ಪಣಜಿ: ರೈಲ್ವೆ ಇಲಾಖೆಯೊಂದಿಗೆ ಒಡಗೂಡಿ ನಾವು ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ವಾಸ್ಕೊದಲ್ಲಿ ಆಚರಣೆ ಮಾಡಿ, ಸ್ವಚ್ಛತಾ ಅಭಿಯಾನವನ್ನು ಕೂಡ ಕೈಗೊಂಡಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಇದೇ ರೀತಿ ಕೆಲಸ ಮಾಡೋಣ. ಕರವೇ ಗೋವಾದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸೇವಾ ಕಾರ್ಯವನ್ನು ಕೈಗೊಳ್ಳುತ್ತಿದೆ. ಕರವೇ ಇದು ಗೋವಾ ಕನ್ನಡಿಗರ ಆಸ್ತಿ ಎಂದು ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.
"ಕರ್ನಾಟಕ ರಕ್ಷಣಾ ವೇದಿಕೆ ಗೋವಾ" (ಪ್ರವೀಣ್ ಕುಮಾರ್ ಶೆಟ್ಟಿ) ಬಣ ಸಂಘಟನೆ ವತಿಯಿಂದ ಬುಧವಾರ ಅಕ್ಟೋಬರ್ 2 ರಂದು ಗಾಂಧೀಜಿ ಜಯಂತಿ ದಿನದಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಹುತಾತ್ಮ ಚೌಕ ವಾಸ್ಕೋ ದಿಂದ ವಾಸ್ಕೋ ರೈಲ್ವೆ ಸ್ಟೇಷನ್ ತನಕ ಬೆಳಿಗ್ಗೆ 8 ಗಂಟೆಗೆ ಸ್ಥಳ:- ಹುತಾತ್ಮ ಚೌಕ್ ವಾಸ್ಕೊದಿಂದ ರೈಲ್ವೆ ಸ್ಟೇಷನ್ ವಾಸ್ಕೋತನಕ ಕರವೇ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ನಾಟಿಕಾರ್, ರಾಜ್ಯ ಕಾರ್ಯದರ್ಶಿ ಶಿವಾನಂದ್ ಮಸಬಿನಾಳ, ರಾಜ್ಯ ಖಜಾಂಚಿ ವೈ ಎಸ್. ಬಿರಾದರ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ಸ್ವಾಮಿ ಹಿರೇಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಾಲ್ಮೀಕಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮುರಾಳ, ರಾಜ್ಯ ಸಹಕಾರದರ್ಶಿ ಶಿವು ತಲ್ವಾರ್, ರಾಜ್ಯ ಸಂಚಾಲಕರು ಕರಿಯಪ್ಪ ಮುಟ್ಟಗಿ, ಮಾಧ್ಯಮ ಸಂಚಾಲಕರು ರಮೇಶ್ ಮಾದರ್, ಯುವ ಘಟಕದ ಅಧ್ಯಕ್ಷರು ಮನೀಶ್ ಚಲವಾದಿ, ರಾಜ್ಯ ಮಹಿಳಾ ಘಟಕದ ಮುಖಂಡರಾದ ಪಾರ್ವತಿ ಚಲವಾದಿ, ರಾಜ್ಯ ಮಹಿಳಾ ಘಟಕದ ಮುಖಂಡರಾದ ಭಾಗ್ಯಶ್ರೀ ನಾಯಕ್, ರಾಜ್ಯ ಮಹಿಳಾ ಘಟಕದ ಮುಖಂಡರು: ಜಯಶ್ರೀ ಪಿಲೈ, ಸಡಾನಗರ ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಸಲಹೆಗಾರರು ಚಾಂದ್ ಸಾಬ್ ನದಾಫ್, ವಾಸ್ಕೊ ಘಟಕದ ಅಧ್ಯಕ್ಷರು ಸಂಗಮೇಶ್ ಹಡಪದ, ಯುವ ಘಟಕದ ಪದಾಧಿಕಾರಿಗಳಾದ: ಅಧ್ಯಕ್ಷ ಮನೀಶ್ ಚಲವಾದಿ, ಉಪಾಧ್ಯಕ್ಷರು: ಆನಂದ್ ಯಲವರ್, ಉಪಾಧ್ಯಕ್ಷ ಬಾಳಪ್ಪ ಮೋಟಗಿ, ಕಾರ್ಯದಶಿ ಪರಶುರಾಮ್ ಹರಿಜನ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಾರಕೇರ, ಪ್ರಧಾನ ಕಾರ್ಯದರ್ಶಿ ರಾಜು ಹರಿಜನ್, ಸಂಚಾಲಕರು ಆಶಿಶ್ ಗೌಡರ್, ಮಾಧ್ಯಮ ಸಂಚಾಲಕರು ಲಕ್ಷ್ಮಣ್ ಅಂಕಲಗಿ, ಸಹ ಕಾರ್ಯದರ್ಶಿ ಸಂತೋಷ್ ಹೊರಕೇರಿ ಮತ್ತಿತರರು ಉಪಸ್ಥಿತರಿದ್ದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ