ಬಳ್ಳಾರಿ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯ ನಿರ್ದೇಶಕರು ಮಾನ್ಯ ರೋಹಿತಾಕ್ಷ ಅವರು ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿ-1 ತಾಲ್ಲೂಕಿನ ಬಳ್ಳಾರಿ ಸಿಟಿ ವಲಯದ ಗಾಂಧಿನಗರ ಕಾರ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾಮೀಣ ಬ್ಯಾಂಕುಗಳಲ್ಲಿ ಸ್ವ ಸಹಾಯ ಸಂಘಗಳ ಖಾತೆಯನ್ನು ತರೆದು ಪ್ರತಿ ವಾರ ಮಾಡಿದ ಉಳಿತಾಯಕ್ಕೆ ಲಾಭಾಂಶವನ್ನು ಒದಗಿಸುವ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿರುವ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ದೇಶಕ್ಕೆ ಮಾದರಿಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ನಮ್ಮ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 8409 ಸ್ವ ಸಹಾಯ ಸಂಘಗಳಿಗೆ ಒಟ್ಟು 12 ಕೋಟಿ 38 ಲಕ್ಷ ಲಾಭಾಂಶ ವಿತರಣೆ ಮಾಡಲಾಗುತ್ತದೆ ಬಳ್ಳಾರಿ-1 ತಾಲ್ಲೂಕಿನ ವ್ಯಾಪ್ತಿಯಲ್ಲಿ 1345 ಸಂಘಗಳಿಗೆ ಒಟ್ಟು 2 ಕೋಟಿ 8 ಲಕ್ಷ ಲಾಭಾಂಶ ಮಂಜೂರಾತಿ ಆಗಿದ್ದು. ಬಳ್ಳಾರಿ ಸಿಟಿ ವಲಯದಲ್ಲಿ 165 ಸಂಘಗಳಿಗೆ 31 ಲಕ್ಷದ 16 ಸಾವಿರದ 993 ರೂ ಮೊತ್ತದ ಲಾಭಾಂಶ ವಿತರಣೆ ಮಾಡಲಾಯಿತು.
ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 16453 ಸಂಘಗಳ ಅಅ ಖಾತೆಯನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್. ಐಡಿಬಿಐ ಬ್ಯಾಂಕ್ ಗಳಲ್ಲಿ ತೆರೆಯಲಾಗಿದ್ದು ಇದುವರೆಗೂ ಸ್ವ ಸಹಾಯ ಸಂಘದ ಸದಸ್ಯರುಗಳಿಂದ ಒಟ್ಟು 12 ಕೋಟಿ 81 ಲಕ್ಷ ಉಳಿತಾಯವನ್ನು ಮಾಡಲಾಗಿದೆ. ಬಳ್ಳಾರಿ-1, ಬಳ್ಳಾರಿ-2, ಸಿರುಗುಪ್ಪ, ಸಿಂಧನೂರು, ಕಂಪ್ಲಿ, ಸಂಡೂರ ಹೀಗೆ ಆರು ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಸ್ವ ಸಹಾಯ ಸಂಘಗಳಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕುಗಳ ಮೂಲಕ ಅತೀ ಕಡಿಮೆ 14% ಬಡ್ಡಿದರದಲ್ಲಿ ಸ್ವ ಸಹಾಯ ಸಂಘಗಳಿಗೆ ಪ್ರಗತಿನಿಧಿ ಸಾಲವನ್ನು ನೀಡಲಾಗಿದೆ. ಇದರಿಂದ ಸ್ವ ಸಹಾಯ ಸಂಘದ ಸದಸ್ಯರು ಸ್ವಾವಲಂಬನೆ ಜೀವನವನ್ನು ಕಟ್ಟಿಕೊಂಡು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ.
ಇದಕ್ಕೆ ಮೂಲ ಕಾರಣಿಕರ್ತರಾದ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದಲ್ಲಿರುವ ಬಡವರ. ಮಹಿಳೆಯರ. ರೈತರ. ಆರ್ಥಿಕ ಸಾಮಾಜಿಕ. ಶೈಕ್ಷಣಿಕ ಹಾಗೂ ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿ ಮತ್ತು ಸಬಲೀಕರಣಕ್ಕಾಗಿ ಬಡವರಿಗೆ ಕಲ್ಪವೃಕ್ಷವಾಗಿ ಕಾರ್ಯನಿರ್ವಹಿಸುತ್ತದೆ.
ದೇಶದ ಪ್ರಮುಖ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಐಡಿಬಿಐ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕರ್ನಾಟಕ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕುಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಬ್ಯಾಂಕಿಂಗ್ ಪತಿನಿಧಿಯಾಗಿ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಬಳ್ಳಾರಿ ಜಿಲ್ಲೆಯ ನಿರ್ದೇಶಕರು ರೋಹಿತಾಕ್ಷ ಅವರು ಮಾಹಿತಿ ನೀಡಿದರು.
ಸ್ವ ಸಹಾಯ ಸಂಘಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಾಭಿವೃದ್ದಿ ಯೋಜನೆಯು ಬಡತನ ನಿರ್ಮೂಲನೆಗೊಳಿಸಲು ಸಾಧ್ಯವಾಗಿದೆ. ಎಸ್ ಕೆ.ಡಿ.ಆರ್ ಡಿ.ಪಿ. ಸಂಸ್ಥಯು ಸರಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವ ಕಾರಣ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇದರಿಂದಾಗಿ ಸರಕಾರದ ಹಲವು ಯೋಜನೆಗಳನ್ನು ಎಲ್ಲಾ ಕಡೆ ಸಮರ್ಪಕವಾಗಿ ಜಾರಿ ಮಾಡಲು ಸಾಧ್ಯವಾಗಿದೆ.
ಈ ಕೆಲಸ ಗ್ರಾಮೀಣ ಪ್ರದೇಶಗಳಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಮಾಡಲು ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಮೂಲಕ ಹಲವು ದಶಕಗಳಿಂದ ಪೂಜ್ಯ ಮಾರ್ಗದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳು ಜೊತೆಗೆ ಸ್ವ ಸಹಾಯ ಸಂಘಗಳ ಸ್ಥಾಪನೆ ಇದೀಗ ಲಾಭಾಂಶ ವಿತರಣೆ ದೇಶಕ್ಕೆ ಮಾದರಿಯಾಗಿದೆ ಎಂದು ಬಳ್ಳಾರಿ-1 ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ವೆಂಕಟೇಶ ಪಟಗಾರ್ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ-1 ತಾಲ್ಲೂಕಿನ ವಿಚಕ್ಷಣಾಧಿಕಾರಿಗಳು ಲಿಂಗರಾಜ್.ಬಳ್ಳಾರಿ ಸಿಟಿ ವಲಯದ ಮೇಲ್ವಿಚಾರಕರು ಸಂಜೀವ್ ಕುಮಾರ್.ಒಕ್ಕೂಟದ ಅಧ್ಯಕ್ಷರು ವನಿತಾ, ಒಕ್ಕೂಟದ ಪದಾಧಿಕಾರಿಗಳು, ಬಳ್ಳಾರಿ ಸಿಟಿ ವಲಯದ ಗಾಂಧಿನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ದುರ್ಗಮ್ಮ ಹಾಗೂ ಗಾಂಧಿನಗರ ವಯದ ಎಲ್ಲ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ