ತನ್ನ ಕುಡಿನೋಟದಿಂದ ಸಕಲ ಜಗತ್ತಿನ ಹುಟ್ಟು ಸಾವು ತಿಳುವಳಿಕೆ ತಪ್ಪು ತಿಳುವಳಿಕೆ ಬಂದಾಗ ಬಿಡುಗಡೆಯನ್ನು ಕೊಡುವ ಸಾಮರ್ಥ್ಯ ಪಡೆದವಳು ಮಹಾಲಕ್ಷ್ಮಿ ದೇವಿ. ಭಗವಂತನ ಸಾಮರ್ಥ್ಯ ವನ್ನು ತನ್ನಲ್ಲಿ ತುಂಬಿ ಕೊಂಡವಳು ಅಂತಹ ಜಗನ್ಮಾತೆಯಾದ ಮಹಾಲಕ್ಷ್ಮಿ ಮೂರು ಲೋಕಗಳ ಒಡೆಯನಿಗೆ, ಸರ್ವ ಲೋಕ ಸಂಚಾರ ಮಾಡುವ ಸಾಮರ್ಥ್ಯ ಇರುವ ನಾರದರಿಗೆ ಉಪದೇಶ ನೀಡುತ್ತಿದ್ದಾಳೆ. ಮನುಷ್ಯ ಹೇಗೆ ಇರಬೇಕು ವೈಯಕ್ತಿಕ ಉನ್ನತಿಗೆ ಪಡೆಯಬೇಕಾದ ಕೆಲಸಗಳೇನು ತನ್ನವರನ್ನು ಉನ್ನತ ಸ್ಥಾನ ಪಡೆಯಲು ಪ್ರೀತಿ ವಿಶ್ವಾಸ ಸಂತೋಷದಿಂದ ಇರಲು ಏನು ಮಾಡಬೇಕೆಂದು ಲಕ್ಷ್ಮಿದೇವಿ ಹೇಳುತ್ತಾಳೆ.
ಉಪವಾಸವನ್ನು ಯಾವುದೋ ವಿಷಯದ ನಿಮಿತ್ತ ಮಾಡುವದುಲ್ಲ, ಉದ್ಧವನ ಚರಿತ್ರೆ ಹೇಳುವಾಗ ಭಾಗವತ ಹೇಳುತ್ತದೆ. 5 ವರ್ಷದ ಬಾಲಕ ಉದ್ಧವನಿಗೆ ಉಪಹಾರ ಕೊಡಲು ಕರೆದಾಗ ಶ್ರೀಕೃಷ್ಣನ ಪೂಜೆ ಮಾಡಿಲ್ಲ ಬರುವುದಿಲ್ಲ ಎಂದು ಹೇಳುತ್ತಾನೆ. ಇನ್ನೊಂದು ರೀತಿಯ ಉಪವಾಸ ಎರಡು ಹೊತ್ತು ಊಟ ಮಧ್ಯದಲ್ಲಿ ಏನೂ ಸ್ವೀಕರಿಸದಿದ್ದಲ್ಲಿ ನಿತ್ಯೋಪವಾಸ ಎಂದು ಭಾಗವತದಲ್ಲಿ ಹೇಳುತ್ತಾರೆ. ಏಕಾದಶಿ ಪೂರ್ಣ ಉಪವಾಸ ಪ್ರತಿ ನಿತ್ಯ ಪೂಜೆ ಆಗುವವರೆಗೂ ಏನು ಸ್ವೀಕರಿಸಿದೇ ಇರುವುದು ಕೂಡ ಉಪವಾಸ, ಕೃಷ್ಣಾಷ್ಟಮಿ, ಗೃಹಣ ಮೊದಲಾದ ಸಮಯದ ಉಪವಾಸಗಳು ಅನೇಕ ಬಗೆಯ ಉಪವಾಸಗಳಿವೆ. ನಾವು ಅನೇಕ ಅನೇಕ ಪಾಪ ಕರ್ಮಗಳನ್ನು ಮಾಡುತ್ತೇವೆ. ನಡೆದರೆ ಚಪ್ಪಾಳೆ ಹೊಡೆದರೆ ಆಗುವ ಪಾಪಗಳು ಬುದ್ಧಿ ಪೂರ್ವಕ ಮಾಡುವ ಪಾಪಗಳನ್ನು ಮಾಡುತ್ತೇವೆ, ಗುರು ಹಿರಿಯರ ನಿಂದೆಯನ್ನು ಮಾಡುವುದು ಪಾಪ ಅದನ್ನು ಕೇಳುವುದು ಕೂಡ ಪಾಪ, ವಿಹಿತ ಕರ್ಮಗಳನ್ನು ಮಾಡದೇ ಇರುವುದು ಕೂಡ ಪಾಪ. ಮಾಡಬೇಕಾದ್ದನ್ನು ಮಾಡದೇ ಇರುವುದು ಕೂಡ ದೊಡ್ಡ ಪಾಪವೇ. ಮನುಷ್ಯ ಈ ಎಲ್ಲ ಪಾಪಗಳನ್ನು ಮಾಡುತ್ತಲೇ ಇರುತ್ತಾನೆ. ಇವುಗಳ ಪ್ರಾಯಶ್ಚಿತ್ತ ರೂಪದಲ್ಲಿ ಏಕಾದಶಿ ಉಪವಾಸ ತಪ್ಪದೇ ಮಾಡಬೇಕು.
ಅನಾರೋಗ್ಯಕ್ಕೆ ಪ್ರತಿರೋಧಕ ಔಷಧಿಯನ್ನು ತೆಗೆದುಕೊಳ್ಳುವಂತೆ ನಾವು ಕೂಡ ಪಾಪಗಳನ್ನು ಮಾಡುತ್ತಲೇ ಇರುತ್ತೇವೆ, ಈ ಜನ್ಮದ ಕರ್ಮಗಳು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಗೆ ಪ್ರತೀಕಾರವೇ ಉಪವಾಸ ನಾನಾ ರೀತಿಯಿಂದ ಮಾಡಿದ ಪಾಪಗಳ ಪರಿಹಾರಕ್ಕಾಗಿ ಮಾಡುವ ತಪಸ್ಸೇ ಉಪವಾಸ ಮನಸ್ಸಿಗಾಗಲೇ ದೇಹಕ್ಕಾಗಲೀ ಕ್ಲೇಶವಾದರೆ ಅದು ತಪಸ್ಸು ಎಂದು ಶ್ರೀಮ ದಾಚಾರ್ಯರು ಹೇಳುತ್ತಾರೆ. ನಮ್ಮ ಮನಸ್ಸಿಗೆ ಆದ ನೋವಿಗೆ ಪ್ರತಿಕಾರ ತಿಳಿದು ಕೊಂಡರೆ ಅದು ಪಾಪ ಮನದ ನೋವು ಸಹಿಸಿ ಪರಹಿತ ಬಗೆದು ವಿಶಾಲ ಮನೋಭಾವವನ್ನು ಬೆಳೆಸಿಕೊಂಡರೆ ಇದು ಒಂದು ರೀತಿಯ ತಪಸ್ಸು, ಆದ ನೋವನ್ನು ಸಹಿಸುವ ತಪಸ್ಸು ಮಾಡಿದರೆ ನಾವು ಮಾಡಿದ ಪಾಪಗಳನ್ನು ತೊಳೆದುಕೊಂಡರೆ ಅವನು ಅಮಂತು ಆಗುತ್ತಾನೆ, ಅಂತಹವನ ಬಳಿ ನಾನು ವಾಸ ಮಾಡುತ್ತೇನೆ ಎನ್ನುತ್ತಾಳೆ ಲಕ್ಷ್ಮಿ ದೇವಿ. ಮಹಾಲಕ್ಷ್ಮಿಯ ಕೃಪಾಕಟಾಕ್ಷ ಆಗಬೇಕಾದರೆ ಸಜ್ಜನರು ಉಪವಾಸ ಮತ್ತು ಉತ್ತಮಗುಣಗಳನ್ನು ಹೊಂದಬೇಕು ಎಂದು ಹೇಳುತ್ತಾರೆ.
ಏಕಾದಶಿ ಉಪವಾಸವನ್ನು ತಪ್ಪದೇ ಮಾಡುವ ಸಂಕಲ್ಪವನ್ನು ಮಾಡಬೇಕು. ದೇವರು ಅನೇಕ ಸಹಸ್ರ ಪಾಪಗಳನ್ನು ಕಳೆದು ಕೊಂಡು ಸಾಧನ ಮಾರ್ಗದಲ್ಲಿ ಸಾಗಲು ಅನುಕೂಲವಾಗುತ್ತದೆ. ಮುಂಜಾನೆ ಪ್ರಾತಃ ಕಾಲದಲ್ಲಿ ಬ್ರಾಹ್ಮಿ ಮುಹೂರ್ತ ಕಾಲದಲ್ಲಿ ಏಳಬೇಕು. ಆ ಸಮಯದಲ್ಲಿ ಎಚ್ಚರವಿರುವವರಲ್ಲಿ ವಾಸವಾಗಿರುತ್ತೇನೆ. ಪ್ರಾತಃ ಕಾಲದಲ್ಲಿ ದೇವರ ನಾಮಸ್ಮರಣೆಯನ್ನು ಮಾಡಬೇಕು, ಭಕ್ತರು ದೇವರ ಕುರಿತು ಮಾಡುವ ನಾಮಸ್ಮರಣೆಯನ್ನು ನೋಡಲು ಸಂತೋಷ ಇನ್ನು ದೇವತೆಗಳು ಋಷಿಗಳು ಸಂಚಾರ ಮಾಡುವ ಸಮಯ ಬ್ರಾಹ್ಮಿ ಮುಹೂರ್ತ ಆಗ ಎಚ್ಚರ ವಿರುವುದು ನಮ್ಮ ಕರ್ತವ್ಯ. ಪ್ರಾತಃ ಕಾಲದಲ್ಲಿ ಎದ್ದು ಸಿದ್ದರಾಗಿ ನಮಸ್ಕಾರ ಮಾಡಿದರೆ ಅನುಗ್ರಹ ಮಾಡುತ್ತಾರೆ, ಮಾಡದೇ ಇದ್ದರೆ ಶಾಪವನ್ನು ಕೊಡುತ್ತಾರೆ. ಮುಂಜಾನೆ ಸ್ನಾನ ಸಂಧ್ಯಾವಂದನೆ ಜಪ ತಪಗಳನ್ನು ಮಾಡುವವರಲ್ಲಿ ನನ್ನ ಸನ್ನಿಧಾನ ಇರುತ್ತದೆ ಎಂದು ಲಕ್ಷ್ಮೀ ದೇವಿ ಹೇಳುತ್ತಾಳೆ.
ನಾವು ಮಾಡುವ ಪಾಪಗಳ ಪರಿಹಾರಕ್ಕಾಗಿ ಉಪವಾಸ, ದಾನ ಧರ್ಮ ಗಳನ್ನು ಮಾಡಬೇಕು, ಯಾರಿಂದ ಪಾಪ ಬರದಿರುವರ ಬಳಿಗೆ ನಾವು ಏನನ್ನಾದರೂ ಸ್ವೀಕಾರ ಮಾಡಬೇಕು ಎಂದು ಹೇಳುತ್ತಾರೆ. ನಿರೋಷನಾದ ಭಗವಂತನಿಂದ ಪ್ರತಿಗ್ರಹ ಮಾಡಿದರೆ ಪಾಪವಿಲ್ಲ ಆದರೆ ಬ್ರಹ್ಮದೇವರು ಪರಮಾತ್ಮನಿಂದ ಜೀವ ಜಡ ಮತ್ತು ವೇದಗಳನ್ನು ಪಡೆದರು. ದೇವರಿಂದ ಪ್ರತಿಗ್ರಹ ಮಾಡಿದಾಗ ಗಾಯತ್ರಿ ಜಪ ಮಾಡುತ್ತಾರೆ ಎಂದು ಬೃಹದಾರಣ್ಯಕ ಭಾಷ್ಯ ತಿಳಿಸಿಕೊಡುತ್ತದೆ. ಅನಿವಾರ್ಯವಾಗಿ ತೆಗೆದುಕೊಂಡ ಪರಿಗ್ರಹ ಮಾಡಿದಾಗಲೇ ಎಷ್ಟೊಂದು ಜಪ ತಪ ಮಾಡಬೇಕು. ಅದರಲ್ಲಿ ಅಯೋಗ್ಯರಲ್ಲಿ ಪಡೆಯವುದು ದೊಡ್ಡ ಪಾಪ. ಲಕ್ಷ್ಮಿ ದೇವಿ ಹೇಳುತ್ತಾಳೆ, ಪ್ರಾತಃಕಾಲದಲ್ಲಿ ಏಳುವವರು ಮಧ್ಯಾಹ್ನದಲ್ಲಿ ಮಲಗದವರು ಉತ್ತಮ ಆರೋಗ್ಯ ಮತ್ತು ಸಂಪತ್ತನ್ನು ಪಡೆಯುತ್ತಾರೆ ಎಂದು ಲಕ್ಷ್ಮಿದೇವಿ ಹೇಳುತ್ತಾಳೆ. ಯಾರು ಅನಾಥರು ವೃದ್ಧರು ಇರುವ ಜನರಿಗೆ ಉಪಕಾರ ಮಾಡುವವರಿಗೆ ಸಹಾಯ ಮಾಡುವವರಿಗೆ ಅಂತಹವರಲ್ಲಿ ವಿಶೇಷವಾಗಿ ಸನ್ನಿಹಿತಳಾಗಿ ರುತ್ತೇನೆ ಎನ್ನುತ್ತಾಳೆ. ಮಾಡುವ ಧರ್ಮದ ಬಗ್ಗೆ ಉತ್ಸಾಹ, ಪ್ರೀತಿ, ವಿಶ್ವಾಸ ಇರಬೇಕು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಪುಣ್ಯದ ಕೆಲಸ, ಇನ್ನೊಬ್ಬರಿಗೆ ಒಳ್ಳೆಯ ಮಾತನ್ನು ಆಡಿ ಸಮಾಧಾನದ ಮಾತನ್ನು ಆಡುವುದು ಕೂಡ ಪುಣ್ಯದ ಕೆಲಸ ಎನ್ನುತ್ತಾರೆ.
ಮತ್ತೊಬ್ಬರಿಗೆ ಧೈರ್ಯದ ಮಾತು ಹೇಳುವುದು ಜೀವನವನ್ನು ದಾನ ಮಾಡಿದ ಪುಣ್ಯ ಬರುತ್ತದೆ. ಇಂತಹ ವಿಶೇಷವಾದ ನೇಮ ಮನುಷ್ಯನಿಗೆ ಇರಬೇಕು. ಪುಣ್ಯ ಮಾಡಲು ಹೊರಟಂತಹ ವ್ಯಕ್ತಿಗೆ ಅಹಂಕಾರ ಬಾಧಕ ಅವನು ಒಳ್ಳೆಯ ಮನಸ್ಸಿನಿಂದ ಮಾಡಿದ ಧರ್ಮವನ್ನು ಉಳಿಸಿಕೊಳ್ಳಲು ಅಹಂಕಾರ ವನ್ನು ತ್ಯಜಿಸಬೇಕು. ನಿದ್ದೆಯನ್ನು ತ್ಯಜಿಸಿದವರು ಪರೋಪಕಾರ ಮಾಡು ವುದು, ದಾನ ಧರ್ಮ, ಮಂಗಲ ದ್ರವ್ಯ ಧಾರಣೆ, ವೃದ್ಧರ ಸೇವೆ ಮಾಡು ತ್ತಾರೆಯೋ ಅವರಲ್ಲಿ ಇರುತ್ತೇನೆ. ದೈತ್ಯರಲ್ಲಿ ಇಂತಹ ಗುಣಗಳು ಇರುವುದಿಲ್ಲ. ಆದರೂ ಈ ಗುಣಗಳು ಅವರಲ್ಲಿ ಇದ್ದಾಗ ನಾನು ಅವರಲ್ಲಿ ಕೂಡ ಇದ್ದೆ, ಆದರೆ ಈಗ ನಿನ್ನಲ್ಲಿ ಆ ಉತ್ತಮ ಗುಣವಿರುವ ಕಾರಣ ನಿನ್ನಲ್ಲಿ ಬಂದಿದ್ದೇನೆ ಎಂದು ಇಂದ್ರ ದೇವರಿಗೆ ಲಕ್ಷ್ಮಿದೇವಿ ಹೇಳುತ್ತಾಳೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ