲಯವಾಗುವತ್ತ ಮುನ್ನಡೆಯುತ್ತಿದೆ.
ಹಿಂದೂಜಾ ಫೌಂಡೇಶನ್ ಮೂಲಕ ಈ ಸಮೂಹವು ಭಾರತದಾದ್ಯಂತ ಶಾಲೆಗೆ ರಸ್ತೆ ಮತ್ತು ಜೀವನೋಪಾಯದಂತಹ ಸೌಲಭ್ಯ ಕಲ್ಪಿಸಿಕೊಡುವ ಮೂಲಕ 7 ಲಕ್ಷ ವಿದ್ಯಾರ್ಥಿಗಳನ್ನು ಪ್ರೇರಿಪಿಸುತ್ತದೆ. 2030 ರ ವೇಳೆಗೆ 10 ಲಕ್ಷ ವಿದ್ಯಾರ್ಥಿಗಳನ್ನು ಸಶಕ್ತರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಾಕಿಕೊಂಡಿದೆ ಎಂದು ಹಿಂದುಜಾ ಫೌಂಡೇಶನ್ನ ಅಧ್ಯಕ್ಷರಾದ ಅಶೋಕ್ ಹಿಂದುಜಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಗವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನ್ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು. ದೇಶದ ಶಿಕ್ಷಣ ಸನಾತನತೆಯ ಆಧಾರದಲ್ಲಿ ದೇಶದ ಸಂಸ್ಕøತಿ ಮತ್ತು ಶಿಕ್ಷಣದ ಭಾಗವಾಗಿರಬೇಕು ಎಂದು ಅವರು ಕರೆ ನೀಡಿದರು. ಅಧ್ಯಕ್ಷ ಪೌಲ್ ಅಬ್ರಹಾಂ ಉಪಸ್ಥಿತರುದ್ದರು,
ಹಿಂದೂಜಾ ಕಾಲೇಜು 30 ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತದೆ ಮತ್ತು 2023-24 ರಲ್ಲಿ ನ್ಯಾಕ್ ಎ+ ಮಾನ್ಯತೆಯನ್ನು ಸಾಧಿಸಿದೆ. 2022 ರಲ್ಲಿ ಸ್ವಾಯತ್ತ ಸ್ಥಾನಮಾನವನ್ನು ನೀಡಲಾಯಿತು, ಕಾಲೇಜು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ನೊಂದಿಗೆ ವಿದ್ಯಾರ್ಥಿಗಳನ್ನು ಭವಿಷ್ಯ-ಸಿದ್ಧ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತಾ ಬಂದಿದೆ .
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ