ಹೆಣ್ಣೆಂದರೆ ಹುಟ್ಟಿದ ಮನೆ, ಗಂಡನ ಮನೆ ಎರಡನ್ನೂ ಬೆಳಗುವವಳು: ಗಾಲಿ ಲಕ್ಷ್ಮೀ ಅರುಣ

Upayuktha
0

 


ಬಳ್ಳಾರಿ: ಹೆಣ್ಣನ್ನು ಭೂಮಿ ತೂಕದ ಸಹನೆಗೆ ಹೋಲಿಸುತ್ತಾರೆ.  ಹೆಣ್ಣೆಂದರೆ ಹುಟ್ಟಿದ ಮನೆ, ಹಾಗೂ ಸೇರಿದ ಮನೆ ಎರಡನ್ನೂ ಬೆಳಗುವವಳು ಎಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು  ಗಾಲಿ ಲಕ್ಷ್ಮಿ ಅರುಣ ರೆಡ್ಡಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಳ್ಳಾರಿ ಕುರಹಟ್ಟಿ ಗಣೇಶ ಪಾರ್ಕ್  ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇವತ್ತಿನ ದಿನಮಾನಗಳಲ್ಲಿ ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ ಇದ್ದರೆ ಸಾಕು ಎನ್ನುವ ತಂದೆ ತಾಯದಿರುಗಳು ಇದ್ದಾರೆ, ಆದರೆ ಆರತಿಗೆಂದು ಹುಟ್ಟಿದ ಹೆಣ್ಣು ಮಗಳು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ  ಮಹಿಳೆಯರು ಮುಂದಿದ್ದಾರೆ.


ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ರಂಗಭೂಮಿ& ಜಾನಪದ ಕ್ಷೇತ್ರದಲ್ಲಿ,ಸರಕಾರಿ ಇಲಾಖೆಗಳಲ್ಲಿ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರ ಹೀಗೆ ವಿವಿಧ  ಕ್ಷೇತ್ರಗಳಲ್ಲಿ  ಮಹಿಳೆಯರು ಸಾಧನೆಯ ಮಟ್ಟದಲ್ಲಿ ಉನ್ನತ ಪದವಿಯನ್ನು ಪಡೆದಿದ್ದಾರೆ ಎಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಗಾಲಿ  ಲಕ್ಷ್ಮೀ ಅರುಣಾ ಅಮ್ಮನವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು. 


ಪ್ರಸ್ತುತ ನಮ್ಮ ಸಮಾಜದಲ್ಲಿ ಇನ್ನೂ ಅದೆಷ್ಟು ಮಹಿಳೆಯರು ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಮಾಹಿತಿಯ ಕೊರತೆಯಿಂದಾಗಿ ಸ್ವತಂತ್ರವಾಗಿ ಬದುಕಲು ವಂಚಿತರಾಗಿರುವವರು ಸಾಕಷ್ಟು ಮಹಿಳೆಯರು  ಅನ್ಯಾಯಕ್ಕೆ ಒಳಗಾಗಿದ್ದಾರೆ. ಅವರಿಗೆ ಕಾನೂನಿನ ಅರಿವಿನ ಕೊರತೆ ಇದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು ಸ್ವತಂತ್ರವಾಗಿ ಬದುಕಲು ಕಲಿಯಬೇಕು. ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬರಬೇಕು. 


ಮಹಿಳೆಯರ ಉನ್ನತೀಗಾಗಿ ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆದು ಮಹಿಳೆಯರು ಸಬಲೀಕರಣಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕರು ಲತಾ ಮೇಡಂ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತಿನೊಂದಿಗೆ ಎಲ್ಲಾ ಮಹಿಳೆಯರಿಗೂ ಲತ ಅವರು ಶುಭ ಹಾರೈಸಿದರು. 


ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ  ಕಾರ್ಯಕ್ರಮದ ಅಧ್ಯಕ್ಷರು ಡಾ ವಿ. ಹೇಮಾವತಿ ಅಮ್ಮನವರು ಸಮೃದ್ದಿ ಸಂತೃಪ್ತ ಸಬಲೀಕರಣ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಸ್ಥಾಪಿಸಿದ್ದಾರೆ. ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಮೂಲಕ ಪ್ರತಿ ವಾರ ಗ್ರಾಮೀಣ ಮಹಿಳೆಯರಿಗಾಗಿ ಅವರ ಜ್ಞಾನವೃದ್ದಿಗಾಗಿ ಸರಕಾರಿ ಸೌಲಭ್ಯಗಳು,ಆರೋಗ್ಯ. ನೈರ್ಮಲ್ಯ. ಸ್ವ ಉದ್ಯೋಗಗಳು ಹಾಗೂ ಮಾರುಕಟ್ಟೆ ಬಗ್ಗೆ ಮಹಿಳೆಯರಿಗೆ ಅನುಭವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಇದರಿಂದ ಅದೆಷ್ಟು ಮಹಿಳೆಯರು ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳಲು ಉತ್ತಮ ಮಾರ್ಗದರ್ಶನವಾಗಿದೆ  ಎಂದು ಬಳ್ಳಾರಿ ಜಿಲ್ಲಾ ನಿರ್ದೇಶಕರು ರೋಹಿತಾಕ್ಷ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 


ಬಹು ಮುಖ್ಯವಾಗಿ ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅದ್ಭುತ ಹಾಗೂ ಅಚ್ಚುಕಟ್ಟಾಗಿ ನಿರ್ವಹಣೆ ಮತ್ತು ನಿರೂಪಣೆ ಮಾಡಿದ ಬಳ್ಳಾರಿ ಜಿಲ್ಲೆಯ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಕೇಂದ್ರ ಕಾರಾಗೃಹದ ಸಲಹಾ ಸಮಿತಿಯ ಸದಸ್ಯರು ಆದ ರೂಪ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.


ವೆಂಕಟೇಶ ಪಟಗಾರ್, ಕ್ಷೇತ್ರ ಯೋಜನಾಧಿಕಾರಿಗಳು ,ರಾಕಿ ಮುರಳೀಧರ್,ಲೀಲಾವತಿ ಗುಲಾಬಿ. ಮಹಮ್ಮದ್ ರಫೀಕ್ ಗಾಂಧಿನಗರ ವಲಯದ ಮೇಲ್ವಿಚಾರಕರು. ಗೌಸೀಯಾ ಅಹಂಬಾವಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು. ಹಾಗೂ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top