"ರವಿ ಕಾಣದ್ದನ್ನು, ಕವಿ ಕಂಡ" ಎಂಬಂತೆ. ಒಂದು ಕೈತೋಟವು ಹೇಗೆ ವಿವಿಧ ಹೂ ಬಳ್ಳಿಗಳಿಂದ ವರ್ಣಮಯವಾಗಿರುತ್ತದೆಯೋ ಹಾಗೆಯೇ ನಮ್ಮ ಪರಿಸರವು ವಿವಿಧ ರೀತಿಯ ಪ್ರಾಣಿ-ಪಕ್ಷಿಗಳು, ಮರ- ಗಿಡಗಳಿಂದ ವರ್ಣಮಯವಾಗಿದೆ. ಆದರೆ ನಾವು ನಮ್ಮ ಕೈಯಾರೆ ಈ ಸುಂದರವಾದ ಪರಿಸರವನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ. ಪರಿಸರದಿಂದ ನಾವಿಂದು ಬದುಕಿದ್ದೇವೆ ಹೊರತು ನಮ್ಮಿಂದ ಪರಿಸರವಲ್ಲ. ಪರಿಸರ ನಮ್ಮ ತಾಯಿಯಂತೆ ಸದಾಕಾಲ ನಮ್ಮನ್ನು ಸಲಹುತ್ತಾಳೆ. ಆದರೆ ನಾವಿಂದು ನಮ್ಮನ್ನು ಸಲಹುತ್ತಿರುವ ಪರಿಸರವನ್ನೇ ನಾಶಮಾಡಲು ಹೊರಟಿದ್ದೇವೆ. ಹಿರಿಯ ಒಂದು ಮಾತಿದೆ "ಪರಿಸರವು ನಮ್ಮ ಆಸೆಗಳನ್ನು ಪೂರೈಸಬಲ್ಲದು, ಆದರೆ ದುರಾಸೆಗಳನಲ್ಲ"ಎಂದಿದ್ದಾರೆ.
ನಾವಿಂದು ಕಾಡುಗಳನ್ನು ಕಡಿಯುತ್ತಿದ್ದೇವೆ, ಗಾಳಿ ನೀರನ್ನು ವಿಷವನ್ನಾಗಿಸುತ್ತಿದ್ದೇವೆ. ಈ ಕಾರಣಕ್ಕೆ ಸರಿಯಾಗಿ ನಾವಿಂದು ಒಂದೇ ದಿನದಲ್ಲಿ ವರ್ಷದ ಎಲ್ಲಾ ಕಾಲಗಳನ್ನು ನೋಡುವಂತಾಗಿದೆ. ಅಂದರೆ ಬೆಳಿಗ್ಗೆ ಚಳಿಗಾಲ, ಮಧ್ಯಾಹ್ನ ಬೇಸಿಗೆಗಾಲ ಸಂಜೆ ಮಳೆಗಾಲ ಒಂದೇ ದಿನದಲ್ಲಿ ವರ್ಷದ ಎಲ್ಲಾ ಕಾಲವನ್ನು ನೋಡಬಹುದಾದ ದುಸ್ಥಿತಿಗೆ ತಲುಪಿದ್ದೇವೆ.
ಅಭಿವೃದ್ಧಿ ಎಂಬ ಹೆಸರಿನಲ್ಲಿ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಎಷ್ಟರ ಮಟ್ಟಿಗೆ ಎ೦ದರೆ ಹೆಸರಾಗಿರುವ ಗಿಡಮರಗಳನ್ನು ಕಂದು ಬಣ್ಣಕ್ಕೆ ಬದಲಾಯಿಸುವ ಚಮತ್ಕಾರವನ್ನು ಕಲಿತುಬಿಟ್ಟಿದ್ದೇವೆ. ಅಂದರೆ ಹಚ್ಚ ಹಸಿರಾಗಿದ್ದ ಗಿಡಮರಗಳಿಗೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ರಸ್ತೆಗಳ ಕಾಂಕ್ರಿಟೀಕರಣದ ಧೂಳಿಂದ ಗಿಡಮರಗಳು ಕಂದು ಬಣ್ಣಕ್ಕೆ ಬದಲಾಗುತ್ತಿವೆ. ಈ ಬದಲಾವಣೆಯಿಂದಾಗಿಯೇ ಗಿಡಮರಗಳಅಭಿವೃದ್ಧಿಯು ಕುಂಠಿತವಾಗಿದೆ. ಕಾರಣ ಧೂಳಿನ ಕಣಗಳು ಈ ಗಿಡಗಳ ಎಲೆಗಳ ಮೇಲೆ ಆವೃತವಾಗಿರುವುದರಿಂದ ಈ ಎಲೆಗಳಿಗೆ ಸೂರ್ಯನ ಶಾಖ ಶಕ್ತಿಯನ್ನು ಹೀರಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಗಿಡ ಮರಗಳ ಅಭಿವೃದ್ಧಿಯು ಕುಂಠಿತವಾಗಿದೆ. ಹಿಂದೆ ಪಟ್ಟಣ ಎಂದರೆ ಹೆಚ್ಚು ಜನಸಂದಣಿ ವ್ಯಾಪಾರ ವಹಿವಾಟುಗಳು ಇರುವ ಜಾಗವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ, ಈಗ ಪಟ್ಟಣ ಎಂದರೆ ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಎಲ್ಲಾ ರೀತಿಯ ಮಾಲಿನ್ಯಗಳಿಂದ ಕೂಡಿರುವ ಜಾಗವಾಗಿದೆ. ಹಿಂದೆ ನಮಗೆಲ್ಲ ವಾಹನಗಳಲ್ಲಿ ಹೋಗುವಾಗ ಕಿಟಕಿ ಬದಿಯಲ್ಲಿ ಕುಳಿತುಕೊಳ್ಳುವುದೆಂದರೆ ಒಂದು ರೀತಿಯ ಹಬ್ಬ. ಏಕೆಂದರೆ ಆ ಕಿಟಕಿಬದಿಯಲ್ಲಿ ಕುಳಿತುಕೊಂಡು ಸ್ವಚ್ಛವಾದ ಗಾಳಿಯನ್ನು ಆನಂದಿಸುತ್ತ, ಹಚ್ಚ ಹಸಿರಿನಿಂದ ಕೂಡಿರುವ ಪರಿಸರವನ್ನು ನೋಡಲು ಒಂದು ರೀತಿಯ ಮಜ ಆದರೆ ಈಗ ಕಾಲ ಬದಲಾಗಿದೆ.
ಹಿಂದೆ ವಾಹನದಲ್ಲಿ ಕಿಟಕಿ ಬದಿಯ ಸೀಟಿಗಾಗಿ ಜಗಳವಾಡುತ್ತಿದ್ದೆವು. ಈಗ ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಳ್ಳುವುದಿಲ್ಲ ಎ೦ದು ಹೇಳಿ ಜಗಳವಾಡುತ್ತಿದ್ದೇವೆ. ನಾವು ಎಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂದರೆ ಕಾಲಿಗೆ ಹಾಕುವ ಚಪ್ಪಲಿಯನ್ನು AC ರೂಂ ನಿಂದ ಖರೀದಿಸುತ್ತಿದ್ದೇವೆ, ತಿನ್ನುವ ಆಹಾರಪದಾರ್ಥವನ್ನು ಬೀದಿ ಬದಿಯಿಂದ ಖರೀದಿಸುತ್ತಿದ್ದೇವೆ. ನಮ್ಮಿಂದಲೇ ಎಲ್ಲಾ ಎಂದು ಹೇಳುತ್ತ ತಿರುಗುತ್ತಿದ್ದೇವೆ ಆದರೆ ನಮ್ಮಿಂದ ಪರಿಸರ ಅಲ್ಲ ಪರಿಸರದಿಂದ ನಾವು ಎಂಬುದು ಅರಿಯಬೇಕಿದೆ. ಮೊದಲು ಹೊಟ್ಟೆಪಾಡಿಗಾಗಿ ಬೇಟೆಯಾಡುವುದನ್ನು ಆರಂಭಿಸಿದ ಮಾನವ ನಂತರ ಮೋಜಿಗಾಗಿ ಇದನ್ನು ಮುಂದುವರಿಸಿದ ತನ್ನ ಸೌಕರ್ಯಕ್ಕಾಗಿ ಕಾರ್ಖಾನೆಗಳನ್ನು ನಿರ್ಮಿಸಿದ.
ಹೆಚ್ಚಾಗಿ ಕಾರ್ಖಾನೆಗಳನ್ನು ನದಿ ತೀರದಲ್ಲಿಯೇ ನಿರ್ಮಿಸಿದ. ಏಕೆಂದರೆ ಮಲಿನದ ನೀರನ್ನು ನದಿಗೇ ಕಳಿಸುವುದಕ್ಕೆ ಹೀಗಾಗಿ ವಾಯುಮಾಲಿನ್ಯದ ಜೊತೆಗೆ ಜಲಮಾಲಿನ್ಯವು ಉಂಟಾಗುತ್ತದೆ. ಜಲಮಾಲಿನ್ಯದಿಂದ ಜಲಚರಗಳು ನಾಶವಾಗುತ್ತಿವೆ. ವಾಯುಮಾಲಿನ್ಯ ಮಾನವನ ದೇಹಸ್ಥಿತಿಯನ್ನೇ ಹದಗೆಡಿಸುತ್ತಿದೆ. ನಮ್ಮ ಭಾರತೀಯರಲ್ಲಿ ಒಂದು ಮಾತಿದೆ- "ಗಂಗಾಸ್ನಾನ ತುಂಗಾಪಾನ "ಎ೦ದು. ಆದರೆ ಇಂದು ಗಂಗಾಸ್ನಾನ ಮಾಡಿದವರು ಚರ್ಮರೋಗದಿಂದ ಬಳಲುತ್ತಿದ್ದಾರೆ. ತುಂಗೆಯ ನೀರನ್ನು ಕುಡಿಯುತ್ತಾ ಶ್ವಾಸಕೋಶದ ತೊಂದರೆಯಾಗುತ್ತಿದೆ. ಕೇವಲ ಕಾರ್ಖಾನೆಗಳೇ ಅಲ್ಲ. ಮಾನವ ತನ್ನ ಐಷಾರಾಮಿ ಜೀವನಕ್ಕೆ ಲೋಹಗಳನ್ನು ಅತಿಯಾಗಿ ಅಪೇಕ್ಷಿಸುತ್ತಿದ್ದಾನೆ. ಪ್ರತಿಯೊಂದು ಪ್ರದೇಶದಲ್ಲೂ ಗಣಿಗಾರಿಕೆ ನಡೆಯುತ್ತಿದೆ. ಭೂ ತಾಯಿಯ ಒಡಲನ್ನೇ ಬಗೆದು ಅಲ್ಲಿ ಸಿಗುವ ಅದಿರನ್ನು ತೆಗೆಯುತ್ತಿದ್ದಾನೆ. ಗಣಿಗಾರಿಕೆಯಿಂದಾಗಿ ಅರಣ್ಯ ನಾಶ, ಭೂಸವೆತ ಮುಂತಾದ ದುಷ್ಪರಿಣಾಗಳು ಉಂಟಾಗುತ್ತಿವೆ.
ನಾವು ಯಾವುದನ್ನು ಹೇಗೆ ನೋಡುತ್ತೇವೋ, ಹಾಗೆ ಆ ವಸ್ತು ನಮಗೆ ಅರ್ಥವಾಗುತ್ತದೆ. ಒಂದೇ ವಸ್ತುವಿನ ಪ್ರಯೋಜನ ಅನೇಕ ರೀತಿಯಲ್ಲಿ ಇರಬಹುದು, ಆದರೆ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಉಪಯುಕ್ತಕೆ ನಿರ್ಧರಿಸಲ್ಪಡುತ್ತದೆ .ಅಂದರೆ ನಾವು ಈ ಗಿಡಮರಗಳನ್ನು ಕಡಿದೇ ರಸ್ತೆಗಳನ್ನು ದೊಡ್ಡದು ಮಾಡಿ ಅಭಿವೃದ್ಧಿ ಮಾಡಬೇಕೆಂದೇನಿರಲಿಲ್ಲ. ಇದ್ದ ರಸ್ತೆಗೆ ಅಚ್ಚುಕಟ್ಟಾಗಿ ಕಾಂಕ್ರೇಟ್ ಮಾಡಿದ್ದಾರೆ ಸಾಕಾಗಿತ್ತು. ಆದರೆ ನಾವು ಇಂದು ಅಭಿವೃದ್ಧಿ ಎಂಬ ಹೆಸರಿನಲ್ಲಿ ಬರಿದಾಗದ ಸಂಪನ್ಮೂಲಗಳನ್ನು ಬರಿದಾಗುವ ಸಂಪನ್ಮೂಲವನ್ನಾಗಿ ಬದಲಾಯಿಸಿದ್ದೇವೆ. ಪ್ರಕೃತಿ ನಮಗೊಂದು ವರದಾನ ಅನೇಕ ವಿಸ್ಮಯಗಳನ್ನು ನಮಗೆ ನೀಡಿದೆ. ಪ್ರಕೃತಿಯ ಅಂಗವಾಗಿ ನಾವು ಜೀವಿಸುತ್ತಿದ್ದೇವೆ.
ಪ್ರಕೃತಿಯೇ ನಮಗೆಲ್ಲವನ್ನು ನೀಡುತ್ತಿದೆ. ಆದರೆ ಅದನ್ನು ನಾವು ದುರುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಪ್ರಕೃತಿಯ ಮೇಲೆ ನಿರಂತರ ಸವಾರಿ ಮಾಡುತ್ತಿದ್ದೇವೆ. ನಮ್ಮ ಒತ್ತಡ ತಾಳಲಾರದೇ ಅದು ಆಗಾಗ ಮುನಿಯುತ್ತದೆ. ಪ್ರಕೃತಿಯ ಮುನಿಸಿನ ಪರಿಣಾಮವಾಗಿಯೇ ಪ್ರವಾಹ, ಸುನಾಮಿ ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದು. ನಮ್ಮ ಈ ಪರಿಸರ ಇಂದು ತನ್ನ ಮೂಲ ಸ್ವಾಭಾವಿಕ ನೈಜ ಸ್ಥಿತಿಯನ್ನು ಉಳಿಸಿಕೊಂಡಿಲ್ಲ ಇಂದು ಪ್ರಕೃತಿ ಕೆಟ್ಟಿದೆ, ಕೆಡುತ್ತಿದೆ. ಪರಿಸರ ಕೆಡಲು ನಾನು ಕಾರಣ ಇವೆ. ಮಾನವನನು ಆರೋಗ್ಯಕರವಾದ ಜೀವನವನ್ನು ನಡೆಸಲು ಶುದ್ಧವಾದ ಗಾಳಿ ಬೇಕು ಕಲುಷಿತಗೊಳ್ಳದ ಶುದ್ಧವಾದ ಕುಡಿಯುವ ನೀರು ಬೇಕು ಕುಡಿಯುವ ನೀರು ಕಲುಷಿತವಾದರೆ ನಾನಾ ಕಾಯಿಲೆಗಳು ಬರುತ್ತದೆ. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ಅವುಗಳಿಂದಲೀ ಪರಿಸರವನ್ನು ತುಂಬಿದರೆ ಭೂ ಕಂಪವಾಗುತ್ತದೆ.
ನಮ್ಮ ಮನೆಗಳನ್ನು ಊರನ್ನು ಶುಭ್ರವಾಗಿ ಇಡದಿದ್ದರೆ ಪರಿಸರ ಹಾಳಾ ಹಾಳಾಗುತ್ತದೆ. ಒಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಸ್ಕೃತಿಯನ್ನು ನಾವು ವಿವೇಚನೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದ ಆರ್ಥಿಕ ಮಟ್ಟವನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಕೃತಿಯ ಬುಡಕ್ಕೆ ಕೊಡಲಿಬಿದ್ದಿರುವುದನ್ನು ಗಮನಿಸಬಹುದು. ಪರಿಸರ ಸಂರಕ್ಷಣೆ ನಾವು ಅಂದುಕೊಂಡಂತೆ ಸುಲಭವಿಲ್ಲದಿದ್ದರೂ ಅದನ್ನು ನಾವು ಸಾಧಿಸುವುದು ಕಷ್ಟದ ವಿಷಯವೇನಲ್ಲ ಮನಸ್ಸಿದ್ದರೆ ಮಾರ್ಗ ಎಂಬಂತೆ ವಿದ್ಯಾರ್ಥಿಗಳಾದನಾವು ಪರಿಸರದ ಬಗ್ಗೆ ಕಾಳಜಿಯನ್ನು ವಹಿಸೋಣ ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗೂ ಪರಿಸರದ ಬಗ್ಗೆ ಅರಿವನ್ನು ಮೂಡಿಸೋಣ "ಪ್ರಕೃತಿ ರಕ್ಷಿತೋ" ಎಂಬಂತೆ. ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿಯು ನಮ್ಮನ್ನು ರಕ್ಷಿಸುತ್ತದೆ.
"ಬೇರಿದ್ದರೆ ಮರವಿದೆ,
ನೀರಿದ್ದರೆ ನದಿಯಿದೆ,
ಸಂಸ್ಕಾರವಿದ್ದರೆ ಸಂಸ್ಕೃತಿಯಿದೆ,
ಅಂತೆಯೇ ಉತ್ತಮ ಪರಿಸರವಿದ್ದರೆ
ಮಾತ್ರ ಅಭಿವೃದ್ಧಿಯಿದೆ".
- ಹರ್ಷಿತಾ, ಮಡಂತ್ಯಾರು,
ಧರ್ಮಸ್ಥಳ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ