ಪರ್ಕಳ: ರಾಗ ಧನ ಉಡುಪಿ (ರಿ) ಸಂಸ್ಥೆಯ ವತಿಯಿಂದ ನ. 24ರಂದು 'ಸರಿಗಮ ಭಾರತಿ ಸಂಗೀತ ವಿದ್ಯಾಲಯ' ಪರ್ಕಳ, ಉಡುಪಿ ಇಲ್ಲಿ "ರಾಗರತ್ನ ಮಾಲಿಕೆ- 31" 'ರಂಜನಿ ಸಂಸ್ಮರಣಾ ಸಂಗೀತ ಕಛೇರಿ' ಜರಗಿತು.
ಜಿ. ವಾಸುದೇವ ಭಟ್ ಪೆರಂಪಳ್ಳಿ ಅವರು ರಂಜನಿ ಸಂಸ್ಮರಣೆಗೈದರು.
ಡಾ| ಕುಮಾರ ಸುಬ್ರಹ್ಮಣ್ಯ ಭಟ್ ಅಮೈ, ಡಾ| ಶ್ರೀಕಿರಣ್ ಹೆಬ್ಬಾರ್, ಪ್ರೊ| ವೀ. ಅರವಿಂದ ಹೆಬ್ಬಾರ್, ರಾಜಗೋಪಾಲ್ ಹಿರಿಯಡ್ಕ ಒಟ್ಟಾಗಿ ದೀಪ ಬೆಳಗಿದರು. ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಸಂಗೀತ ಗುರು ಉಮಾಶಂಕರಿ ಪ್ರಸ್ತಾವಿಸಿ, ಸ್ವಾಗತಿಸಿ, ನಿರೂಪಿಸಿದರು.
ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಪರ್ಕಳದ ನಿರ್ದೇಶಕ ಡಾ| ಉದಯ ಶಂಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಸಿದ್ಧ ಸಂಗೀತ ಕಲಾವಿದರಾದ ಹೆಮ್ಮಿಗೆ ಎಸ್.ಪ್ರಶಾಂತ್- ಬೆಂಗಳೂರು ಅವರು ಕಛೇರಿ ನಡೆಸಿಕೊಟ್ಟರು. ವಯೋಲಿನ್ ನಲ್ಲಿ ಚಾರುಲತಾ ರಾಮಾನುಜಂ ಬೆಂಗಳೂರು, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ