ಪತ್ರಿಕಾ ರಂಗ ಜವಾಬ್ದಾರಿಯುತ ಕಾರ್ಯನಿರ್ವಹಿಸುತ್ತಿದೆ: ಗುರು ಮಹಾಂತ ಶ್ರೀಗಳು

Upayuktha
0



ಹುನಗುಂದ: ಸಂವಿದಾನದ ನಾಲ್ಕನೇ ಅಂಗವಾದ ಪತ್ರಿಕಾರಂಗ ವಿಶ್ವದಾದ್ಯಂತ ಜವಾಬ್ದಾರಿಯುತ ವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಚಿತ್ತರಗಿ ಇಲಕಲ್ಲಿನ ಸಂಸ್ಥಾನ ಮಠದ ಪೂಜ್ಯರಾದ ಗುರುಮಹಾಂತ ಶ್ರೀಗಳು ಹೇಳಿದರು.


ಇಲ್ಲಿನ ಪುರಸಭೆ ಮಂಗಲ ಭವನದಲ್ಲಿ ನಡೆದ ಸರ್ಕಾರಿ ನಿವೃತ್ತಿಯ ಸಾರ್ಥಕ ಕ್ಷಣ ಸೇವೆ ಶೀರ್ಷಿಕೆ ಮತ್ತು ಶುಭ ಸಮಾರಂಭದಲ್ಲಿ ಅವರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 


ಸರ್ಕಾರಿ ಸೇವೆಗೆ ಮಾತ್ರ ನಿವೃತ್ತಿ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಜತೆಗೆ ಶಿಕ್ಷಕ ಎಸ್ಕೆ ಕೊನೆಸಾಗರ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಬೆಳಕು ಚೆಲ್ಲುವ ಕಾರ‍್ಯ ಮಾಡಬೇಕು.


ತಮ್ಮ ಸೇವಾವಧಿಯುದ್ದಕ್ಕೂ ಶಿಕ್ಷಣವಷ್ಟೇ ಅಲ್ಲಿದೇ ನಾಟಕ ಕಲೆ ರಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಹಾಗೆಯೇ ಅವರು ಬಸವ ತತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ಪತ್ರಿಕಾರಂಗದಲ್ಲಿಯೂ ಸೇವೆ ಸಲ್ಲಿಸಿ ನೇರ ನಡೆ-ನುಡಿಗೆ ಹೆಸರಾಗಿದ್ದಾರೆ. ಅವರು ವಿಶ್ರಾಂತಿ ಜೀವನ ಸುಖಮಯವಾಗಿರಲಿ ಇನ್ನಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಶ್ರೀಗಳು ಆಶೀರ್ವಾದಿಸಿದರು.


ಕಾರ್ಯಕ್ರಮವನ್ನು ಹುನಗುಂದದ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿ ಮಾತನಾಡಿ ಸರ್ಕಾರಿ ಕೆಲಸ ದೇವರ ಕೆಲಸ. ಅದ್ದಕ್ಕಿಂತಲೂ ಹೆಚ್ಚಾಗಿ ಶಾಲಾ ಶಿಕ್ಷಕರ ಸೇವೆ ದೇಶ ನಿರ್ಮಾಣದ ಕೆಲಸ. ಎಸ್ಕೆ ಕೊನೆಸಾಗರ ಗುರುಗಳು ಸೇವೆಯುದ್ದಕ್ಕೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದರು.


ಮುಂದುವರೆದು ಮನುಷ್ಯನಿಗೆ ಗುಣಮುಖ್ಯ ಅಂಥ ಗುಣವನ್ನು ಕೊನೆಸಾಗರ ಗುರುಗಳು ಹೊಂದಿದ್ದಾರೆ. ಎಂದ ಅವರು ನಮ್ಮ ತಂದೆಯವರ ಕಾಲದಿದ್ದಲೂ ಅವರು ನಮ್ಮ ಕುಟುಂಬದವರ ಜೊತೆ ಅವಿನಾಭಾವ ಸಂಬಂಧ ಹೊಂದಿದವರಾಗಿದ್ದಾರೆ. ಎಷ್ಟ ಅಲ್ಲೆದೆ ನನ್ನ ಜೊತೆಗೆಗೂ ಮುಂದುವರೆಸಿದ್ದಾರೆ ಎಂದು ಹೇಳಿದ ಅವರು ಹಲವಾರು ವಿಷಯಗಳಲ್ಲಿ ಸಲಹೆ ಸೂಚನೆ ನಿಡುತ್ತಾ ಬಂದಿದ್ದಾರೆ. ಅವರ ಮನಸ್ಸು ಸ್ವಚ್ಛ ಉಳ್ಳವರಾಗಿದ್ದು ನೇರ ನುಡಿ ಉಳ್ಳವರಾಗಿದ್ದಾರೆ ಎಂದರು.


ಮುಂದುವರೆದು ಅವರು ಕುಟುಂಬವನ್ನು ನಡೆಸಿಕೊಂಡು ಹೋಗುವ ರೀತಿ ನೋಡಿದರೇ ಮೆಚ್ಚುವಂಥದ್ದು. ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಪ್ರಾಯರಾಗಬೇಕಾಗಿದೆ ಎಂದು ತಿಳಿಸಿದರು.


ಹಿರಿಯ ನ್ಯಾಯವಾದಿ ಕೆ.ಎಂ. ಸಾರಂಗಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್.ಕೆ. ಕೊನೆಸಾಗರ ರವರನ್ನು, ಕಲಾವಿದರಾಗಿ, ಸಂಘಟಕರಾಗಿ ಶಿಕ್ಷಕರಾಗಿ, ಸಾಹಿತಿಗಳಾಗಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಅವರು ನಮ್ಮ ಕುಟುಂಬದ ಜೊತೆ ಅವಿನಾಭವ ಸಂಬಂಧವನ್ನು ಹೊಂದಿದ್ದಾರೆ. ಅವರು ನಮ್ಮಗೆ ಕಳಸ ಪ್ರಾಯವಾಗಿದ್ದಾರೆ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಆ ದೇವರು ಆರೋಗ್ಯ  ಕರುಣಿಸಲಿ ಎಂದು ಆಶಿಸುತ್ತೇನೆ ಎಂದರು.


ಸನ್ಮಾನ: ನಿವೃತ್ತರಿಗೆ ಶಾಸಕರು, ಗುರುಮಹಾಂತ ಶ್ರೀಗಳು ಮತ್ತು ಆತ್ಮೀಯರು ಹಾಗೂ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

ತಹಸೀದಾರ ನಿಂಗಪ್ಪ ಬಿರಾದಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಸಿಪಿಐ ಯಶವಂತ ಕೊನೆಸಾಗರ ಹಾವೇರಿಯ ಡಾ||ಮಲ್ಲಪ್ಪನವರ ಮುತ್ತಿತರರು ಇದ್ದರು.


ಸನ್ಮಾನ ಸ್ವಿಕರಿಸಿದ ಎಸ್ಕೆ ಕೊನೆಸಾಗರ ತಮ್ಮ ಸರ್ಕಾರಿ ಸೇವೆಯ ಅನುಭವಗಳನ್ನು ಹಂಚಿಕೊಳತ್ತ ಬನ್ನಹಟ್ಟಿಯಂಥ ಸಾಮನ್ಯ ಹಳ್ಳಿಯಿಂದ ಬಂದ ತಾವು ಸಂಕಷ್ಟಗಳ ಮಧ್ಯ ಜೀವನ ರೂಪಿಸಿಕೊಳ್ಳುವ ಕಾಳಜಿ ಮತ್ತು ಕಾಶಪ್ಪನವರ ಕುಟುಂಬದ ಬೆಂಬಲ ದೊಡ್ಡದು. ಮೂರುವರೆ ದಶಕದ ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ಪತ್ರಿಕಾವರದಿಗಾರನಾಗಿ ಕಾರ್ಯ ಮಾಡುವಲ್ಲಿ ಹುನಗುಂದ ಜನತೆಯ ವಿಶ್ವಾಸ ಮರೆಯಲಾರೆ ಮಿಗಿಲಾಗಿ ಮಹಾಂತ ಶ್ರೀಗಳ ಶ್ರೀರಕ್ಷೆಕಾಯಿತು. ಇಲಾಖೆಯ ಸದಾಶಯವಂತೂ ತಮ್ಮ ಮೇಲಿದ್ದದನ್ನು ಸ್ಮರಣೀಯ ಎಂದರು. ನಿವೃತ್ತ ಉಪನ್ಯಾಸಕ ಸಿದ್ದಲಿಂಗ ಬೀಳಗಿ ಸ್ವಾಗತಿಸಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top