ಬೆಂಗಳೂರು: ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ’ ವಿಶೇಷ ಕಾರ್ಯಕ್ರಮ

Upayuktha
0


ಬೆಂಗಳೂರು: 
ಹಿಂದೆ ದೇಶ ಮತ್ತು ಆಡಳಿತಗಳ ವಿರುದ್ಧ ನಕ್ಸಲರು ಬಂಡಾಯವೆದ್ದು ಹೋರಾಟ ನಡೆಸುತ್ತಿದ್ದರು. ಆಗ ನಕ್ಸಲರನ್ನು ಹಿಡಿದು ಅವರನ್ನು ಬಂಧಿಸುವುದು ಸರಕಾರಕ್ಕೆ ಸವಾಲಾಗಿತ್ತು. ಆದರೆ ಈಗ ಅಂತಹ ಶಸ್ತ್ರಾಸ್ತ್ರಧಾರಿ ನಕ್ಸಲರಿಗಿಂತ ‘ನಗರ ನಕ್ಸಲ’ರ ಹಾವಳಿ ಹೆಚ್ಚಾಗಿದೆ. ಒಂದು ಸಮುದಾಯ, ವ್ಯವಸ್ಥೆಯನ್ನು ಗುರಿಯಾಗಿಸಿ ವೈಚಾರಿಕ ಸ್ತರದಲ್ಲಿ  ನಿರಂತರ ಟೀಕೆ ಟಿಪ್ಪಣಿಗಳನ್ನು ಮಾಡಿ ಆ ಸಮುದಾಯದ ಬಗ್ಗೆ ಸಮಾಜದಲ್ಲಿ ವಿಷಬೀಜ ಬಿತ್ತುವುದೇ ಈ ನಗರ ನಕ್ಸಲರ ಷಡ್ಯಂತ್ರವಾಗಿದೆ.


ಭಾರತದ ಏಳ್ಗೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇಂತಹ ನಗರ ನಕ್ಸಲರ ಬೆಳವಣಿಗೆ ಅತ್ಯಂತ ಅಪಾಯಕಾರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇಂತಹ ನಗರ ನಕ್ಸಲರಿಂದಾಗಿಯೇ ದೇಶದಲ್ಲಿ ಅರಾಜಕತೆ, ಗಲಭೆಯಂತಹ ಅದೆಷ್ಟೋ ಘಟನೆಗಳು ನಡೆಯುತ್ತಿರುವುದು ನಾವು ನೋಡುತ್ತಿದ್ದೇವೆ. ಜಾತ್ಯಾತೀತತೆಯ ಹೆಸರಿನಲ್ಲಿ ದ್ವೇಷ ಬಿತ್ತುವುದೇ ಇವರ ನಿತ್ಯಕರ್ಮವಾಗಿದೆ. ಪುಸ್ತಕ, ಟಿವಿ-ಚಾನೆಲ್, ಸೋಶಿಯಲ್ ಮೀಡಿಯಾ, ಕಾರ್ಯಕ್ರಮಗಳ ವೇದಿಕೆಗಳೇ ಇವರ ಮಾಧ್ಯಮಗಳಾಗಿವೆ. 


ಹಾಗಾಗಿ ಈ ನಕ್ಸಲ್ ವಾದವನ್ನು ತಡೆಯಲು ಮತ್ತು ಇದಕ್ಕೆ ತಕ್ಕ ಉಪಾಯವೇನೆಂಬುದರ ದಿಶೆ ನೀಡಲು ಹಿಂದೂ ಜನಜಾಗೃತಿ ಸಮಿತಿ ‘ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ’ ಈ ವಿಶೇಷ ಕಾರ್ಯಕ್ರಮದ ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ವಿಚಾರಕರು ಮತ್ತು ಲೇಖಕರಾದ ಶ್ರೀಮತಿ ಎಸ್. ಆರ್. ಲೀಲಾ ಮತ್ತು  ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರ ವಿಚಾರಮಂಥನವಾಗಲಿದೆ. ಇದಕ್ಕೆ ಸಮಸ್ತ ದೇಶ ಭಕ್‌ತರು ತಪ್ಪದೇ ಉಪಸ್ಥಿತರಿರಬೇಕೆಂದು ಹಿಂದೂ  ಜನಜಾಗೃತಿ ಸಮಿತಿ ಕರೆ ನೀಡುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top