ಸಾಗರ: ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯಾಲಯದ ಸಂಯೋಗದಲ್ಲಿ 2025 ರ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ "ಜಯತಿ ಜಯ ಮಮ ಭಾರತಂ" ಎಂಬ ಗೀತೆಗೆ ಏಕಕಾಲದಲ್ಲಿ ಐದು ಸಾವಿರಕ್ಕೂ ಅಧಿಕ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಟ್ಟಿಗೆ ಈ ನೃತ್ಯ ಸಂಯೋಜನೆ ಸಾಕ್ಷಿಯಾಗಲಿದ್ದು, ಭಾರತದ ಎಲ್ಲಾ ರಾಜ್ಯಗಳ ವಿವಿಧ ಕಲಾವಿದರು ಭಾಗವಹಿಸುತ್ತಿದ್ದಾರೆ.
ಉತ್ತರ ಭಾರತದ ಸಾಂಸ್ಕೃತಿಕ ನಗರಿಯಲ್ಲಿ ದಕ್ಷಿಣ ಭಾರತದ ಕಲೆಗಳನ್ನು ಪ್ರದರ್ಶಿಸುವುದು ಸುಲಭದ ವಿಚಾರವಲ್ಲ ಅದನ್ನ ಸಾಧಿಸುವಲ್ಲಿ ಯಶಸ್ವಿಯಾಗಿರುವ ನಮ್ಮ ಕನ್ನಡಿಗರ ಬಗ್ಗೆ ನಾವೆಲ್ಲರೂ ಹೆಮ್ಮೆಪಡುವ ವಿಚಾರ. ಯಕ್ಷಗಾನ, ಡೊಳ್ಳುಕುಣಿತ ಮತ್ತು ಮಂಡ್ಯದ ಪೂಜ ಕುಣಿತ ಕಲಾವಿದರು ಪಾಲ್ಗೊಳ್ಳುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ "ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್" ಸಂಸ್ಥೆಯಿಂದ 80 ಜನ ಯಕ್ಷಗಾನ ಕಲಾವಿದರು ಹಾಗೂ 10 ಜನ ಡೊಳ್ಳು ಕುಣಿತದ ಕಲಾವಿದರು ಭಾಗವಹಿಸುತ್ತಿದ್ದಾರೆ.
ಕರ್ನಾಟಕ ತಂಡದ ನಾಯಕರು ಹಾಗೂ ಸೈಫಾ ಸಂಸ್ಥೆಯ ಸ್ಥಾಪಕರಾದ ಪುಷ್ಪಲತಾ, ಸಂಸ್ಥೆಯ ಕಾರ್ಯದರ್ಶಿ ಭಾರತಿ, ಯಕ್ಷಗಾನ ತರಬೇತುದಾರರಾದ ಸುಧಾಕರ್ ತುಮರಿ, ಸಜಿ ತುಮರಿ ಹಾಗೂ ಸಂಸ್ಥೆಯ ಸದಸ್ಯರಾದ ಮಹೇಶ್ ಮತ್ತು ಕಿರಣ್ ಈ ತಂಡಗಳನ್ನು ಮುನ್ನಡೆಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ