ಇದನ್ನು ಕೇಳಿದರೆ ಆಶ್ಚರ್ಯವಾಗಬಹುದು. ಆದರೆ ನಮ್ಮ ಮತ್ತು ಅನೇಕರ ಜೀವನವನ್ನು ಅವಲೋಕಿಸಿ ನೋಡಿದಾಗ ಇದು ಎಂತಹ ಪ್ರಭಾವಶಾಲಿ ಎಂದು ಅರಿವಾಗುತ್ತದೆ.
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು ಎಂಬಂತೆ ನಾವು. ಅನುಭವಿಸಿದ ನೋವು, ತಿರಸ್ಕಾರಗಳೇ ನಮಗೆ ಹಿಡಿದ. ಛಲ ಸಾಧಿಸಲು ಪ್ರೇರೇಪಿಸುತ್ತವೆ.
ಹೆಸರಾಂತ ನಟ ಅಮಿತಾಭ್ ಬಚ್ಚನ್ voice test ನಲ್ಲಿ ತಿರಸ್ಕಾರ ಅನುಭವಿಸಿದರೂ ಈಗ ಅವರ ಧ್ವನಿ ಜಾಹಿರಾತುಗಳಲ್ಲಿ ಮತ್ತು ಶೋಗಳಲ್ಲಿ ಬೆಲೆ ಬಾಳುತ್ತದೆ.
ಎಷ್ಟೋ ಜನರ ಜೀವನ ಗಾಥೆಯನ್ನು ನೋಡಿದಾಗ ಅವರು ಯಶಸ್ಸಿನ ಮೆಟ್ಟಿಲುಗಳಲ್ಲಿ ನೋವು. ತಿರಸ್ಕಾರ ಎಂಬ ಮೆಟ್ಟಿಲುಗಳನ್ನು ಕಾಣಬಹುದು. ಅದಕ್ಕೆ ಇಂಗ್ಲಿಷಿನಲ್ಲಿ "Rejection is the best motivation" ಎನ್ನುತ್ತಾರೆ.
"ಬದುಕೆಂಬ ಸಂತೆಯಲ್ಲಿ ನಾನು ನಿಂತೆ ಎನ್ನುವಂತೆ. ನಮಗೆ ಬಿದ್ದ ಕಲ್ಲುಗಳನ್ನೇ ಹೆಕ್ಕಿ ಮನೆ ಕಟ್ಟಿ ತೋರಿಸಬೇಕು. "Make the building by using the stones thrown to you" ಎನ್ನುವಂತೆ.
ಬಹುಶಃ ಅವತ್ತು ವಿಪ್ರೋ ಕಂಪೆನಿಯವರು ನಾರಾಯಣ ಮೂರ್ತಿಯವರನ್ನು ತಿರಸ್ಕಾರ ಮಾಡದಿದ್ದರೆ ಇವತ್ತು ಇನ್ಫೋಸಿಸ್ ಹುಟ್ಟುತ್ತಿರಲಿಲಿಲ್ಲ.
ಆದ್ದರಿಂದ ನಮಗೆ. ಬಂದ ತಿರಸ್ಕಾರ ಗಳನ್ನೂ ಉತ್ತಮ ಪ್ರೇರಣೆಯಾಗಿ ಸ್ವೀಕರಿಸಬೇಕು. ಈ ದಿಕ್ಕಿನಲ್ಲಿ ಯತ್ನಿಸಿ ನೋಡಿ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ