ಶ್ರೀ ಸತ್ಯಾತ್ಮವಾಣಿ- 32: ಧರ್ಮವನ್ನು ತಪ್ಪದೇ ಆಚರಿಸಬೇಕು

Upayuktha
0


ಶ್ರೀಮನ್‌ ಮಹಾಭಾರತ ಕಲ್ಪವೃಕ್ಷ ಇದ್ದಂತೆ ಬೇಡಿದ್ದ ವಸ್ತುಗಳನ್ನೆಲ್ಲಾ ಕೊಡುವಂತೆ ನಮಗೆ ಅಪೇಕ್ಷೆ ಇರುವ ತತ್ವಗಳನ್ನು ವಿಷಯಗಳನ್ನು ತಿಳಿಸಿಕೊಡುವುದು, ಮಹಾಭಾರತದಲ್ಲಿ ಪರಮಾತ್ಮನ ಮಹಿಮೆಯನ್ನು, ಹೇಳಿದ ಹೋಮ ಹವನಾದಿಗಳನ್ನು ಮಾಡಿ ಮಹಾತ್ಮರ ಸೇವೆಯನ್ನು ಮಾಡಿದರೆ ಎಲ್ಲವೂ ದೊರೆಯುತ್ತದೆ. ಅಂತಹ ಮಹಾಭಾರತದ ವಿರಾಟ ಪರ್ವಕ್ಕೆ ಶ್ರೀ ಸತ್ಯಧರ್ಮ ತೀರ್ಥರು ವ್ಯಾಖ್ಯಾನವನ್ನು ಹೋದ ವರ್ಷ ತಿಳಿಯುವ ಪ್ರಯತ್ನ ಮಾಡಿದ್ದೇವೆ. ವಿರಾಟ ಪರ್ವದಲ್ಲಿ ಬರುವ ಪ್ರಧಾನ ಘಟ್ಟ ಕೀಚಕನ ವಧೆ. ಕೀಚಕನ ವಧೆಯಾದ ಸಂದರ್ಭದಲ್ಲಿ ಪಾಂಡವರಿದ್ದರು. ಕರಾರಿನ ಪ್ರಕಾರ ಪಾಂಡವರ ಗುರುತು ಹತ್ತಿದರೆ ಅವರು ಪುನಃ ವನವಾಸಕ್ಕೆ ಹೋಗಬೇಕೆಂದು ಮಾತಾಗಿತ್ತು. ದುರ್ಯೋಧನನ ದೂತರು ಎಲ್ಲಿ ಹುಡುಕಿದರೂ ಅವರಿಗೆ ಪಾಂಡವರು ಸಿಕ್ಕಿಲ್ಲ. ದುರ್ಯೋಧನ ಕೈಲಿ ಅಧಿಕಾರ, ದುಷ್ಟತನ ಎಲ್ಲವೂ ಬಹಳವೇ ಇದ್ದರೂ ಅವನು ಪಾಂಡವರನ್ನು ಹುಡುಕಲು ಸಾಧ್ಯವಿತ್ತು ಆದರೆ ಪರಮಾತ್ಮನ ಅನುಗ್ರಹ ಹೊಂದಿರುವ ಪಾಂಡವರನ್ನು ಹುಡುಕಲು ಅವನಿಗೆ ಆಗಲಿಲ್ಲ.



ಕಸ್ತೂರಿಯ ಪರಿಮಳದಂತೆ ಎಲ್ಲಿಯೇ ಇದ್ದರೂ ಕಾಣುವ ಪಾಂಡವರನ್ನು ಹುಡುಕಲು ಸಾಧ್ಯವಿಲ್ಲ ಎಂದರೆ ಅವರ ಗುಣ ಪ್ರಭಾವ ಇದ್ದರೂ ಭಗವಂತನ ಸಂಕಲ್ಪದಂತೆ ಅವನ ಅನುಗ್ರಹದಿಂದ ಯಾರಿಗೂ ಅವರನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂಬುದನ್ನು ತಿಳಿಯಬಹುದು. ಶ್ರೀಕೃಷ್ಣ ಪರಮಾತ್ಮನ ಮತ್ತು ದುರ್ಗಾದೇವಿ ಅನುಗ್ರಹ ಮಾಡಿದ್ದಾರೆ. ಅಜ್ಞಾತವಾಸ ಮಾಡಲು ಹೋಗುವ ಮೊದಲು ದುರ್ಗೆಯನ್ನು ಕುರಿತು ಧರ್ಮರಾಜನು ಪ್ರಾರ್ಥನೆಯನ್ನು ಸ್ವೀಕರಿಸಿ ಅಭಯ ನೀಡಿ ಆಶೀರ್ವದಿಸಿ ಕಳುಹಿಸಿದ್ದಾಳೆ. ದುರ್ಗೆಯ ಅನುಗ್ರಹ ಪಡೆದರೆ ಯಾವ ದುರ್ಜನರ ಕೈಗೆ ಸಿಗದಂತೆ ನಾವು ಪಾರಾಗುತ್ತೇವೆ ಎಂಬ ಸಂದೇಶವನ್ನು ಮಹಾಭಾರತ ನೀಡುತ್ತದೆ.


ವಿರಾಟ ಪರ್ವದಲ್ಲಿ ಎಲ್ಲ ಆಪತ್ತುಗಳಿಂದ ಪಾರಾಗಬಹುದೆಂಬದನ್ನು ತಿಳಿಸಿಕೊಡುತ್ತದೆ. ಶ್ರೀ ಸತ್ಯಧರ್ಮ ತೀರ್ಥರ ಮಾತಿನ ಮಹತ್ವ ತಿಳಿಯಬೇಕು. ನಿರ್ಜನ ಪ್ರದೇಶಗಳನ್ನೆಲ್ಲಾ ಹುಡುಕಿಕೊಂಡು ಬಂದರೂ ಸಿಕ್ಕಿಲ್ಲ ಎಂದು ಹೇಳುತ್ತಾರೆ. ಪ್ರಸಿದ್ಧ ರಾಜನ ರಾಜಧಾನಿಯಲ್ಲಿ ವಾಸ ಮಾಡಬೇಕು ಆದರೆ ಯಾರಿಗೂ ತಿಳಿಯದಂತೆ ಇರಬೇಕು ಎಂದು ಹೇಳಿತ್ತು ಎಂದು ಹೇಳುತ್ತಾರೆ. ನಿರ್ಜನ ಪ್ರದೇಶಗಳಲ್ಲಿ ಹುಡುಕಿದ್ದು ಪಾಂಡವರನ್ನಲ್ಲ ಪಾಂಡವರ ಹೆಜ್ಜೆ ಗುರುತುಗಳನ್ನು ಎಂದು ಸತ್ಯಧರ್ಮರು ಹೇಳುತ್ತಾರೆ. ಊರುಗಳಲ್ಲಿ ಹುಡುಕಿದ್ದು ಪಾಂಡವರನ್ನು ಎಂದು ಹೇಳುತ್ತಾರೆ. ಅರ್ಥ ಎಲ್ಲ ಕಡೆಯಲ್ಲಿಯೂ ಹುಡುಕಿದ್ದೇವೆ ಎಂಬ ಮಹಾಭಾರತದ ಸಂಪೂರ್ಣ ವಿವರವನ್ನು ಶ್ಲೋಕದ ಉದಾಹರಣೆಯೊಂದಿಗೆ ಹೇಳುತ್ತಾರೆ.  


ಜನ ನಿಬಿಡ ಪ್ರದೇಶಗಳಲ್ಲಿ ರಾಜಧಾನಿಗಳಲ್ಲೂ ಹುಡುಕಿದ್ದೇವೆ ಎಂದು ಹೇಳುತ್ತಾರೆ ಆದರೆ ಅಲ್ಲೆಲ್ಲೂ ಸಿಕ್ಕಿಲ್ಲ ಎಂದರೆ ಪಾಂಡವರು ಇಲ್ಲ ಎಂದು ಗೂಢಚಾರರು ಹೇಳುತ್ತಾರೆ. ಆದರೆ ಒಂದು ಸುದ್ದಿ ನಮಗಿದೆ. ವಿರಾಟ ರಾಜನ ಅರಮನೆಯಲ್ಲಿ ಕೀಚಕ ವಧೆಯಾಗಿದೆ ಅವನ ಸಹೋದರರೆಲ್ಲರೂ ಸತ್ತಿದ್ದಾರೆ. ಅವರ ಸಾವಿಗೆ ಗಂಧರ್ವರು ಸಾಯಿಸಿದ್ದಾರೆ ಎಂದು ಹೇಳುತ್ತಾರೆ. ಇಲ್ಲಿ ಸತ್ಯಧರ್ಮರು ಹೇಳುತ್ತಾರೆ, ಕೀಚಕ  ಮತ್ತವನ ಸೋದರರು ಸತ್ತರು ಅನ್ನುವ ಬದಲಿಗೆ ಭ್ರಾತೃಭಿಃ ಎಂದು ಕೂಡ ಪ್ರಯೋಗ ಮಾಡಿದ್ದಾರೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು ಎಂದು ಹೇಳಲು ಎರಡು ಪದಗಳನ್ನು ಬಳಸಿದ್ದಾರೆ, ಸತ್ಯಧರ್ಮರು ಹೇಳುತ್ತಾರೆ.


ಉತ್ತಮರ ಮೃತ್ಯುವನ್ನು ಬಯಸುವವರು ದುಷ್ಟರು. ಕೀಚಕ ಸತ್ತಾಗ ಅವನ ಸಹೋದರರು ಸಂತಸ ಪಡಬೇಕಿತ್ತು. ಸತ್ಯಧರ್ಮರು ಹೇಳುತ್ತಾರೆ. ಕೀಚಕನ ಸಹೋದರರೆಲ್ಲರೂ ಒಟ್ಟಾಗಿ ಬಂದಾಗ ಭೀಮಸೇನದೇವರು ಸಂಹರಿಸಿದರು ಎಂದು ಹೇಳುತ್ತಾರೆ. ಮಹಾಭಾರತದ ಶಬ್ದಗಳೆಲ್ಲವೂ ಸಾರ್ಥಕವಾದವು ಆಗಿವೆ ಎಂದು ಹೇಳುತ್ತಾರೆ. ಶ್ರೀಮದಾಚಾರ್ಯರು ವ್ಯರ್ಥದ ಮಾತುಗಳನ್ನು ಆಡದೇ ಇರುವಾಗ ವೇದವ್ಯಾಸರು ಹೇಗೆ ವ್ಯರ್ಥ ಮಾತನ್ನು ಆಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿಕೊಡುತ್ತಾರೆ. ಸತ್ಯಧರ್ಮ ತೀರ್ಥ ಶ್ರೀಪಾಂದಗಳವರು ಉದರ ಶಬ್ದಕ್ಕೆ ಸಂಶಯ ಎಂಬುದನ್ನು ಬಳಸಿದ್ದಾರೆ ಎಂದು ತಿಳಿಸಿಕೊಡುತ್ತಾರೆ.


ವನವಾಸದಲ್ಲಿ ಪಾಂಡವರು ಸುಖವಾಗಿದ್ದರು, ಅಕ್ಷಯ ಪಾತ್ರೆಯ ಸಹಾಯದಿಂದ ಅನೇಕಾನೇಕ ಜನರಿಗೆ ದಾನ ಧರ್ಮಗಳನ್ನು ಮಾಡುತ್ತಾ ಸುಖವಾಗಿದ್ದರು ಎಂದು ಹೇಳುತ್ತಾರೆ.


ಕರ್ಣ ಇನ್ನಷ್ಟು ಜನರನ್ನು ಕಳುಹಿಸಿ ಹುಡುಕಬೇಕು ಎಂದಾಗ, ದ್ರೋಣರು ಹೇಳುತ್ತಾರೆ ಅವರು ಸತ್ತಿರಲು ಸಾಧ್ಯವಿಲ್ಲ, ಅವರು ಹಾಗೆ ಮಾತನಾಡಬೇಡಿ ಎಂದು ಕೌರವರ ಸಭೆಯಲ್ಲಿ ಹೇಳುತತಾರೆ. ಐದು ಜನರು ಧರ್ಮಿಷ್ಠರು ಜಿತೇಂಧ್ರಿಯರು ಪರಾಕ್ರಮಿಗಳು ಎಂದು ಹೇಳುತ್ತಾರೆ. ಮನುಷ್ಯ ಯಾರ ಅಧೀನಕ್ಕೂ ಒಳಗಾಗಬಾರದು ಧರ್ಮ ನ್ಯಾಯದಿಂದ ಇರುವವ ಧೈರ್ಯದಿಂದ ಇರುತ್ತಾರೆ. ಎಂದು ದ್ರೋಣಾಚಾರ್ಯರು ಇಂತಹ ಪಾಂಡವರಿಗೆ ಏನೂ ಆಗಲು ಸಾಧ್ಯವಿಲ್ಲ ಎನ್ನುತ್ತಾರೆ. ತೇಜಸ್ಸಿನ ಮೂರ್ತಿ ಯುಧಿಷ್ಠಿರ ಅವನ ಶಕ್ತಿ ಎಂತದ್ದದ ಎಂದರೆ ಅವನ ಕಣ್ಣೋಟದಿಂದ ಎಲ್ಲರ ಶಕ್ತಿಯನ್ನು ಹೀರಬಹುದು ಆದರೆ ಅವನು ಅಂತಹ ಕೆಲಸ ಮಾಡಲಾರ ಅದಕ್ಕೆ ಅವನು ಯಾರಿಗೂ ಹೆದರುವುದಿಲ್ಲ. ನಾವು ಹೆದರುತತೇವೆ ಎಂದರೆ ನಾವೇನೋ ತಪ್ಪು ಮಾಡಿದ್ದೇವೆ ಎಂದು ಅರ್ಥ.


ದೇವತೆಗಳಲ್ಲಿ ಬ್ರಹ್ಮದೇವರು ಉತ್ತಮ ದುರ್ಜನರಲ್ಲಿ ಕಲಿ ಅಷ್ಟು ಪ್ರಭಾವಶಾಲಿ ಕಲಿ ನಳ ರಾಜನು ತಪ್ಪು ಮಾಡುವುದನ್ನು ಕಾಯುತ್ತಿದ್ದ ಎಂದು ಹೇಳಿದ್ದಾರೆ. ಸಣ್ಣ ತಪ್ಪಿಗೂ ಕಲಿ ಪ್ರವೇಶ ಮಾಡುತ್ತಾನೆ ಎಂಬುದಕ್ಕೆ ಇವೆಲ್ಲವೂ ಸಾಕ್ಷಿ. ಧರ್ಮಾಚರಣೆಯ ಮಹತ್ವ ನಾವು ಧರ್ಮಾಚರಣೆಯನ್ನು ತಪ್ಪದೇ ಮಾಡುತತಿದ್ದೇವೆ ಎಂದು ಅರ್ಥ ಆದರೆ ಕಷ್ಟಗಳು ಧರ್ಮದಲ್ಲಿ ಆದ ಚ್ಯುತಿಯೇ ಕಾರಣ ಎಂದು ಹೇಳುತ್ತಾರೆ.


ಕೇವಲ ಬುದ್ಧಿ ಬಲ ಬಾಹುಬಲದಿಂದ ಸಂರಕ್ಷಿತರಾಗುವುದಿಲ್ಲ ಸಾಧ್ಯವಿಲ್ಲ ಆಚರಣೆಯೂ ಅಷ್ಠ ಮುಖ್ಯ ಎಂದು ಹೇಳಿದ್ದಾರೆ. ಸತ್ಯಧರ್ಮರು ಹೇಳುತ್ತಾರೆ, ಗೀತಾ ಭಾಷ್ಯದ ಉದಾಹರಣೆಯಿಂದ ಉಲ್ಲೇಖಿಸುತ್ತಾರೆ ಪರಮಾತ್ಮನು ಸರ್ವಗತ ಹಾಗೂ ನಿತ್ಯ ಎಂದು ಹೇಳಿದ್ದಾರೆ ಭಗವದ್ಗೀತೆಯಲ್ಲಿ ಅಪ್ರಮೇಯ ಅಂದರೆ ಪ್ರಕಾಶ ಪರಮಾತ್ಮನಲ್ಲಿ ಅಪ್ರತಿಮವಾದ ಕಾಂತಿಯಿದೆ ಅದನ್ನು ತಿಳಿಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಯುಧಿಷ್ಠಿರನ ಗುಣಗಳನ್ನು ನಾವು ತಿಳಿಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇನ್ನೊಂದು ರೀತಿಯಲ್ಲಿ ಸತ್ಯಧರ್ಮರು ಹೇಳುತ್ತಾರೆ. ದುರ್ಯೋಧನ ಯುದ್ಧ ಮಾಡದೇ ಇದ್ದರೂ ಕಣ್ಣಿನಿಂದಲೇ ನಿಮ್ಮನ್ನು ಸಂಹರಿಸುವ ಶಕ್ತಿ ಇದೆ ಎಂಬ ಎಚ್ಚರಿಕೆಯನ್ನು ದ್ರೋಣರು ಎಚ್ಚರಿಸಿದ್ದಾರೆ ಎಂದು ಹೇಳುತ್ತಾರೆ. ಹೀಗೆ ಅರ್ಥ ಮಾಡಿಕೊಳ್ಳಬೇಕು ಎಂದು ಸತ್ಯಧರ್ಮರು ಹೇಳುತ್ತಾರೆ. ಮನುಷ್ಯನು ಧರ್ಮದಿಂದ ಇದ್ದರೆ ಪರಮಾತ್ಮನ ರಕ್ಷಾಕವಚ ತೊಟ್ಟಿದ್ದರೆ ಯಾರಿಗೂ ಹೆದರಬೇಕಿಲ್ಲ ಎಂದು ಈ ತತ್ವವನ್ನು ತಿಳಿಸುತ್ತಾರೆ. ನಾವು ನಮ್ಮ ಧರ್ಮವನ್ನು ತಪ್ಪದೇ ಮಾಡಬೇಕು ಎಂದು ಮಹಾಭಾರತದ ಮೂಲಕ ಹೇಳಿದ್ದಾರೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top