ದೇಶದ ಆರ್ಥಿಕ ಅಭಿವೃದ್ಧಿಯ ಅಳತೆಗೇೂಲು ಜಿಡಿಪಿಯಾಗಿರಬೇಕಾ? ತಲಾ ಆದಾಯವಾಗಿರಬೇಕಾ? ಈ ಪ್ರಶ್ನೆ ಬಹುಮುಖ್ಯವಾಗಿ ನನ್ನನ್ನು ಕಾಡಲು ಪ್ರಾರಂಭವಾಗಿದ್ದು ಮೊನ್ನೆ ಎಂಜಿಎಂ ಕಾಲೇಜಿನಲ್ಲಿ ನಡೆದ ಮಹಿಳಾ ಸಬಲೀಕರಣ ವಿಚಾರ ಸಂಕಿರಣದಲ್ಲಿ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮಾರ್ಪಳಿ ಗೇೂವಿಂದ ರಾವ್ ತಮ್ಮ ಉದ್ಘಾಟನಾ ಮಾತಿನಲ್ಲಿ ಎತ್ತಿದ ಕೆಲವೊಂದು ಮೂಲಭೂತ ಪ್ರಶ್ನೆಗಳು. ಪೂರ್ವಗ್ರಹ ಪೀಡಿತರಾಗದೆ ಆರ್ಥಿಕ ಚಿಂತನೆ ನಡೆಸ ಬೇಕಾದ ಅನಿವಾರ್ಯತೆ ಇದೆ ಅನ್ನಿಸುತ್ತದೆ.
ಭಾರತದ ಅಥವಾ ಯಾವುದೇ ದೇಶದ ಆರ್ಥಿಕ ಅಭಿವೃದ್ಧಿ ದೃಷ್ಟಿ ಕೇೂನ ಕೇವಲ ಜಿಡಿಪಿ ಒಂದರಿಂದಲೇ ಪರಿಗಣಿಸಲಾಗದು. ಇದನ್ನು ತಲಾ ಆದಾಯದಲ್ಲೂ ನೇೂಡಬೇಕಾದ ಅಗತ್ಯವಿದೆ. ಡಾ. ಎಂ. ಗೇೂವಿಂದ ರಾವ್ ಅಭಿಪ್ರಾಯಿಸಿದ ಪ್ರಕಾರ "ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತದೆ. ಓಕೆ, ಫೈನ್ ಒಪ್ಪಿಕೊಳ್ಳೇೂಣ ಆಗಲಿ ಒಳ್ಳೆಯದೆ. ಅಂದರೆ ಇದು ಜಿಡಿಪಿ ಪ್ರಮಾಣದಲ್ಲಿ ಇರಬಹುದು? ಆದರೆ ನಮ್ಮ ತಲಾ ಆದಾಯವನ್ನು ನೇೂಡಿದರೆ ಜಗತ್ತಿನ 197 ದೇಶಗಳ ಪೈಕಿ ನಾವು 145ನೇ ಸ್ಥಾನದಲ್ಲಿ ನಿಲ್ಲುತ್ತೇವೆ. ಹಾಗಾದರೆ ಭಾರತದ ಅಭಿವೃದ್ಧಿ ಅನ್ನುವುದರ ಅರ್ಥವೇನು? 2045ಕ್ಕೆ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಅನ್ನುವುದನ್ನು ಜನಸಾಮಾನ್ಯರು ಹೇಗೆ ಒಪ್ಪಿಕೊಂಡಾರು? ಈ ತಜ್ಞರು ಹೇಳಿದ ಪ್ರಕಾರ ನಮ್ಮ ತಲಾ ಆದಾಯ ಪ್ರಸ್ತುತ ವಿಶ್ವದಲ್ಲಿಯೇ 145 ಸ್ಥಾನದಲ್ಲಿ ನಿಂತಿದೆ ಅಂದರೆ ನಮ್ಮ ಸಮಗ್ರ ಅಭಿವೃದ್ಧಿ ಕುರಿತಾಗಿ ಮರು ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಅಂದರೆ ದೇಶದಲ್ಲಿ ಸಂಪತ್ತು ಕ್ರೇೂಡೀಕರಣವಾಗಿರಬಹುದು. ಈ ಸಂಪತ್ತು ಯಾರ ಕೈಯಲ್ಲಿ ಕೇಂದ್ರೀಕೃತ ಗೊಂಡಿದೆ ಅನ್ನುವುದು ಅಷ್ಟೇ ಮುಖ್ಯ.
ಆರ್ಥಿಕ ತಜ್ಞ ಡಾ.ಮಾರ್ಪಳಿ ಗೇೂವಿಂದರಾವ್ ಅವರ ಜತೆ ಲೇಖಕರು
ನಾವು ಚಿಕ್ಕಂದಿನಿಂದಲೂ ನಮ್ಮ ಭಾಷಣದಲ್ಲಿ ಹೇಳುತ್ತಿದ್ದ ಮಾತು ಕೂಡಾ ಇದೇ. "India is rich country inhabited by poor people". ಅಂದರೆ ನಮ್ಮ ಜಿಡಿಪಿ ಜಾಸ್ತಿ ಆಗಿದೆ. ಅಂದರೆ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗುತ್ತಿದ್ದಾರೆ ಅನ್ನುವ ಪ್ರಶ್ನೆ ಮತ್ತೆ ಅಭಿವೃದ್ಧಿಯ ಮಾತಿನ ನಡುವೆ ಕಾಡಲು ಶುರುವಾಗಿದೆ.
ಇದನ್ನೇ ಮುಂದಿಟ್ಟುಕೊಂಡು ಅವರು ಹೇಳಿದ ಮಾತೆಂದರೆ ನಮ್ಮ ಉತ್ಪಾದನಾ ಶಕ್ತಿ ಮತ್ತು ಉದ್ಯೋಗ ಸೃಷ್ಟಿ ಜಾಸ್ತಿಯಾಗಬೇಕು. ಆಗ ಮಾತ್ರ ಈ ಆರ್ಥಿಕ ಅಸಮಾನತೆ ಕಡಿಮೆ ಮಾಡಬಹುದು. ತಲಾ ಆದಾಯ ಕೂಡ ಜಾಸ್ತಿಯಾಗಬಹುದು. ಈ ಆರ್ಥಿಕ ಚಿಂತನೆ ತುಂಬಾ ವಾಸ್ತವಿಕ ಚಿಂತನೆ ಅನ್ನಿಸುತ್ತದೆ ಅಲ್ವೇ?
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ