ಮೂರನೇ ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನಕ್ಕೆ ಭರತೇಶ ಅಲಸಂಡೆಮಜಲು ಆಯ್ಕೆ

Upayuktha
0


ಮಂಗಳೂರು: ಪೆರ್ಲಂಪಾಡಿ ಅಲಸಂಡೆಮಜಲು ನಿವಾಸಿ ಭರತೇಶ ಅವರು ಅಕ್ಟೋಬರ್ 4 ಮತ್ತು 5ರಂದು ಹೈದರಾಬಾದ್‌ನಲ್ಲಿ ನಡೆಯುವ ಮೂರನೇ ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನ 2024ಕ್ಕೆ ಅಯ್ಕೆಯಾಗಿದ್ದಾರೆ. ಇದು ವಿಕಿಮೀಡಿಯ ಫೌಂಡೇಶನ್, ಮೀಡಿಯಾ ವಿಕಿ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾರತ ಸರಕಾರ ಇದರ ಜಂಟಿ ಸಹಯೋಗದಲ್ಲಿ ನಡೆಯಲಿದೆ.


ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್‌ ಮಂಗಳೂರು ಇದರ ಸಕ್ರಿಯ ಸದಸ್ಯರಾಗಿದ್ದು, ತುಳು ವಿಕಿಪೀಡಿಯಾದ ನಿರ್ವಾಹಕರು ಅಗಿರುವ ಇವರು ಇತ್ತೀಚೆಗೆ ಜರ್ಮನಿಯಲ್ಲಿ ಜರುಗಿದ ವಿಕಿ ಸಮಿತ್ 2024 ರಲ್ಲಿ ತುಳು ಭಾಷೆಯನ್ನು ಪ್ರತಿಸಿಧಿಸಿದ್ದರು. 


ಇವರು ತುಳು ಮತ್ತು ಕನ್ನಡ ಬರಹಗಾರರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಇವರು ಪ್ರಸ್ತುತ ಬ್ಯಾಂಕ್ ಆಫ್ ಬರೋಡ ಉದ್ಯೋಗಿಯಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top