ದಾವಣಗೆರೆ: ರಂಗಕಲಾ ಆಕಾಡೆಮಿಯಿಂದ ಜನವರಿ 12 ರಂದು ಭಾನುವಾರ ನಗರದ ಪಿ.ಜೆ. ಬಡಾವಣೆಯ ಎ.ವಿ.ಕೆ.ಕಾಲೇಜು ರಸ್ತೆಯಲ್ಲಿರುವ ರಂಗ ಮಹಲ್ನ ಸಭಾಂಗಣದಲ್ಲಿ ವಿವಿಧ ವಯೋಮಾನದ ಮಕ್ಕಳಿಗೆ ಸ್ಥಳದಲ್ಲೇ ಉಚಿತವಾಗಿ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರಕಲಾ ತೀರ್ಪುಗಾರರು, ಹಿರಿಯ ಚಿತ್ರ ಕಲಾವಿದ ರಾಮಮೂರ್ತಿ ತಿಳಿಸಿದ್ದಾರೆ.
1ನೇ ತರಗತಿಯಿಂದ 4ನೇ ತರಗತಿಮ ಮಕ್ಕಳ ಒಂದು ವಿಭಾಗ 5 ರಿಂದ 7 ನೇ ತರಗತಿ ಮಕ್ಕಳ ವಿಭಾಗ, 8 ರಿಂದ 9ನೇ ತರಗತಿಗೆ ಒಂದು ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಯುವ ಚಿತ್ರ ಕಲಾವಿದೆ, ಅಕಾಡೆಮಿಯ ನಿರ್ದೇಶಕಿ ಕುಮಾರಿ ನೇಹಾ ಚನ್ನಗಿರಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9980868443, 9844467207 ಈ ಮೊಬೈಲ್ ಸಂಪರ್ಕಿಸಿ ಎಂದು ಆಕಾಡೆಮಿಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ