ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೀಸೈಡ್ ವತಿಯಿಂದ "ಗುರುವಂದನಾ' ಸೆ.1ರಂದು ಶಿಕ್ಷಕರಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಆಯೋಜಿಸ ಲಾಗಿತ್ತು. ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಜರುಗಿದ ಈ ಸ್ಪರ್ಧೆಯನ್ನು ಎಸ್.ಎಲ್.ಶೇಟ್ ಡೈಮಂಡ್ ಹೌಸ್, ಲೇಡಿಹಿಲ್, ಮಂಗಳೂರು ಇಲ್ಲಿನ ರವೀಂದ್ರ ಶೇಟ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಭಾಟಿಸಿದರು.
ಉದ್ಭಾಟನಾ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181ರ ವಲಯ 3ರ ಅಸಿಸ್ಟೆಂಟ್ ಗವರ್ನರ್ ರೋ.ಡಾ|। ರಂಜನ್ ಆರ್.ಕೆ, ಕ್ಷಬಿನ ಸಲಹೆಗಾರರಾದ ರೊ. ಮಾಧವ ಸುವರ್ಣ ಅವರು ಉಪಸ್ಥಿತರಿದ್ದರು. ಸುಮಾರು 29 ಶಾಲಾ ಕಾಲೇಜಿನ 350ಕ್ಕೂ ಅಧಿಕ ಶಿಕ್ಷಕರು ಈ ಸ್ಪರ್ಧಾಕೂಟದಲ್ಲಿ ಭಾಗಿಯಾಗಿದ್ದರು. ಹಾಡುಗಾರಿಕೆ, ನೃತ್ಯ, ರಸಪ್ರಶ್ನೆ ಹಾಗೂ ಇತರ ಪ್ರತಿಭಾ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಡಿಸ್ಟಿಕ್ಟ್ ಗವರ್ನರ್ ರೊ.ವಿಕ್ರಮ್ ದತ್ತ ಇವರು ಮುಖ್ಯ ಅತಿಥಿಯಾಗಿ ರೊ. ರಾಜೇಂದ್ರ ಕಲ್ಪಾವಿ, ರೊ. ಯತೀಶ್ ಬೈಕಂಪಾಡಿ ಭಾಗವಹಿಸಿದ್ದರು.
"ಅನಂತಮಿತ್ರ ಕಲ್ಬಾವಿ ಶಿಕ್ಷಕೋತ್ತಮ ಪ್ರಶಸ್ತಿ'ಯನ್ನು ನಿವೃತ್ತ ಅಧ್ಯಾಪಕಿ ಶ್ರೀಮತಿ ಭಾರತಿ ಎಂ. ಇವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮ೦ಗಳೂರು ರೋಟರಿ ಸೀಸೈಡ್ ಅಧ್ಯಕ್ಷ ರೊ. ಹೀರಾಚಂದ್ ಕರ್ಕೇರ, ಕಾರ್ಯದರ್ಶಿ ರೊ. ಅಶೋಕ್ ಎಂ.ಕೆ ವೃತ್ತಿ ಸೇವೆ ನಿರ್ದೇಶಕ ರೊ. ಕಿರಣ್ ಕುಮಾರ್ ಮತ್ತು ಶಿಕ್ಷಕರ ಪ್ರತಿಭಾ ಸ್ಪರ್ಧೆಯ ಸಂಚಾಲಕ ರೊ. ನೆಲ್ಸನ್ ಗೋವಿಯಸ್ ಹಾಗೂ ರೋಟರಿ ಸದಸ್ಯರು ಪಾಲ್ಗೊಂಡಿದ್ದರು. ರೊ. ಕದ್ರಿ ಮನೋಹರ ಇವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ