ಪಣಜಿ (ವಾಸ್ಕೊ): ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ಸಂಘಟನೆ ಇದು ಗೋವಾ ಕನ್ನಡಿಗರ ಆಸ್ತಿ. ಗೋವಾ ಕನ್ನಡಿಗರ ಸೇವೆಗಾಗಿ ಕರವೇ ಪದಾಧಿಕಾರಿಗಳು ಸದಾ ಸಿದ್ಧರಿದ್ದೇವೆ. ಎಲ್ಲರ ಸಹಕಾರದಿಂದ ಇಂದು ದೊಡ್ಡ ಪ್ರಮಾಣದಲ್ಲಿ ಸಂಘಟನೆ ಬೆಳೆದಿದೆ. ಇದಕ್ಕಾಗಿ ನಾನು ಸಮಸ್ತ ಗೋವಾ ಕನ್ನಡಿಗರಿಗೆ ಹಾಗೂ ಕರವೇ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಕುಮಾರ್ ಶೆಟ್ಟಿ ಬಣದ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ನುಡಿದರು.
ಗೋವಾದ ವಾಸ್ಕೊದಲ್ಲಿ ಭಾನುವಾರ ಕರವೇ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು, ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಾಟೀಕರ್ ನೂತನವಾಗಿ ಆಯ್ಕೆಯಾದ ಕರವೇ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳ ಮಾಹಿತಿ ನೀಡಿದರು.
ಕರವೇ ಗೋವಾ (ಪ್ರವೀಣ್ ಕುಮಾರ್ ಶೆಟ್ಟಿ) ಬಣ ರಾಜ್ಯ ಸಮಿತಿ ಪದಾಧಿಕಾರಿಗಳು:
ರಾಜ್ಯಾಧ್ಯಕ್ಷ- ಮಂಜುನಾಥ್ ನಾಟಿಕಾರ, ರಾಜ್ಯ ಕಾರ್ಯದರ್ಶಿ- ಶಿವಾನಂದ್ ಮಸಬಿನಾಳ, ರಾಜ್ಯ ಖಜಾಂಚಿ- ವೈಎಸ್. ಬಿರಾದರ್, ರಾಜ್ಯ ಉಪಾಧ್ಯಕ್ಷರು- ಯಶ್ವಂತ್ ಮಾದರ, ರಾಜ್ಯ ಉಪಾಧ್ಯಕ್ಷರು- ರುದ್ರಯ್ಯ ಸ್ವಾಮಿ ಹಿರೇಮಠ, ರಾಜ್ಯ ಕಾರ್ಯದರ್ಶಿ- ಶಿವಾನಂದ್ ಮಸಬಿನಾಳ, ರಾಜ್ಯ ಸಂಘಟನಾ ಕಾರ್ಯದರ್ಶಿ-ರಮೇಶ್ ಗೌಡರ, ರಾಜ್ಯ ಪ್ರಧಾನ ಕಾರ್ಯದರ್ಶಿ-ಚಂದ್ರಶೇಖರ್ ವಾಲ್ಮೀಕಿ, ರಾಜ್ಯ ಪ್ರಧಾನ ಕಾರ್ಯದರ್ಶಿ-ಚಂದ್ರಶೇಖರ್ ಮುರಾಳ, ರಾಜ್ಯ ಸಹಕಾರ್ಯದರ್ಶಿ-ಪರಶುರಾಮ್ ಪೂಜಾರಿ, ರಾಜ್ಯ ಸಹಕಾರ್ಯದರ್ಶಿ- ಶಿವು ತಲ್ವಾರ್, ರಾಜ್ಯ ಸಂಚಾಲಕರು- ಕರಿಯಪ್ಪ ಮುಟ್ಟಗಿ, ಮಾಧ್ಯಮ ಸಂಚಾಲಕರು- ರಮೇಶ್ ಮಾದರ್, ಯುವ ಘಟಕದ ಅಧ್ಯಕ್ಷರು- ಮನೀಶ್ ಚಲವಾದಿ, ರಾಜ್ಯ ಮಹಿಳಾ ಘಟಕದ ಮುಖಂಡರು- ಪಾರ್ವತಿ ಚಲವಾದಿ, ರಾಜ್ಯ ಮಹಿಳಾ ಘಟಕದ ಮುಖಂಡರು- ಭಾಗ್ಯಶ್ರೀ ನಾಯಕ್, ರಾಜ್ಯ ಮಹಿಳಾ ಘಟಕದ ಮುಖಂಡರು- ಜಯಶ್ರೀ ಪಿಲೈ, ರಾಜ್ಯ ಮಹಿಳಾ ಘಟಕದ ಮುಖಂಡರು- ಗೀತಾ ಚಲವಾದಿ ಆಯ್ಕೆಯಾಗಿದ್ದಾರೆ, ಕರವೇ ಗೋವಾ ರಾಜ್ಯ ಸಲಹೆಗಾರರಾಗಿ-ಮಹೇಶ್ ಹಡಪದ, ಬಸವರಾಜ್ ಗೌಡರ್, ಚಾಂದ್ ಸಾಬ್ ನದಾಫ್, ಪರಶುರಾಮ್ ಮಡಿಕೆಶ್ವರ್, ಪರಶುರಾಮ್ ಬೆಳಗಲ್ ಆಯ್ಕೆಯಾಗಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ