ಬಾಗಲಕೋಟೆ: ಲಾವಣಿ ಸಂಗ್ರಹದಂತಹ ಕಾರ್ಯನಿರ್ವಹಿಸುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗಿವೆ. ಸಾಹಿತ್ಯಿಕ ಸಂಘಟನೆಗಳು ಏಕಮುಖಿಯಾಗಿರಬಾರದು ಎಂದು ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟಣ್ಣವರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಬೀಳಗಿ, ಹಾಗೂ ಬೀಳಗಿಯ ಅಹಲೆ ಸುನ್ನತ್ ಕಮಿಟಿ, ಜಾಮಿಯಾ ಮಸಜೀದ್ ಕಮಿಟಿ, ಹಜರತ್ ಮಹಿಬೂಬ ಸುಬಹಾನಿ ಕಮಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ, ಬೀಳಗಿ ಜಾಮಿಯಾ ಶಾದಿಮಹಲ್ನಲ್ಲಿ 'ಲಾವಣಿಯಲ್ಲಿ ದಶಾವತಾರ' ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
'ಲಾವಣಿಯಲ್ಲಿ ದಶಾವತಾರ' ಗ್ರಂಥಕರ್ತ ಬೀಳ್ಗಿಯ ವೀರೇಂದ್ರ ಶೀಲವಂತ ಅವರು ದಿಡೀರ ಪ್ರಚಾರದ ವಲಯದಿಂದ ಅಂತರ ಕಾಯ್ದುಕೊಂಡು ಲಾವಣಿ ಕುರಿತಾಗಿ ಗ್ರಂಥ ಬರೆದಿರುವ ಕಾರ್ಯವನ್ನು ಶ್ಲಾಘಿಸಿದರು. ಒಂದು ಕಾಲದಲ್ಲಿ ಶ್ರೀ ಕೃಷ್ಣ ಪಾರಿಜಾತ, ಲಾವಣಿಗಳು ಸಮಾಜದ ಮನರಂಜನಾ ಸಾಧನಗಳಾಗಿದ್ದವು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಉದ್ಘಾಟನಾ ಭಾಷಣ ಮಾಡಿದರು. ಹಿರೇಬಾದವಾಡಗಿ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕಿ ಮುರ್ತುಜಾಬೇಗಂ ಕೊಡಗಲಿ ಗ್ರಂಥ ಪರಿಚಯಿಸಿದರು.
ಜಾಮೀಯಾ ಮಸಜೀದ್ ತಾಲ್ಲೂಕು ಅಧ್ಯಕ್ಷ ಎಂ.ಎಂ. ಜಮಖಂಡಿ ಅದ್ಯ ಅಹಲೆ ಸುನ್ನತ್ ಕಮೀಟಿಯ ತಾಲ್ಲೂಕು ಅಧ್ಯಕ್ಷ ಬಾದಶಹಾ ಜಮಾದಾರ, ಮಹಿಬೂಬ ಸುಬಹಾನಿ ಕಮಿಟಿಯ ತಾಲ್ಲೂಕು ಅಧ್ಯಕ್ಷ ಮಹಿಬೂಬ ಮುಜಾವರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಯೋಜನಾಧಿಕಾರಿ ಸುಬ್ರಾಯ ಕೆ, ಕಸಾಪ ತಾಲ್ಲೂಕು ಅಧ್ಯಕ್ಷ ಗುರುರಾಜ ಲೂತಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಕಿರಣ ಬಾಳಾಗೋಳ, ಗೌರವ ಕೋಶಾಧ್ಯಕ್ಷ ಜೋತಿಬಾ ಅವತಾಡೆ, ಶಾಹಿರ್ ಬೀಳಗಿ, ಅಜ್ಜುಬಾಯ್ ಸರ್ಕಾರ, ಕೆ.ಎಂ. ಗಾಮಾ ಇದ್ದರು.
ಕಸಾಪ ಕಾರ್ಯದರ್ಶಿ ಸೋಮಲಿಂಗ ಬೇಡರ, ಶಿಕ್ಷಕ ಎಂ.ಬಿ. ತಾಂಬೊಳಿ ನಿರೂಪಿಸಿದರು. ಸಂಗಮೇಶ ಪಾನಶೆಟ್ಟಿ ಪ್ರಾರ್ಥಿಸಿದರು, ಸಿದ್ಧೇಶ್ವರ ಕಾಲೇಜಿನ ಉಪ ಪ್ರಾಚಾರ್ಯ ಎಸ್.ಎಚ್. ಚೌದ್ರಿ ಸ್ವಾಗತಿಸಿದರು.
ಲೇಖಕ ವೀರೇಂದ್ರ ಶೀಲವಂತರ 'ಲಾವಣಿಯಲ್ಲಿ ದಶಾವತಾರ' ಗ್ರಂಥವನ್ನು ಬೀಳಗಿಯ ಜಾಮೀಯಾ ಶಾದಿಮಹಲ್ನಲ್ಲಿ ಭಾನುವಾರ ಜಾನಪದ ವಿದ್ವಾಂಸ ಶ್ರೀರಾಮ ಇಟ್ಟಣ್ಣವರ ಲೋಕಾರ್ಪಣೆ ಗೊಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ