ಬೆಂಗಳೂರು:ಶೇಷಾದ್ರಿಪುರಂ ಸಂಜೆ ಕಾಲೇಜು ಗಾಂಧೀ ಅಧ್ಯಯನ ಕೇಂದ್ರದ ವತಿಯಿಂದ ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ ಹಾಗೂ ‘ಸಮರ್ಪಣ’ ಶೇಷಾದ್ರಿಪುರಂ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತಾಶ್ರಯದಲ್ಲಿ ‘ಸಾಹಿತ್ಯರತ್ನ’ ಶ್ರೀ ಅನ್ನದಾನಯ್ಯ ಪುರಾಣಿಕ ಸ್ಮಾರಕದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಗರದ ಶೇಷಾದ್ರಿಪುರಂ ಸಂಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಾಹಿತ್ಯ ರತ್ನ ಶ್ರೀ ಅನ್ನದಾನಯ್ಯ ಪುರಾಣಿಕ ಅವರ ಶಿಸ್ತುಬದ್ಧ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳ ಬೇಕು ಎಂದು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಮಾತನಾಡಿ ಅನ್ನದಾನಯ್ಯ ಅವರಿಗೆ ಮೂಲ ಪ್ರೇರಣೆ ಗಾಂಧಿ, ಬುದ್ಧ, ಬಸವ. ಅವರು ಅದ್ಭುತವಾದ, ಸಾರ್ಥಕವಾದಂತಹ ಜೀವನವನ್ನು ನಡೆಸಿದರು. ಒಂದೇ ಕಾರ್ಯಕ್ರಮವನ್ನು ನಡೆಸಬೇಕಾದರೆ ಅವರು ಮಾಡುತ್ತಿದ್ದಂತಹ ರೂಪುರೇಷೆ ನಿಜಕ್ಕೂ ನಮಗೆಲ್ಲಾ ಮಾದರಿಯಾಗಿತ್ತು. ಪ್ರತಿಯೊಂದು ಕೂಡ ಶಿಸ್ತುಬದ್ಧವಾಗಿ ನಡೆಸುತ್ತಿದ್ದರು ಎಂದು ತಿಳಿಸಿದರು.
ಗಾಂಧಿ, ಉಪನಿಷತ್ತು, ಮತ್ತು ವಚನಗಳು ಈ ಮೂರಕ್ಕೂ ಅವಿನಾಭಾವ ಸಂಬಂಧವಿದೆ. ಉಪನಿಷತ್ತಿನಲ್ಲಿ ಅಡಕವಾಗಿರುವ ಮುಖ್ಯ ಅಂಶ, ವಚನಕಾರರು ಹೇಗೆ ಅದನ್ನು ತಮ್ಮ ಅನುಭವದಲ್ಲಿ ಹಿಡಿದಿಟ್ಟುಕೊಂಡು ನೋಡಿದರು ಎನ್ನುವುದು. ಇನ್ನು ಅನ್ನದಾನಯ್ಯ ಅವರ ಕೆಲಸ ಬಹಳಷ್ಟು ವಿಶೇಷತೆಯಿದೆ ಕೂಡಿದೆ ಎಂದು ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ ಮಲ್ಲೇಪುರಂ ಜಿ ವೆಂಕಟೇಶ ತಿಳಿಸಿದರು ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲ, ಗಾಂಧಿ ಶಾಂತಿ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಡಾ. ಎನ್ ಎಸ್ ಸತೀಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು ‘ವಚನ ಸಾಹಿತ್ಯ ಮತ್ತು ಉಪನಿಷತ್ತಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ .ಟಿ. ಎನ್ ವಾಸುದೇವ ಮೂರ್ತಿಯಾರು ಆಧ್ಯಾತ್ಮವನ್ನು ನಿರಾಕರಿಸುತ್ತಾರೋ, ಅವರಿಗೆ ನಾಯಕ ನರಕ ಕಾದಿರುತ್ತದೆ ಎನ್ನುತ್ತಾರೆ.
ಜಗತ್ತಿನ ಎಲ್ಲಾ ಅನುಭವಿಗಳು ಕೂಡ ಹೀಗೆ ಹೇಳುತ್ತಾರೆ.ನೀನು ಆಧ್ಯಾತ್ಮ ಅಥವಾ ಆಧ್ಯಾತ್ಮದ ಒಂದು ಜ್ಞಾನವನ್ನು ಪಡೆದ ಋಷಿಯನ್ನು, ಅನುಭಾವಿಯನ್ನು ನಿರಾಕರಿಸಿದರೆ ನೀನು ಸರ್ವನಾಶವಾಗುತ್ತೀಯಾ ಅಥವಾ ನಿನ್ನ ಬದುಕೇ ಶೂನ್ಯ. ನನಗಾದ ಅನುಭವವೇ ನಿನಗೆ ಆಗಬೇಕೆಂದು ಏನಿಲ್ಲ. ಇದು ಜಗತ್ತಿನ ನಿಯಮ ಕೂಡ ಅಲ್ಲ ಎಂದರು. ಕಾರ್ಯಕ್ರಮದಲ್ಲಿ ಸಾಹಿತ್ಯ ರತ್ನ ಅನ್ನದಾನಯ್ಯ ಪುರಾಣಿಕ ಅವರ ಮಗಳಾದ ಪ್ರೊ.ಚಂದ್ರಿಕಾ ಪುರಾಣಿಕ ಹಾಗೂ ಮಗ ಉದಯಶಂಕರ ಪುರಾಣಿಕ ಮತ್ತು ಮೊಮ್ಮಗಳು ದೀಪ್ತಿ ಪುರಾಣಿಕ , ಶೇಷಾದ್ರಿಪುರಂ ಸಂಜೆ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಸತ್ಯಮಂಗಲ ಮಹಾದೇವ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


