ಪಾಲಕರು ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು: ವೀರೇಶ ಶಾಸ್ತ್ರಿಗಳು

Upayuktha
0




ತಿಮ್ಮಾಪೂರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿಯ ವಿಜಯ ಮಹಾಂತೇಶ್ವರ ಮೂಲಮಠದ ಪರಮತಪಸ್ವಿ ಲಿಂ. ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ 133 ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಚಿತ್ತರಗಿ ಮಠದಲ್ಲಿ ಗ್ರಾಮದ ಅಕ್ಕನ ಬಳಗದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ 8ನೇ ತರಗತಿಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಗುರುಮಹಾಂತ ಶ್ರೀಗಳು ವಹಿಸಿದರು. ಮುಖ್ಯ ಅತಿಥಿಗಳಾಗಿ ಪ್ರವಚನಕಾರರಾದ ವೀರೇಶ ಶಾಸ್ತ್ರಿಗಳು ವಹಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೋತೆ ಜೊತೆಗೆ ಮನೋವಿಕಾಸ, ಭೌತಿಕ ವಿಕಾಸಗಳು ತುಂಬುವುದರೊಂದಿಗೆ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮಾತ್ರ ಮಕ್ಕಳು ಪ್ರಭುದ್ಧತೆಗೆ ಬರಲು ಸಾಧ್ಯವಾಗುತ್ತದೆ. ಕಾರಣ ಮಕ್ಕಳನ್ನು ಆಚಾರ, ವಿಚಾರವಂತರನ್ನಾಗಿಸಲು ಪಾಲಕರು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕಾ ಬೇವೂರ ವಹಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ರೇಣುಕಾ ಮಾಚಾ ಕಾರ್ಯದರ್ಶಿ ವೆಂಕಮ್ಮ ಬೇವೂರ, ಖಚಾಂಚಿ ಈರಮ್ಮ ಕಲಾದಗಿಮಠ ಉಪಸ್ಥಿತರಿದ್ದರು.


ಸಾಂಸ್ಕೃತಿಕ ಕಾರ್ಯಕ್ರಮ ಬಗ್ಗೆ  ಮಕ್ಕಳಿಗೆ ಗೌರಮ್ಮ ನಾಲತವಾಡ, ರಕ್ಷಿತಾ ಮಳೆಣ್ಣವರ ಭಾಗ್ಯ ನಾಗರಡ್ಡಿ, ರತ್ನಾ ಪಾಟೀಲ, ಇವರುಗಳು ಚೈತನ್ಯ ತುಂಬಿದರು. ಸವಿತಾ ಸುಧೀರ ಪಾಟೀಲ ಸ್ವಾಗತಿಸಿದರು, ವಂದಿಸಿದರು. ಪ್ರಕೃತಿ ಹನಮಂತ ಪಾಟೀಲ ಸಾಂಸ್ಕ0ತಿಕ ಕಾರ್ಯಕ್ರಮದ ನಿರೂಪಿಸಿದರು. ವೈಶಾಲಿ ಮಹೇಶ ಬೇವೂರ ನಿರೂಪಿಸಿದರು.


ಪ್ರೇಕ್ಷಕರ ಮನ ಗೆದ್ದ ಹಾಡುಗಳು: ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿತ್ತರಗಿ ಗ್ರಾಮದ ವಿವಿಧ ಶಾಲೆಗಳ ಮಕ್ಕಳು ಜಾನಪದ, ಧಾರ್ಮಿಕ, ವಚನಗಳು, ಹಾಡುಗಳಾದ ಮಹಾಂತ ಜೋಳಿಗೆ (ಧಾರ್ಮಿಕ) ಉಘೇ ಉಘೇ ಮಹಾದೇವ, ವಿಜಯ ಮಹಾಂತನ ವಿಮಲ ಪಾದಕೆ ಧಾರ್ಮಿಕ ಗೀತೆ, ಭಾಗ್ಯದ ಬಳೆಗಾರ, ಹಸಿರು ಕಡ್ಡಿಯ ಸೀರೆ (ಜಾನಪದ) ಧರ್ಮವ ಬೆಳಗಿದೆ ಅಣ್ಣಾ ಬಸವಣ್ಣ (ಭಕ್ತಿಗೀತೆ ಜಾನಪದ) ಏನು ಕೊಡ ಏನು ಕೊಡಾವ ಹುಬ್ಬಳ್ಳಿ ಮಾಟದೆಂತಾ ಚಂದುಳ್ಳಿಕೊಡವಾ, ಚಲುವಯ್ಯ ಚಲ್ಲಿದರ ಮಲ್ಲಿಗೆಯ ಬಾಣ ಸುರೇರಿ ಮ್ಯಾಲೆ, ಇನ್ನೂ ಇತಕ ಹಾಡುವುದರ ಮೂಲಕ ಜನಮನ ರಂಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top