ಇದು ಒಂದು ರೀತಿಯ ಪುರಾತನ ಪದ್ಧತಿ ಸಂಸ್ಕೃತಿ. ದೇವದಾಸಿ ಎಂದರೆ ದೇವರಿಗೆ ಅರ್ಪಿಸುವ ಮಹಿಳೆಯರು ಎಂಬ ಅರ್ಥ, ಇನ್ನೂಂದು ರೀತಿಯಲ್ಲಿ ಹೇಳುವುದಾದರೆ ನೃತ್ಯ ಮಾಡುವ ಸ್ತ್ರೀಯರು. ಈ ಪದ್ಧತಿ ಆರನೇ ಶತಮಾನಕ್ಕಿಂತ ಹಿಂದೆಯೇ ಇತ್ತು ಎಂದು ಇತಿಹಾಸ ತಿಳಿಸುತ್ತದೆ.
ಈ ಪದ್ಧತಿಯನ್ನು ಉತ್ತರ ಕನ್ನಡ ಭಾಗದಲ್ಲಿ ಹೆಚ್ಚಾಗಿ ಕಾಣಬಹುದು. ಸವದತ್ತಿ ಯಲ್ಲಮ್ಮ (ರೇಣುಕಾ ದೇವಿ) ಇಲ್ಲಿ ಹೆಚ್ಚಾಗಿ ದೇವದಾಸಿಗಳನ್ನು ಕಾಣಬಹುದು. ದೇವಾದಾಸಿ ಮಹಿಳೆಯರನ್ನು ಜೊಗತ್ತಿ ಬಸವಿ ಎಂದು ಸಹ ಕರೆಯುತ್ತಾರೆ.
ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ
ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ.
ದೇವದಾಸಿ ಎಂಬ ಪದವನ್ನು ಕೇಳಿದ್ದೆ ಆದರೆ ಆ ಪದ್ಧತಿಯನ್ನು ಅರ್ಥೈಸಿದ್ದು ಪೂರ್ಣಿಮಾ ರವಿಯವರು ಮಾಡಿದ ಸಾಕ್ಷ್ಯ ಚಿತ್ರಚಲನಚಿತ್ರ (documentry movie) ಆ ಚಲನಚಿತ್ರ ನೋಡಿ ಕಣ್ಣು ಹನಿಗೂಡಿತು. ಪೂರ್ಣಿಮಾ ರವರು ತಮ್ಮ ಪಿ ಹಚ್ ಡಿ ವಿಷಯವಾಗಿ ಈ ಚಲನಚಿತ್ರ ಮಾಡಿದರು ಅವರಿಗೆ ಈ ವಿಷಯದಲ್ಲಿ ಆಸಕ್ತಿ ಬರಲು ಸುಧಾಮೂರ್ತಿಯವರ ಒಂದು ಪುಸ್ತಕ ಕಾರಣವಾಯಿತು. ಇವರು ದೇವದಾಸಿ ಮಹಿಳೆಯರು ಜೊತೆ ತುಂಬಾ ಹತ್ತಿರದ ಒಡನಾಟದಿಂದ ಈ ಚಲನಚಿತ್ರ ಮಾಡಿದರು. ಡಾ ಪೂರ್ಣಿಮಾರವರು ಈ ರೀತಿ ಹೇಳುತ್ತಾರೆ "ದೇವದಾಸಿ ಮಹಿಳೆಯರು ಇರುವ ಜಾಗ ಒಂದು ರೀತಿ ಕೋಟೆ ಇದ್ದಂತೆ ಅಲ್ಲಿಗೆ ಹೋಗಿ ಅವರೊಂದಿಗೆ ಮಾತನಾಡುವುದು ಸುಲಭದ ಕೆಲಸವಲ್ಲ "ನಿಮ್ಮ ಈ ಸಾಧನೆಗೆ ನನ್ನ ನಮನಗಳು. ಈ ಸಾಧನೆ ಹೀಗೆ ಮುಂದುವರಿಯಲಿ.
ದೇವದಾಸಿ ಪದ್ಧತಿ ಒಂದು ಗೌರವಾನ್ವಿತ ಪದ್ಧತಿಯಂತೆ ಆರಂಭವಾಗಿದ್ದರೂ ಅದರ ರೂಪ ಕಾಲ ಹೋದಂತೆ ಬದಲಾಯಿತು. ದೇವದಾಸಿಯರನ್ನು ತಮ್ಮ ಸುಖಕ್ಕಾಗಿ ಬಳಸಿಕೊಳ್ಳುವ ಗಂಡು ವರ್ಗವು ಹುಟ್ಟಿದವು.
ಹೌದು ಇಂದು ಈ ಪದ್ಧತಿ ಒಂದು ಮೈಲಿಗೆ ಕಳಂಕದಂತೆ ರೂಪಾಂತರ ವಾಗಿದೆ.ಇದಕ್ಕೆ ಕಾರಣ ಏನು? ಯಾಕೆ ಈ ಬದಲಾವಣೆಯಾಯಿತು ಎಂದು ತಿಳಿಯಲು ನಾವು ಆ ಜನಾಂಂಗದ ಹತ್ತಿರವಿದ್ದು ಅರಿಯಬೇಕಿದೆ. ದೇವದಾಸಿಯರು ಮದುವೆಯಾಗದೇ ಮಾಂಗಲ್ಯಸರ ಧರಿಸುತ್ತಾರೆ ಇದು ಒಂದು ಪದ್ಧತಿಯಾಗಿತ್ತು. ಏಕೆಂದರೆ ಅವರಿಗೆ ದೇವರ ಜೊತೆ ವಿವಾಹವಾಗಿದೆ ಎಂದು ಇದು ಸೂಚಿಸುತ್ತದೆ. ಇದು ಒಂದು ನಂಬಿಕೆಯಾಗಿತ್ತು.
ಈ ಕರಿಮಣಿ ಸರದ ಬಗ್ಗೆ ಪೂರ್ಣಿಮಾ ರವಿಯವರು ಮಾಡಿದ ಚಲನಚಿತ್ರದಲ್ಲಿ ಡಾ| ನಾಗರತ್ನ ಅವರು ಹೇಳುತ್ತಾರೆ "ಗಂಡ ಇಲ್ಲದೆ, ಕರಿಮಣಿ ಧರಿಸುವ ನೋವು ಯಾರಿಗೂ ಬೇಡ" ಎಂದು.
ಈ ದೇವದಾಸಿ ಪದ್ಧತಿಯ ಹುಟ್ಟಿಗೆ ಮೂಲ ಕಾರಣ ಮೂಡನಂಬಿಕೆ, ಬಡತನ. ದೇವದಾಸಿಗಳ ಎಲ್ಲಾ ಮಾತಿನಲ್ಲಿ ನಮ್ಮ ಈ ಪರಿಸ್ಥಿತಿಗೆ ನಮ್ಮ ತಾಯಿಯೇ ಕಾರಣ ಎಂದು ಹೆಚ್ಚಾಗಿ ಹೇಳಿದ್ದಾರೆ.
ಹಾಗೇ ಈ ಪದ್ಧತಿಯಲ್ಲಿ ಇನ್ನೊಂದು ಪರಿಣಾಮ ದೇವದಾಸಿಯರ ಮಕ್ಕಳ ಮೇಲೆ ಆಗುತ್ತದೆ. ಅವರಿಗೆ ಅವರ ತಂದೆಯ ಹೆಸರು ಹೇಳುವ ಭಾಗ್ಯಯಿರುವುದಿಲ್ಲ. ಅವರು ಸಮಾಜದಲ್ಲಿ ಹೆಚ್ಚಿನ ಅವಮಾನ ಅನುಭವಿಸುತ್ತಾರೆ.
ಪೂರ್ಣಿಮಾ ರವಿಯವರು ಮಾಡಿದ ಸಾಕ್ಷ್ಯಚಿತ್ರ ದಿಲ್ಲಿ ಹೆಚ್ಚಿನ ದೇವದಾಸಿಯರು ನಮ್ಮ ಈ ಸ್ಥಿತಿ ನಮ್ಮ ಮಕ್ಕಳಿಗೆ ಬರಬಾರದು ಎಂದಿತ್ತು. ಈ ದೇವದಾಸಿ ಜೀವನ ಎಷ್ಟು ಕಷ್ಟ ಎಂದು ಅವರು ಮಾತುಗಳಿಂದಲೇ ತಿಳಿಯುತ್ತದೆ.
ಮುಂದಿನ ದಿನಗಳಲ್ಲಿ ಸರ್ಕಾರ ಒಂದು ಒಳ್ಳೆಯ ರೀತಿಯ ಪರಿಹಾರ ನೀಡಿ ಅವರು ಸಮಾಜದ ಎದುರು ತಲೆ ಎತ್ತಿ ನಡೆಯುವಂತೆ ಮಾಡಲಿ.
-ಹರ್ಷಿತಾ. ವಿ. ಪಿ
2nd year BA
Vivekananda autonomous college, Neharu Nagara Puttur
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ