ಸೆ.5: ಕಟೀಲಿನಲ್ಲಿ ಕಚುಸಾಪ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನ
ಮಂಗಳೂರು: ಸೆ.5ರಂದು ಕಟೀಲಿನ ದೇವಾಲಯದ ಎದುರಿನ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಏಳನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ ನಡೆಯಲಿದೆ.
ಕಟೀಲು ಹರಿನಾರಾಯಣ ಅಸ್ರಣ್ಣನವರು ದೀಪ ಬೆಳಗಿಸಿ ಉದ್ಘಾಟಿಸುವ ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು ಆಗಮಿಸಲಿದ್ದು ಹಿರಿಯ ಶಿಕ್ಷಕ ಹೊಸಕೋಟೆ ಶ್ರೀಕಾಂತ್ ಕೆ.ವಿ ಸರ್ವಾಧ್ಯಕ್ಷತೆ ವಹಿಸಲಿರುವರು. ಪರಿಷತ್ತಿನ ಮುಖ್ಯಸ್ಥ ಕೃಷ್ಣ ಮೂರ್ತಿ ಕುಲಕರ್ಣಿ ಮತ್ತು ಜಯಾನಂದ ಪೆರಾಜೆ, ಪ್ರೊ ಜಿ.ಯು ನಾಯಕ ಉಪಸ್ಥಿತರಿರುವರು.
ಹರಿನಾರಾಯಣ ಅಸ್ರಣ್ಣ ಮತ್ತು ಹರಿಕೃಷ್ಣ ಪುನರೂರು ಅವರಿಗೆ "ಚುಟುಕು ದಾಸೋಹ" ಮತ್ತು ವಿ.ಬಿ ಕುಳಮರ್ವ ಕಾಸರಗೋಡು, ಡಾ ಸುರೇಶ ನೆಗಳಗುಳಿ ಮಂಗಳೂರು, ಮುನಿರಾಜ ರೆಂಜಾಳ, ಮೂಡಬಿದಿರೆ ಜಯಾನಂದ ಪೆರಾಜೆ ಬಂಟ್ವಾಳ, ಶಾಂತಾ ಪುತ್ತೂರು, ಸುಮಲತಾ ಬಿ.ಎಸ್ ಬಾಣಸವಾಡಿ, ಡಾ ಪ್ರಭುಸ್ವಾಮಿ ಹಾಲಿವಾಡಿ ಮಠ ಹಂಸಬಾವಿ, ವಿದ್ವಾನ್ ರಘುಪತಿ ಭಟ್ ಉಡುಪಿ, ರವಿರಾಜ್ ತಿರುಮಲೆ ಹಾನಗಲ್, ರವೀಂದ್ರ ಶೆಟ್ಟಿ ಬಳಂಜ ಇವರನ್ನು "ಚುಟುಕು ಚಿನ್ಮಯಿ" ಪ್ರಶಸ್ತಿ ಸಹಿತ ಅಭಿನಂದಿಸಲಾಗುವುದು. ರಾಜು ಎನ್ ಆಚಾರ್ಯ ಅಭಿನಂದನಾ ಭಾಷಣ ಮಾಡಲಿದ್ದು ಅಪೂರ್ವ ಕಾರಂತ ನಿರ್ವಹಣೆ ಮಾಡಲಿರುವರು.
ಅನಂತರ ಕಾಸರಗೋಡು ಡಾ ವಾಣಿಶ್ರೀ ಮತ್ತು ಗುರುರಾಜ ಬಳಗದವರ ಸಾಂಸ್ಕೃತಿಕ ಕಾರ್ಯಕ್ರಮಗಳೂ ಎನ್ ವಿ ರಮೇಶ್ ಅಧ್ಯಕ್ಷತೆಯಲ್ಲಿ ವಿದ್ವಾನ್ ರಘುಪತಿ ಭಟ್ ಹಾಗೂ ಸುರೇಶ ಕಟೀಲು ಇವರಿಂದ ಉಪಾನ್ಯಾಸ ಮಾಲಿಕೆಗಳೂ ರೇಖಾ ಸುದೇಶ ರಾವ್ ನಿರ್ವಹಣೆಯಲ್ಲಿ ನಡೆಯಲಿರುವುದು.
ರಟ್ಟೇಹಳ್ಳಿ ಶೇಖರ ಗೌಡರ ಅಧ್ಯಕ್ಷತೆಯಲ್ಲಿ ಜರಗಲಿರುವ ಕವಿಗೋಷ್ಠಿಯಲ್ಲಿ ಮಾಲಗಿ ವಸಂತ ನಾಯಕರ ಆಶಯ ನುಡಿ ಸಹಿತ ಡಾ ವಾಣಶ್ರೀ,ಪ್ರೇಮಾ ಬಿರಾದಾರ,ಗುರುರಾಜ ಕಾಸರಗೋಡು,ಪ್ರೇಮಾ ಆರ್ ಶೆಟ್ಟಿ, ಜಯಶ್ರೀ ಶೆಣೈ,ಸೂರ್ಯನಾರಾಯಣ ಸೈಪಂಗಲ್ಲು, ಜಯರಾಮ ಮಾಣಿ, ಸೋನಿತಾ ನೇರಳೆಕಟ್ಟೆ, ರವೀಂದ್ರ ಕುಕ್ಕಾಜೆ, ಬಾವುಟ ಬಸವರಾಜ್, ಹೇಮಾವತಿ ಸಾಲೆತ್ತೂರು, ಪ್ರೇಮಲತಾ ಮಂಚಿ, ತುಳಸಿ ಕೈರಂಗಳ, ಶ್ವೇತಾ ಡಿಬಡಗ ಬೆಳ್ಳೂರು, ಲಕ್ಷ್ಮೀ ಕಿಲೆಂಜಾರ ರವರ ಭಾಗವಹಿಸುವಿಕೆಯಲ್ಲಿ ನಡೆಯಲಿದ್ದು ಗಂಗಯ್ಯ ಕುಲಕರ್ಣಿ ನಿರೂಪಣೆ ಮಾಡಲಿರುವರು.
ವೈದ್ಯ ಸಾಹಿತಿ ಡಾ ಸುರೇಶ ನೆಗಳಗುಳಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸಂಘಟಕ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿಯವರು ಪ್ರಕಟಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ