ರಾಷ್ಟ್ರೀಯ ವಿದ್ಯಮಾನಗಳ ಸಮಾಲೋಚನೆ
ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಲ್ಲಿ ಒಬ್ಬರಾದ ಸುರೇಶ್ ಭಯ್ಯಾಜಿ ಜೋಶಿಯವರು ಶುಕ್ರವಾರ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾದರು.
ದೇಶಾದ್ಯಂತ ನಡೆಯುತ್ತಿರುವ ಕೆಲವು ಅಚ್ಚರಿಯ ಘಟನೆಗಳು, ಬಾಂಗ್ಲಾ ದೇಶೀಯರ ಅಕ್ರಮ ನುಸುಳುಕೋರರ ಸಮಸ್ಯೆ ಮಣಿಪುರದಲ್ಲಿ ಶಾಂತಿ ಸುರಕ್ಷತೆ, ವಕ್ಫ್ ಬೋರ್ಡಿನ ಅವಾಂತರಗಳು ತರುತ್ತಿರುಚ ಆತಂಕ, ಕಾಶ್ಮೀರದ ಭಯೋತ್ಪಾದನೆ ಇತ್ಯಾದಿಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಇಂತಹ ಸಮಸ್ಯೆಗಳ ಪರಿಹಾರಕ್ಕೆ ಸಂಘದ ಹೆಜ್ಜೆಗಳು, ಸಂಘದ ಶತಾಬ್ದಿಯ ಕಾರ್ಯಕ್ರಮಗಳು, ಮುಂದಿನದಿನಗಳಲ್ಲಿ ಸನಾತನ ಧರ್ಮ ಮತ್ತು ರಾಷ್ಟ್ರದ ಹಿತರಕ್ಷಣೆಯ ಕೆಲಸಗಳಲ್ಲಿ ಸಾಧು ಸಂತರು ಮಠಾಧೀಶರು ವಹಿಸಬೇಕಾದ ಮಹತ್ವದ ಭೂಮಿಕೆಯ ಕುರಿತೂ ಭಯ್ಯಾಜಿಯವರು ವಿಚಾರ ವಿನಿಮಯ ನಡೆಸಿದರು.
ಶ್ರೀಗಳವರು ಹಮ್ಮಿಕೊಂಡ ಕೋಟಿ ಗೀತಾ ಲೇಖನ ಯಜ್ಞದಂತಹ ಅಭಿಯಾನಗಳು ಸಮಾಜದಲ್ಲಿ ಉದಾತ್ತ ಮೌಲ್ಯಗಳ ಸ್ಥಿರೀಕರಣಕ್ಕೆ ನೆರವಾಗಬಹುದೆಂದು ಆಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳು ಭಯ್ಯಾಜಿಯವರನ್ನು ಸಂಮಾನಿಸಿ ಅನುಗ್ರಹಿಸಿದರು. ಸಂಘದ ಹಿರಿಯರಾದ ಭಾರತ ಪರಿಕ್ರಮ ಯಾತ್ರೆಗೈದ ಸೀತಾರಾಮ ಕೆದಿಲಾಯ, ಸುಧೀರ್ ಜಿ, ಗುರುನಾಥ್ ಉಪಸ್ಥಿತರಿದ್ದರು.
ಮಠದ ದಿವಾನರಾದ ಎಂ ನಾಗರಾಜ ಆಚಾರ್ಯ, ಎಂ ಪ್ರಸನ್ನಾಚಾರ್ಯ ಭಯ್ಯಾಜಿ ಜೋಶಿಯವರನ್ನು ಬರಮಾಡಿಕೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ