ಬಾರ್ಸಿಲೋನಾದಲ್ಲಿ ಕನ್ನಡ ತರಗತಿ: ಕಸಾಪ ಅಧ್ಯಕ್ಷ ಡಾ ಮಹೇಶ ಜೋಶಿ

Upayuktha
0


ಬಾರ್ಸಿಲೋನಾ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ವಿದೇಶದಲ್ಲಿ ಕನ್ನಡ ಕಲರವವನ್ನು ಹಂಚುವ ತಮ್ಮ ಯೋಜನೆಯ ಅಂಗವಾಗಿ ಯುರೋಪ್ ಪ್ರವಾಸದಲ್ಲಿದ್ದಾರೆ. ಇದರ ಅಂಗವಾಗಿ ಅವರು ಸ್ಪೇನ್ ದೇಶದ ವಾಣಿಜ್ಯ ನಗರಿ ಬಾರ್ಸಿಲೋನಾದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಎರಡೂ ಸಂಭ್ರಮಾಚರಣೆಗಳು ಸೇರಿದ "ದೀಪೋತ್ಸವ" ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 


ಈ ಕಾರ್ಯಕ್ರಮದಲ್ಲಿ ಬಾರ್ಸಿಲೋನಾದಲ್ಲಿರುವ ಭಾರತದ ಕೌನ್ಸಿಲ್ ಜನರಲ್ ಇಭಾಸ್ಕರ್ ಸುಂದರಮೂರ್ತಿ ಮತ್ತು ಸ್ಪೇನ್ ದೇಶದ ಸೆನೆಟರ್ ಆಗಿರುವ ಭಾರತ ಮೂಲದ ರಾಬರ್ಟ್ ಭಾಗವಹಿಸಿದ್ದರು. 


ಈ ಸಂದರ್ಭದಲ್ಲಿ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವನ್ನು ಒತ್ತಿ ಹೇಳಿ ಮಂಡ್ಯದಲ್ಲಿ ಆಯೋಜನೆ ಗೊಂಡಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನು ಆಹ್ವಾನಿಸಿದರು. 


ವಿದೇಶದಲ್ಲಿರುವ ಕನ್ನಡಿಗರನ್ನೂ ಒಳಗೊಳ್ಳುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇದೇ ಮೊಟ್ಟಮೊದಲ ಬಾರಿಗೆ ಮಾಡುತ್ತಿದ್ದಾರೆ ಎಂಬ ಮೆಚ್ಚುಗೆಯನ್ನು ಅಲ್ಲಿಯ ಎಲ್ಲರೂ ವ್ಯಕ್ತಪಡಿಸಿದರು. ಸ್ಪೇನ್ ಕನ್ನಡ ಕೂಟ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕವಾಗಿದೆ ಎಂದು ತಿಳಿಸಿದರು. 


ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಪೇನ್ ದೇಶದ ಆರ್ಥಿಕ ರಾಜಧಾನಿ ಬಾರ್ಸಿಲೋನಾ ನಗರದ ಕನ್ನಡ ಸಂಘದ ವತಿಯಿಂದ ನವೆಂಬರ್ 1ರಂದು ಶುಕ್ರವಾರ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಲಾಯಿತು. ಬಾರ್ಸಿಲೋನಾ ಸಂಸದ ರಾಬರ್ಟ್ ಮತ್ತು ಭಾರತೀಯ ರಾಯಭಾರ ಕಛೇರಿಯ ಇಂದುಶೇಖರ್ ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಕನ್ನಡಿಗರು ಈ ಸಂಭ್ರಮದಲ್ಲಿ ಭಾಗಿಯಾದರು, ಮತ್ತು ಖುಷಿಪಟ್ಟರು.


ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಬಂದಿರುವ ಕಾರಣಕ್ಕೆ ತಾವು ಕಾರ್ಯಕ್ರಮಕ್ಕೆ ಬಂದಿರುವುದಾಗಿ ಬಾರ್ಸಿಲೋನಾದಲ್ಲಿರುವ ಭಾರತದ ಕೌನ್ಸಿಲ್ ಜನರಲ್ ಇಭಾಸ್ಕರ್ ಸುಂದರಮೂರ್ತಿ ಹೇಳಿ ಹೊಸದಾಗಿ ರೂಪುಗೊಳ್ಳುತ್ತಿರುವ ಭಾರತ ರಾಯಭಾರ ಕಚೇರಿಯಲ್ಲಿ ಕನ್ನಡ ತರಗತಿ ನಡೆಸಲು ಜಾಗದ ಜೊತೆಗೆ ಎಲ್ಲ ಮೂಲ ಸೌಕರ್ಯವನ್ನು ಸಹಾ ಒದಗಿಸುವುದಾಗಿಯೂ ತಿಳಿಸಿದರು. ಈ ಆಹ್ವಾನವನ್ನು ಒಪ್ಪಿಕೊಂಡ ನಾಡೋಜ ಡಾ. ಮಹೇಶ್ ಜೋಶಿ ಅವರು ಸ್ಪೇನ್ ಕನ್ನಡ ಕೂಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಒಟ್ಟಾಗಿ ಕನ್ನಡ ತರಗತಿಗಳನ್ನು ನಡೆಸುವುದಾಗಿ ಹೇಳಿದರು. ಸ್ಪೇನ್ ನಲ್ಲಿನ  ಕನ್ನಡಿಗರನ್ನು ಒಟ್ಟುಗೂಡಿಸುವ ರಚನಾತ್ಮಕ ಕ್ರಮಗಳ ಕುರಿತು ಅವರು ಮಾತನಾಡಿದರು.


ಪುನೀತ್ ರಾಜಕುಮಾರ್ ಅವರ ಪವರ್ ಚಲನಚಿತ್ರ ಚಿತ್ರೀಕರಣಗೊಂಡ ಸ್ಥಳದಲ್ಲಿ ನಾಡೋಜ ಡಾ. ಮಹೇಶ್ ಜೋಶಿ ಅವರು ಪುನೀತ್ ಅವರನ್ನು ಸ್ಮರಿಸಿ ಗೌರವವನ್ನು ಅರ್ಪಿಸಿದರು. 


ಸ್ಪೇನ್ ದೇಶದಲ್ಲಿ ಕನ್ನಡ ಕಲರವ ಹರಡುವ ನಾಡೋಜ ಡಾ.ಮಹೇಶ ಜೋಶಿಯವರ ಯತ್ನ ಸಫಲವಾಗಿರುವುದಕ್ಕೆ ಸ್ಪೇನ್  ಕನ್ನಡ ಕೂಟದ ಅಧ್ಯಕ್ಷ  ಭರತ್ ಅನಂತರಾಮ್, ಖಜಾಂಚಿ ಸುಹಾಸ್ ಲಕ್ಷ್ಮಿಕಾಂತಯ್ಯ, ಉತ್ಸಾಹಿ ಬಸಂತ್ ಕುಮಾರ್ ಕಲಬುರ್ಗಿ ಅವರನ್ನು ಒಳಗೊಂಡಂತೆ, ಅಲ್ಲಿ ಸೇರಿದ್ದ ದೊಡ್ಡ ಸಂಖ್ಯೆಯ ಕನ್ನಡಿಗರೇ ಸಾಕ್ಷಿಯಾಗಿದ್ದರು. ಡಾ ಮುರಳಿ ಮೋಹನ್ ಚೂಂತಾರು ಉಪಸ್ಥಿತರಿದ್ದರು 


- ಎನ್ ಎಸ್ ಶ್ರೀಧರಮೂರ್ತಿ 

ಸಂಚಾಲಕರು, ಪ್ರಕಟಣಾ ವಿಭಾಗ 

ಕನ್ನಡ ಸಾಹಿತ್ಯ ಪರಿಷತ್ತು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top