ಬಳ್ಳಾರಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಶಿಕ್ಷಕರು ವಿದ್ಯಾರ್ಥಿನಿ ವೃಂದದವರ ಸಮ್ಮುಖದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಡಾ.ಶೋಭಾರಾಣಿ ವಿ.ಜೆ. ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕಾಲೇಜಿನ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ್, ಉಪಕಾರ್ಯದರ್ಶಿ ಯಾಲ್ಪಿಮೇಟಿ ಪಂಪನಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಮುಖ್ಯಅತಿಥಿ ಡಾ.ಶೋಭಾರಾಣಿವಿ.ಜೆ., ಐಪಿಎಸ್ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತ “ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡದೆ ವ್ಯಾಸಂಗವನ್ನು ಪೂರೈಸಿ ಒಳ್ಳೆಯ ಅಂಕಗಳನ್ನು ಪಡೆದು ಅವರು ತಮ್ಮ ಕಾಲಮೇಲೆ ನಿಂತುಕೊಳ್ಳಬೇಕೆಂದು ಮಾತನಾಡಿದರು. ಹಾಗೂ ಲಿಂಗ ಸಮಾನತೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.
ಈಸಮಾರಂಭದಲ್ಲಿ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಕಾಲೇಜಿನ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ್ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ವ್ಯಾಸಂಗದಲ್ಲಿ ಒಳ್ಳೆಅಂಕಗಳನ್ನು ಪಡೆದು ಉತ್ತೀರ್ಣರಾಗುವಂತೆ ಹೇಳಿದರು.
ವಿವಿಸಂಘದ ಉಪಕಾರ್ಯದರ್ಶಿ ಯಾಲ್ಪಿ ಮೇಟಿ ಪಂಪನಗೌಡನವರು ಸಭೆಯನ್ನು ಉದ್ದೇಶಿಸಿ ಮಹಿಳಾ ಸಬಲೀಕರಣದ ಬಗ್ಗೆಮಾತನಾಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಟಿ. ಹನುಮಂತರೆಡ್ಡಿ ಅವರು ಸಭೆಯನ್ನುದ್ದೇಶಿಸಿ ಶುಭಕೋರಿದರು.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸಮಾಡುತ್ತಿರುವ ಉನ್ನತ ಡಾಕ್ಟರೇಟ್ ಪದವಿ ಪಡೆದವರು ಅಲ್ಲದೆ ವಿಶೇಷ ಸಾಧನೆಗಳನ್ನು ಮಾಡಿರುವ ಹಾಗೂ ಸಂಶೋಧನೆ ನಿಧಿಗಳನ್ನು ತಂದಿರುವ ಮಹಿಳೆಯರಾದ ಡಾ.ಸುವರ್ಣ ಪಾಟೀಲ್, ಡಾ.ರಾಕಿಪಾಟೀಲ್, ಡಾ.ಶ್ರೀದೇವಿ ಮಾಲಿ ಪಾಟೀಲ್, ಡಾ.ಶಿಲ್ಪಾ ಪಾಟೀಲ್ ಗೂಡಾ. ಸವಿತಾ ಸೋನೋಲಿ, ಡಾ.ಪ್ರಭಾವತಿ, ವಾಣಿ, ಡಾ.ಸಪ್ನಾಬಿ.ಕುಲಕರ್ಣಿ, ಚೈತ್ರಾ ಅವರನ್ನುಸನ್ಮಾನಿಸಲಾಯಿತು.
ಗಂಗಾಸಜ್ಜನ ಹಾಗೂ ಉಮಾ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಡಾ.ಎಂ ಎಸ್ ಶೋಭಾ ಹಾಗೂಡಾ. ಚಿನ್ನಾ ವಿ.ಗೌಡರು ಸಂಚಾಲಕರಾಗಿ ನಿರ್ವಹಿಸಿದರು, ಕಾರ್ಯಕ್ರಮಕ್ಕೆ ಡಾ.ಕೋರಿ ನಾಗರಾಜ್, ಡಾ.ಭಾಗ್ಯ, ಡಾ.ಪ್ರಶಾಂತ್, ಡಾ.ಕೊಟ್ರೇಶ್ ಮತ್ತಿತರರು ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ