ಹಾಸನ: ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ, ಹಾಸನ ಇವರು ಶ್ರೀಮತಿ ಸಾವಿತ್ರಿ ಬಿ.ಗೌಡ ಇವರ ಪ್ರಾಯೋಜಕತ್ವದಲ್ಲಿ ಮಾರ್ಚ್ 2ರ ಭಾನುವಾರ ಸಂಜೆ 3.00 ಗಂಟೆಗೆ ಸರಿಯಾಗಿ 327ನೇ ತಿಂಗಳ ಸಾಹಿತ್ಯ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಸ್ಥಳ: ವಿದ್ಯುತ್ ನಗರ, 2ನೇ ಕ್ರಾಸ್, ವರ್ಷ ಪಾರ್ಕ್ ಹತ್ತಿರ, ಆಕಾಶವಾಣಿ ಎದುರು, ಶ್ರೀನಿಧಿ ಗ್ರಾನೈಟ್ ಮತ್ತು ವಿದ್ಯಾನಿಕೇತನ ಕಾಲೇಜು ನಡುವಿನ ಅಡ್ಡ ರಸ್ತೆ, ಸಾಲಗಾಮೆ ರೋಡ್, ಹಾಸನ.
ಹಾಸನದ ಹಿರಿಯ ಲೇಖಕಿ ಶ್ರೀಮತಿ ಸಾವಿತ್ರಿ ಬಿ. ಗೌಡ ಇವರ ಚೊಚ್ಚಲ ಕೃತಿ ಹೃದಯದ ಕವಿತೆ ಕುರಿತ್ತಾಗಿ ಶ್ರೀಮತಿ ಮಾಳೇಟಿರ ಸೀತಿಮ್ಮ ವಿವೇಕ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಾರ್ತಿ ಹಾಗೂ ಲೇಖಕಿ, ಹಾಸನ ಇವರು ಮಾತನಾಡುವರು. ಆಗಮಿತ ಕವಿಗಳಿಂದ ಕವಿಗೋಷ್ಠಿ,
ಗಾಯಕರಿಂದ ಭಾವಗೀತೆ, ಜಾನಪದ ಗೀತ ಗಾಯನ, ಕಲಾವಿದರಿಂದ ರಂಗಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಸಾಹಿತಿ ಗೊರೂರು ಅನಂತರಾಜು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ