ಉಡುಪಿ: ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸಾರ್ವಜನಿಕರೂ ಮುಕ್ತವಾಗಿ ಭಾಗವಹಿಸಲು ಅನುಕೂಲವಾಗಬೇಕೆಂಬ ಕಳಕಳಿಯಿಂದ ಈ ಸಂಕೀರ್ತನಾ ಯಜ್ಞವನ್ನು ಸಂಕಲ್ಪಿಸಿ ಗೀತಾಮಂದಿರದ ಮುಂಭಾಗದಲ್ಲಿ ತುಳಸೀ ಸಂಕೀರ್ತನೆಯನ್ನು ಉದ್ಘಾಟಿಸಿದರು.
ಕಲೌ ಸಂಕೀರ್ತನಪ್ರಾಯೈ: ಯಜಂತಿ ಸ್ಮ ಸುಮೇಧಸ: ಎಂಬ ಭಾಗವತದ ಸಂದೇಶದಂತೆ ಕಲಿಯುಗದಲ್ಲಿ ಸಂಕೀರ್ತನ ಯಜ್ಞ ಬಹುಮುಖ್ಯವಾಗಿದೆ.
ಅತಿ ಸುಲಭವಾಗಿ ಭಗವಂತನ ಪರಮಾನುಗ್ರಹವನ್ನು ಪಡೆಯಲು ಸುಲಭ ಮಾರ್ಗವಾಗಿದೆ. ಈ ಪವಿತ್ರವಾದ ಯಜ್ಞದ ಮಹತ್ವವನ್ನು ಶ್ರೀ ವಾದಿರಾಜಗುರು ಸಾರ್ವಭೌಮರು ಜನಸಾಮಾನ್ಯರಲ್ಲಿ ಸ್ಫೂರ್ತಿ ತುಂಬಿದರು. ಇದರ ಪ್ರಭಾವದಿಂದ ಸಂಕೀರ್ತನೆ ಇಂದು ಕರಾವಳಿಯ ಪ್ರದೇಶದಲ್ಲಿ ಮನೆ ಮನೆಗಳಲ್ಲಿ ವ್ಯಾಪಕವಾಗಿ ಕಂಗೊಳಿಸುತ್ತಿದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ನುಡಿದರು.
ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಕೀರ್ತನೆ ನಡೆಯಿತು. ಅನೇಕ ಭಕ್ತರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ