ಕವಿತೆ: ಅರ್ಥದ್ ಗಂಟು...

Upayuktha
0 minute read
0


ಕನ್ನಡ್ ಅಕ್ಸರ ಲೋಕದಾಗೆ

ರತ್ನನ್ ಎಸರು ಒಸ ಛಾಪು

ಯೆಂಡದ್ ಬುಂಡೆ ಕೈನಾಗಿದ್ರೆ

ತಗೋ ಪದಗಳ್ ಮತಾಪು


ಮಕ್ಕಳ್ ಬಾಯ್ನಲ್ಲೆಲ್ಲ ರತ್ನನ್ 

ಬಣ್ಣದ್ ತಗಡ್ನ ತುತ್ತೂರಿ

ಇಂಥ  ಪದ್ಯ ನಾಲ್ಗೆಲ್ ಬರದಿದ್ ಮ್ಯಾಗೆ

ಈ ನಾಡಲ್ ಜನ್ಮ ಯಾಕ್ರೀ?


ಕಣ್ ಕಣದಾಗೂ ರತ್ನನ್ ಪದ

ಪ್ರೀತಿಪ್ರೇಮ ತುಂಬಿದ್ ದೊನ್ನೆ

ಕನ್ನಡದ್ ಮುಂದೆ ಗಂಜಿ ಆಕೋ

ಪುಟ್ನಂಜಿ ರೂಪಾನೂ ಸೊನ್ನೆ!


ತನ್ದೇ ಲೋಕ ವುಟುಸ್ಕೊಂಡ ರತ್ನ 

ಪರ್ಪಂಚದಾಗೆ ತನ್ನೆ ತಾನು ಮರ್ತು

 ಬಡವರ ಬಾಸೆ ಒಸ ವರ್ಸೆ ತೋರ್ತು

ಯೆಂಡಕುಡುಕನ ಯಾಕರಣ ಬೆರ್ತು.


ಯೆಂಡ ಕುಡ್ದು ತೂರಾಡ್ತಿದ್ರೂ

ಸಾಲ್ನಲ್ ರೀತಿ ನೀತಿ ಉಂಟು!

ಬಿಡಿಸ್ತಾ ಹೋದ್ರೆ ತಿಳ್ಕೊಳ್ರ್ಗೆ

 ಸಿಗ್ತದೆ ಬಾರಿ ಅರ್ಥದ್  ಗಂಟು


- ಎಸ್.ಎಲ್. ವರಲಕ್ಷ್ಮೀಮಂಜುನಾಥ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top