ಶಿವಮೊಗ್ಗ: "ಕಾಡುವ ಹುಡುಗನ ಹಾಡು" ಪುಸ್ತಕ ಲೋಕಾರ್ಪಣೆ

Upayuktha
0

ನೂತನ ಕೃತಿ ಸಾಹಿತ್ಯಲೋಕದಲ್ಲಿ ಹೊಸ ನಾಂದಿ ಹಾಡಲಿ: ಡಾ.ಭಾರತಿ ದೇವಿ


ಶಿವಮೊಗ್ಗ:
ಮಾನಸ ಟ್ರಸ್ಟ್,  ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ  ಉಪನ್ಯಾಸಕಿ ಅಂಜುಮ್.ಬಿ.ಎಸ್ ರವರ ಕಾಡುವ ಹುಡುಗನ ಹಾಡು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಡೆಸಲಾಯಿತು.


ಪುಸ್ತಕ ಬಿಡುಗಡೆ ಮಾಡಿದ ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಭಾರತಿ ದೇವಿಯವರು  ಮಾತನಾಡಿ, "ಅಂಜುಮ್ ಅವರ ಪುಸ್ತಕ ಅಕ್ಕಮಹಾದೇವಿಯವರ ಬರಹಗಳನ್ನು ಮತ್ತೊಮ್ಮೆ ನೆನಪಿಸುತ್ತಿದೆ. ಒಬ್ಬ ಹೆಣ್ಣು ಮಗಳು ದಿಟ್ಟವಾಗಿ ತನ್ನ ನಿಲುವನ್ನು ಪುಸ್ತಕದ ಮೂಲಕ ಹೇಳಿರುವುದು ಇಲ್ಲಿ ಕಾಣಸಿಗುತ್ತದೆ. ಕಾಡುವ ಹುಡುಗನ ಹಾಡು ಪುಸ್ತಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಬರಹಗಳ ಮೂಲಕ ನಾಂದಿ ಹಾಡಲಿ‌. ಮುಂಬರುವ ದಿನಗಳಲ್ಲಿ ಯುವ ಲೇಖಕಿಯಿಂದ ಇನ್ನಷ್ಟು ಪುಸ್ತಕಗಳು ಹೊರಹೊಮ್ಮುಲಿ" ಎಂದು ಆಶಿಸಿದರು.


ಕೀಳಂಬಿ ಸಮೂಹ ಉದ್ಯಮಗಳ ನಿರ್ದೇಶಕರಾದ ರಾಜೇಶ್ ಕೀಳಂಬಿಯವರು ಪುಸ್ತಕ ಪರಿಚಯ ಮಾಡುತ್ತಾ  "ಕಾಡುವ ಹುಡುಗನ ಹಾಡು ಪುಸ್ತಕವನ್ನು ಓದಿದಾಗ ಹಳೆಯ ಕಾಲೇಜು ದಿನಗಳು ಮರುಕಳಿಸುತ್ತವೆ. ಒಬ್ಬ ಹೆಣ್ಣು ಮಗಳು ತನ್ನ ಪ್ರೀತಿಯನ್ನು  ವ್ಯಕ್ತಪಡಿಸಿರುವ ರೀತಿ ವಿಭಿನ್ನವಾಗಿದೆ. ಕಾಡುವ ಹುಡುಗನ ಹಾಡು ಪುಸ್ತಕವು ಸಾಹಿತ್ಯ ಲೋಕದಲ್ಲಿ ಹೊಸ ಶಕೆಯನ್ನು ಸೃಷ್ಟಿಸಲಿದೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನವಾಗಿದ್ದು, ಪುಸ್ತಕವು ಹೆಚ್ಚು ಪ್ರಖ್ಯಾತಿ ಪಡೆಯಲಿ" ಎಂದರು.


ಕಾಲೇಜಿನ ಶೈಕ್ಷಣಿಕ ಸಲಹೆಗಾರರು ಹಾಗೂ ಹಿರಿಯ ಸಾಹಿತಿಗಳಾದ ಡಾ.ರಾಜೇಂದ್ರ ಚೆನ್ನಿಯವರು ಮಾತನಾಡಿ "ಯುವ ಲೇಖಕರು ಕೇವಲ ಒಂದೇ ಪ್ರಕಾರದ ಪುಸ್ತಕಗಳನ್ನು ಬರೆಯದೇ ಎಲ್ಲಾ ರೀತಿಯ ಬರಹಗಳಿಗೂ ಒತ್ತು ನೀಡಬೇಕು" ಎಂದರು.


ಸುವ್ವಿ ಪಬ್ಲಿಕೇಷನ್ಸ್ ನ ಪ್ರಕಾಶಕರಾದ ಸುನೀಲ್ ಕುಮಾರ್ .ಬಿ‌.ಎನ್‌ರವರು ಮಾತನಾಡಿ "ಇಂದಿನ ಯುವ ಪೀಳಿಗೆ ಕೇವಲ ವಾಟ್ಸಾಪ್, ಫೇಸ್ಬುಕ್ ನಲ್ಲಿಯೇ ಕಾಲಕಳೆಯುತ್ತಿರುವುದು ವಿಪರ್ಯಾಸ. ವಿಧ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು" ಎಂದರು.


ಶಿವಮೊಗ್ಗದ ಕೆ ಲೈವ್ ನ್ಯೂಸ್ ನ ಪ್ರಧಾನ ಸಂಪಾದಕ ಡಾ‌.ಸುಧೀಂದ್ರರವರು ಮಾತನಾಡಿ, "ಕಾಡುವ ಹುಡುಗನ ಹಾಡು ಪುಸ್ತಕ ಯುವ ಮನಸ್ಸುಗಳಿಗೆ ಇಷ್ಟವಾಗುವ ಪುಸ್ತಕವಾಗುವಲ್ಲಿ ಎರಡು ಮಾತಿಲ್ಲ. ಕವನವೂ ಅಲ್ಲದೇ, ಶಾಯರಿಯೂ ಆಗದೇ ಹೊಸ ರೀತಿಯ ಬರಹಗಳು ಇದಾಗಿದೆ. ಅನುಭವ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವ ಪುಸ್ತಕ ಓದುಗರನ್ನು ಸೆಳೆದಿಟ್ಟುಕೊಳ್ಳುತ್ತದೆ" ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಯವರು  ಮಾತನಾಡಿ "ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಅಂಜುಮ್ ರವರ ಚೊಚ್ಚಲ ಕೃತಿ ಕಾಲೇಜಿನಲ್ಲಿಯೇ ಲೋಕಾರ್ಪಣೆಗೊಂಡಿರುವುದು  ಸಂತಸದ ವಿಷಯ. ಕಾಡುವ ಹುಡುಗನ ಹಾಡು ಪುಸ್ತಕ ಹಲವಾರು ಬಗೆಯಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. ಯುವ ಲೇಖಕಿಯ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ" ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ ವೃಂದ, ಗುರು-ಹಿರಿಯರು, ಸಿಬ್ಬಂದಿಗಳು, ವಿಧ್ಯಾರ್ಥಿಗಳು ಹಾಗೂ ಅನೇಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top