ಶ್ರೀ ಸತ್ಯಾತ್ಮವಾಣಿ- 34: ತಪಸ್ಸು, ಅಧ್ಯಯನ ಹೇಗಿರಬೇಕು..?

Upayuktha
0



ಶ್ರೀ ಕೃಷ್ಣ ಪರಮಾತ್ಮನ ಅತ್ಯದ್ಭುತವಾದ ದಿವ್ಯವಾದ ಮಹಿಮೆಯನ್ನು ಒಂದು ಪ್ರಸಂಗದಲ್ಲಿ ವರ್ಣನೆ ಮಾಡುತ್ತಾನೆ. ಸಾಮಾನ್ಯವಾಗಿ ಧರ್ಮವನ್ನು ಅನುಸರಿಸುವ ವ್ಯಕ್ತಿಗಳು ನಾನಿಷ್ಟು ಧರ್ಮವನ್ನು ಆಚರಣೆ ಮಾಡಿ ಏನು ಪ್ರಯೋಜನ ದೇವರು ನಮ್ಮನ್ನು ರಕ್ಷಣೆ ಮಾಡಲಿಲ್ಲ ಎನ್ನುವ ಪ್ರಸಂಗಗಳನ್ನು ಅಲ್ಲಲ್ಲಿ ಕಾಣುತ್ತೇವೆ ಸಮಾಜದಲ್ಲಿ ಲೋಕದಲ್ಲಿ ಇಂತಹ ಮಾತು ಬರುತ್ತವೆ, ಲೋಕೋತ್ತರದಲ್ಲಿ ಮಹಾತ್ಮರು ಇಂತಹ ಪ್ರಸಂಗ ಬಂದಾಗ ಗಟ್ಟಿಯಾಗಿ ನಂಬಿ ನಡೆಯುವ ಜನ ಚಿಂತನ ಮಾಡಿ ಹರಿ ವಾಯುಗುರುಗಳ ದಯೆಯನ್ನು ಸ್ಮರಿಸುತ್ತಾರೆ. ಈ ರೀತಿಯ ಒಂದು ಉದಾಹರಣೆಯನ್ನು ವೇದವ್ಯಾಸರು ಅರ್ಜುನ ಸ್ತೋತ್ರ ಮಾಡಿದ ವರ್ಣನೆಯನ್ನು ದಾಖಲು ಮಾಡುತ್ತಾರೆ. ಈ ಸ್ತೋತ್ರ ವವನವಾಸದ ಪ್ರಸಂಗದಲ್ಲಿ ನೋಡಬಹುದು ನೂರಾರು ಯೋಜನಗಳಷ್ಟು ವಿಸ್ತೀರ್ಣವಾದ ಸಂಪತ್ತಿನ ಪರ್ವತಗಳು, ಅಷ್ಟು ಅದ್ಭುತವಾದ ಸಂಪತ್ತನ್ನು ತಮ್ಮ ಪರಾಕ್ರಮದಿಂದ ಪಡೆದವರು ಪಾಂಡವರು ಅಷ್ಟೆಲ್ಲ ಸಂಪತ್ತನ್ನು ಜೂಜಾಟದಲ್ಲಿ ಕಳೆದು ಕೊಂಡಿದ್ದಾರೆ, ಯುಧಿಷ್ಠಿರನಲ್ಲಿ ಆದ ಕಲಿ ಪ್ರವೇಶ ಜೂಜಾಟಕ್ಕೆ ಕರೆದರೆ ಹೋಗದೇ ಇರೋದಿಲ್ಲ ಎನ್ನುವ ಪ್ರತಿಜ್ಞೆ ಮಾತಿನಂತೆ ನಡೆದು ಜೂಜಾಟಕ್ಕೆ ಹೋಗಿದ್ದು ಆ ಸಂದರ್ಭದಲ್ಲಿ ನ್ಯಾಯ ಧರ್ಮಗಳಿಂದ ಗಳಿಸಿದ್ದನ್ನು ಅನ್ಯಾಯವಾಗಿ ಕಳೆದು ಕೊಂಡಡದ್ದು ಈ ರೀತಿಯಲ್ಲಿ ಆಯಿತಲ್ಲ ಎಂಬ ದುಃಖ, ಸಾಮಾನ್ಯ ಮನುಷ್ಯರಾಗಿದ್ದರೆ ಹೃದಯಾಘಾತ ಆಗುವ ಸಂದರ್ಭ ಆದರೆ ಪಾಂಡವರು  ಮಹಾನುಭಾವರು ದೇವತೆಗಳು ಭಗವಂತನನ್ನು ಅದೇ ಭಕ್ತಿ ಶ್ರದ್ಧೆಗಳಿಂದ ಸ್ಮರಣೆ ಮಾಡುತ್ತಾರೆ ಸ್ತೋತ್ರ ಮಾಡುತ್ತಾರೆ. ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ ಎಂಬ ಅನುಸಂಧಾನವನ್ನು ಜೀವನಕ್ಕೆ ಹೇಗೆ ಅಳವಡಿಸಿಕೊಂಡು ಹೋಗಬೇಕೆಂಬುದಕ್ಕೆ ಉದಾಹರಣೆ ಇದನ್ನು ನಾವು ಕಲಿಯಬೇಕು ಅನುಸರಿಸಬೇಕು. 

 


ಶ್ರೀಪಾದರಾಜರ ಪದದಲ್ಲಿ ಹೇಳುತ್ತಾರೆ, ಲೆತ್ತವಾಡಿ ಸೋತರಂತೆ ರಂಗವಿಠಲ ಬರಬೇಕಂತೆ ಎನ್ನುತ್ತಾರೆ. ಪ್ರಚವನ ಮಾಡಿ ಮುಗಿಸುವಾಗ ಶುಭ ದಿಂದ ಮುಗಿಸಬೇಕೆಂದು ಹೇಳುತ್ತಾರೆ ಆದರೆ ಈ ಹಾಡಿನಲ್ಲಿ ಆ ರೀತಿ ಇಲ್ಲವಲ್ಲ ಎಂದರೆ ಶ್ರೀ ಕೃಷ್ಣ ಬರಬೇಕಂತೆ ಎಂದು ಭಗವಂತ ಬಂದರೆ ಅಲ್ಲಿ ಮಂಗಲವೇ. ಎಲ್ಲ ತೀರ್ಥಗಳು ದೇವರ ಸನ್ನಿಧಾನ ಇರುವುದಕ್ಕೆ ಮಂಗಲ ಎಲ್ಲ ವಾದ್ಯಗಳಲ್ಲಿ ಅವನ ಸನ್ನಿಧಾನ ಇದೆ ಎನ್ನುವುದಕ್ಕೆ ಮಂಗಳ ಎಲ್ಲ ಋಷಿಗಳು ದೇವರ ಮಹಿಮೆ ಹೇಳುವ ವೇದಗಳನ್ನು ಹೇಳುತ್ತಾರೆ ಎನ್ನುವುದಕ್ಕೆ ಮಂಗಳ ಎಲ್ಲ ಸ್ತ್ರೀಯರು ದೇವರ ಕೈ ಹಿಡಿದ ಲಕ್ಷ್ಮಿ ಸನ್ನಿಧಾನ ಪಾತ್ರರು ಎನ್ನುವುದಕ್ಕೆ ಮಂಗಳ, ತುಲಸಿ ದೇವರ ಪಾದವನ್ನು ಸೇರುತ್ತದೆ ಎನ್ನುವುದಕ್ಕೆ ಮಂಗಳ ಗೋವುಗಳು ಗೋಪಾಲಕೃಷ್ಣನ ಸನ್ನಿಧಾನ ಇರುವುದಕ್ಕೆ ಮಂಗಳ ಮಂಗಳ ಎನ್ನುವುದು ದೇವರ ಸನ್ನಿಧಾನ ಬಿಟ್ಟರೆ ಇನ್ನುಯಾವುದೂ ಅಲ್ಲ ಎಂದು ಈ ಹಾಡಿನಲ್ಲಿ ಶ್ರೀಪಾದ ರಾಜರ ಚಿಂತನೆಯನ್ನು ತೋರಿಸುತ್ತದೆ. ಕಷ್ಟದ ಸಮಯದಲ್ಲಿ ಶ್ರೀ ಕೃಷ್ಣ ಪರಮಾತ್ಮನ ದರ್ಶನವಾಗುತತದೆ ಪಾಂಡವರ ಕಷ್ಟ ಪರಿಹಾರವಾಗುತ್ತದೆ.


ಅರ್ಜುನ ಶ್ರೀಕೃಷ್ಣ ಪರಮಾತ್ಮ ಬಂದಾಗ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ ಮತ್ತು ಅವನ ಜನ್ಮ ಜನ್ಮಾಂತರದಿಂದ ಮಾಡಿದ ಉಪಕಾರ ಸ್ಮರಣೆ ಮಾಡುತ್ತಾ ಪರಮಾತ್ಮ ಲೋಕೋಪಕಾರಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾನೆ ಹಾಗೂ ಎಂತಹ ಕಾರ್ಯವನ್ನು ಬೇಕಾದರೂ ಮಾಡುತ್ತಾನೆ. ಲೋಕದಲ್ಲಿ ಹೆಸರು ಇರುವರು ಒಂದು ಗಾಂಭೀರ್ಯ ಇಟ್ಟುಕೊಂಡಿರುತ್ತೇವೆ, ಅದರೆ ಪರಮಾತ್ಮ ನಾವು ನಮ್ಮ ಉದ್ಧಾರಕ್ಕಾಗಿ ಮಾಡಬೇಕಾದ ಕಾರ್ಯಗಳನ್ನು ತಾನು ನಮಗಾಗಿ ಮಾಡಿತೋರಿಸುತ್ತಾನೆ. ಒಬ್ಬ ವಿದ್ಯಾರ್ಥಿ ಹೇಗೆ ವಿದ್ಯಾಭ್ಯಾಸ ಮಾಡಬೇಕೆಂದು ಗೊತ್ತಿಲ್ಲ ಎಂದು ಹೇಳಿದರೆ ಹೇಗೆ ಪುಸ್ತಕ ಹಿಡಿಯಬೇಕು ಕೂಡಬೇಕು ಎಂದು ಗೊತ್ತಿಲ್ಲ ಎಂದಲ್ಲ ಹೇಗೆ ಅಧ್ಯಯನ ಮಾಡಬೇಕು ಯಾವ ರೀತಿ ಯಾವ ಕ್ರಮದಲ್ಲಿ ಓದಬೇಕು ಎಂಧು ಕೇಳಿದರೆ ಹೀಗೆ ಒಂದು ಸಮಯದಲ್ಲಿ ಈ ರೀತಿ ಓದ ಬೇಕು ಎಂದು ಒಂದು ಬಾರಿ ಎರಡು ಬಾರಿ ಹೇಳುಬಹುದು. ಆದರೆ ಪ್ರತಿ ನಿತ್ಯವೂ ಅವನ ಜೊತೆಗೆ ಎಲ್ಲ ಕೆಲಸ ಬಿಟ್ಟು ಕೂಡಲು ಆಗುವುದಿಲ್ಲ. ತೋರಿಸಿದರೂ ಅದು ಒಬ್ಬ ಇಬ್ಬರಿಗೇ ಮಾತ್ರ ಸಾಧ್ಯ. ಆದರೆ ಪರಮಾತ್ಮನು ಹತ್ತು ಅವತಾರಗಳನ್ನು ಮಾಡಿ, ಹತ್ತು ಅವತಾರಗಳು ಪ್ರಸಿದ್ಧವಾದುದು. ಆದರೆ ಪರಮಾತ್ಮ ಸಾವಿರಾರು ಅವತಾರಗಳನ್ನು ಪ್ರಾದುರ್ಭಾವನಾಗಿ ಎಲ್ಲ ಜೀವ ರಾಶಿಗಳು ಮಾಡಬೇಕಾದ ಕರ್ತವ್ಯಗಳನ್ನು ಹೀಗೆ ಮಾಡಬೇಕು ಎಂದು ತಾನು ಮಾಡಿ ತೋರಿಸಿ ನಮಗೆ ಹೇಳುತ್ತಾನೆ. ಅವನ ಕಾರುಣ್ಯ ಎಂತಹದ್ದು ಎಷ್ಟು ಅದ್ಭುತವಾದುದು ಮಹಾಭಾರತ ಹೇಳುತ್ತದೆ. 


ಹತ್ತು ಸಾವಿರ ವರ್ಷಗಳ ಕಾಲ ಪರಮಾತ್ಮ ತಪಸ್ಸು ಮಾಡಿದ್ದಾನೆ, ನಾರಾಯಣ ಅವತಾರದಲ್ಲಿ ಶ್ರೀ ಕೃಷ್ಣ ಪರಮಾತ್ಮ ಹತ್ತು ಸಾವಿರ ವರ್ಷಗಳ ಕಾಲ ಸಂಚಾರ ಮಾಡಿದ್ದಾನೆ, ಈ ಸಮಯದಲ್ಲಿ ನರನೇ ಅರ್ಜುನ ನಾರಾಯಣನೇ ಶ್ರೀ ಕೃಷ್ಣ ಪರಮಾತ್ಮ ಸನ್ಯಾಸಾಶ್ರಮದಲ್ಲಿ ದಿನ ನಿತ್ಯದ ಸಂಚಾರ ಅದರಲ್ಲಿ ಸಾಯಂಕಾಲ ಯಾವ ಸ್ಥಳದಲ್ಲಿ ಇರುತ್ತಾನೆ. ಅದೇ ಅವನ ವಾಸಸ್ಥಾನ ಎಲ್ಲಿ ಉಳಿಯುತ್ತಾನೆ ಅದೇ ಮನೆ ಎನ್ನುವ ಲೋಕ ಶಿಕ್ಷಣ ಸನ್ಯಾಸಿಗಳಿಗೆ ಹೀಗೆ ಇರಬೇಕು ಎಂದು ಪರಮಾತ್ಮ 10000 ವರ್ಷ ಸಂಚಾರ ಮಾಡಿ ನಮಗೆ ತೋರಿಸಿದ್ದಾನೆ ಎಂದು ಅರ್ಜುನ ಸ್ಮರಿಸುತ್ತಾನೆ. ಹೀಗೆ ಸಂಚಾರ ಮಾಡಿ ಋಷಿ ಮುನಿಗಳಿಗೆ ತೋರಿಸಿದ ಭಗವಂತ ಅನಾದಿ ಅನಂತ ಆದರೆ ಭಕ್ತರಿಗೆ ತೋರಿಸಲು 10 ಸಾವಿರ ವರ್ಷಗಳ ಕಾಲ ಗಂಧಮಾದನ ಪರ್ವತದಲ್ಲಿ ವಾಸವಾಗಿದ್ದಾನೆ ಸಂಚಾರ ಮಾಡಿದ್ದಾನೆ. 11 ಸಾವಿರ ವರ್ಷಗಳ ಕಾಲ ಪುಷ್ಕರದಲ್ಲಿ ಕೇವಲ ನೀರನ್ನು ಕುಡಿದು ತಪಸ್ಸನ್ನು ಮಾಡಿ ತೋರಿಸಿದ್ದಾನೆ.


ಪುಷ್ಕರ ಬಹಳ ದೊಡ್ಡದಾದ ಕ್ಷೇತ್ರ ಅಲ್ಲಿ ಹೋಮ ಹವನಾದಿಗಳನ್ನು ಯಾತ್ರೆಯನ್ನು ಮಾಡುವುದು ಬಹಳ ಶ್ರೇಷ್ಠ ಈ ಕುರಿತು ಮಹಾಭಾರತ ಮೊದಲಾದ ಪುರಾಣಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ವರ್ಣನೆ ಇದೆ. ಅನ್ನ ಆಹಾರಗಳು ಇಲ್ಲದೇ ನನ್ನ ಅನುಗ್ರಹದಿಂದ ಬದುಕಬಹುದು ಎಂಬುದನ್ನು ಕೇವಲ ನೀರಿನ ಸೇವನೆ ಮಾಡಿ ತಪಸ್ಸನ್ನಾಚರಿಸಿ ದೇವರು ತೋರಿಸಿದ್ದಾನೆ. ಅನ್ನದಿಂದ ಬದುಕುವುದು ಎಂಬುದನ್ನು ತೋರಿಸಿದ್ದು ನಾನೇ ಆದರೆ ಅದನ್ನು ಇಲ್ಲದೇ ಬದುಕಬೇಕು ಎಂದು ತೋರಿಸಿದ್ದು ನಾನೇ ಎಂದು ಪರಮಾತ್ಮ. ತನ್ನ ಅವತಾರಗಳಲ್ಲಿ ತೋರಿಸಿದ್ದಾನೆ. ಅನ್ನವನ್ನು ಸೃಷ್ಟಿಸಿದ್ದು ನಾನೇ ಯಾವಾಗ ಸೇವಿಸಬೇಕು ಯಾವಾಗ ಸೇವಿಸಬಾರದು ಎಂಬುದನ್ನು ನಾನೇ ಹೇಳಿದ್ದೇನೆ ಎಂದ ಪರಮಾತ್ಮ. ನಾವು ಪರೀಕ್ಷೆಯಲ್ಲಿ ಮಲ್ಟಿಪಲ್‌ ಚಾಯ್ಸ್‌ ಪ್ರಶ್ನೆಗಳಲ್ಲಿ ಸರಿಯಾದ ಉತ್ತರ ಇರುವಂತೆ ಪರಮಾತ್ಮ ನಮಗೆ ಹೇಗೆ ಇರಬೇಕು ಯಾವಾಗ ತಿನ್ನಬೇಕು ಎಂದೆಲ್ಲ ಹೇಳುವಂತೆ ನಾವು ಭಗವಂತ ಹೇಳಿದಂತೆ ಇದ್ದು ಸರಿಯಾದ ಮಾರ್ಗದಲ್ಲಿ ಇದ್ದು ಆಹಾರ ಸೇವಿಸಬೇಕು.


ಬದರಿಯಲ್ಲಿ 100 ವರ್ಷ ಎರಡೂ ಬಾಹುಗಳನ್ನು ಮೇಲೆ ಎತ್ತಿ ತಪಸ್ಸನ್ನು ಆಚರಿಸುತ್ತಾನೆ. ಪ್ರತಿಜ್ಞೆ ಮಾಡ ಬೇಕು ಎಂದಾಗ ಮೇಲೆ ಕೈ ಎತ್ತಿರುತ್ತಾರೆ. ಭಗವಂತ ವಿಷ್ಣು ಸರ್ವೋತ್ತಮತ್ವ ಘೋಷಣೆ ಮಾಡುವುದಕ್ಕಾಗಿ ಸಕಲ ಶಾಸ್ತ್ರ ವೇದ ಪುರಾಣಗಳನ್ನು ಹೇಳಿದ ಪರಮಾತ್ಮ ನೂರು ವರ್ಷಗಳ ಕಾಲ ಗಾಳಿಯನ್ನು ಸೇವನೆ ಮಾಡುತ್ತಾ ಎರಡೂ ಕೈ ಮೇಲೆ ಎತ್ತಿ ತಪಸನ್ನು ಆಚರಿಸಿ ನಮಗೆ ತೋರಿಸಿದ್ದಾರೆ. ನಾವು ಕೂಡ ಅಪ್‌ ಭಕ್ಷ, ವಾಯು ಭಕ್ಷ  ಎಂದೆನಿಸಿಕೊಳುವ ಪ್ರಯತ್ನ ಮಾಡಬಹುದು. ಹೇಗೆ ಎಂದರೆ ಶಾಸ್ತ್ರದಲ್ಲಿ ಹೇಳಿದ ರೀತಿ ನೀರನ್ನು ಸ್ವೀಕರಿಸಿ ಸಮಯ ಸಮಯಕ್ಕೆ ಪ್ರಾಣಾಯಾಮಗಳನ್ನು ಮಾಡಿ ಈ ರೀತಿಯಲ್ಲಿ ನಾವು ಕೂಡ ಅನುಸರಿಸಬಹುದು.


ಕೆಲವರಿಗೆ ಸ್ವಲ್ಪ ಆಚರಣೆ ಬಂದರೆ ತಾವು ಬಹಳ ಧಾರ್ಮಿಕರು ಎಂಬ ಅಹಂಕಾರ ಬಂದಿರುತ್ತದೆ. ಯಾರಿಗಾದರೂ ಅಹಂಕಾರ ಅಂದಿದೆ ಎಂಧರೆ ಅವರಿಗೆ ವೈರಾಗ್ಯ ಧಾರ್ಮಿಕ ಸ್ವಭಾವ ಇರುವುದೇ ಇಲ್ಲ. ಏಕೆಂದರೆ ಸಾತ್ವಿಕರು ಧಾರ್ಮಿಕರು ಅಹಂಕಾರ ಭಾವ ಬಿಟ್ಟಿರುತ್ತಾರೆ ಎಂದೇ ಅಷ್ಟು ಮಹಾತ್ಮರು ಅಗಿರುತ್ತಾರೆ. ಸರಸ್ವತಿ ನದೀ ತೀರದಲ್ಲಿ 12 ವರ್ಷಗಳ ಕಾಲ ಪರಮಾತ್ಮ ಯಜ್ಞವನ್ನು ಮಾಡಿರುತ್ತಾನೆ. ಪ್ರಭಾಸ ಸ್ಥಾನದಲ್ಲಿ  ದೇವ ಮಾನದಲ್ಲಿ 1000 ವರ್ಷಗಳ ಕಾಲ ತಪಸ್ಸು ಮಾಡಿ ತೀರ್ಥ ಕ್ಷೇತ್ರದಲ್ಲಿ ಹೇಗೆ ವಾಸ ಮಾಡಬೇಕು ತೀರ್ಥದ ಸೇವನೆಯನ್ನು ಹೇಗೆ ಮಾಡಬೇಕು ಇಂದಿನ ಜನ ತೀರ್ಥ ಯಾತ್ರೆಗೆ ಹೋದರೆ ಪ್ರವಾಸಕ್ಕೆ ಸೈಟ್‌ ಸೀಯಿಂಗ್‌ ಪಿಕ್‌ ನಿಕ್‌ ಗೆ ಹೋದಂತೆ ಹೋಗುತ್ತಾರೆ. ತೀರ್ಥಯಾತ್ರೆ ಎನ್ನುವುದು ದೊಡ್ಡ ಸಾಧನೆ ಅಲ್ಲಿ ಹೇಗೆ ಸ್ನಾನ, ಜಪ ಅನುಸಂಧಾನ, ತಪ ಪೂಜೆಯನ್ನು ಮಾಡಬೇಕು. ಹೇಗೆ ಅನುಷ್ಠಾನ, ದಾನ, ಯಜ್ಞಗಳನ್ನು ಮಾಡಬೇಕು ಇವುಗಳನ್ನು ತೋರಿಸಲು ಅಲ್ಲಿ ಪ್ರಭಾಸ ಕ್ಷೇತ್ರಲ್ಲಿದ್ದು ತೋರಿಸಿದ್ದಾನೆ.


ಎಂತಹ ವನವಾಸ ಬಂದರೂ ಭಗವಂತನ ಕಾರುಣ್ಯ ಪರಮಾತ್ಮನ ಇಚ್ಛೆಯಂತೆಯೇ ನಡೆಯುತ್ತದೆ ಎಂದು ಕಷ್ಟ ಸುಖ ಎರಡೂ ದಿನ ನಿತ್ಯದಲ್ಲಿ ಭಗವಂತನ ಕರುಣೆಯ ಸ್ಮರಣೆಯನ್ನು ಮಾಡಿ ಕೃತಜ್ಞತೆಯನ್ನು ಹೇಳಿ ಬದುಕಬೇಕು. ಭಗವಂತನ ಮೇಲೆ ಮುನಿಸಿಕೊಳ್ಳುವವ ಮುನಿಯಾಗುವುದಿಲ್ಲ ಪರಮಾತ್ಮನ ಕಾರುಣ್ಯವನ್ನು ನನೆದು ಬದುಕುವವ ಧಾರ್ಮಿಕನಾಗುತ್ತಾನೆ ಎಂದು ಮಹಾಭಾರತ ಹೇಳುತ್ತದೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top