ಲೇಖಾ ಲೋಕ-11: ಸಂಸ್ಕೃತ ಮತ್ತು ಕನ್ನಡ ಪಂಡಿತರು ಡಾ॥ ಬಂದಗದ್ದೆ ನಾಗರಾಜ

Upayuktha
0


ಹುತೇಕ ಯುವ ಪೀಳಿಗೆಯವರು, ಆಧುನಿಕತೆಯ ದಾಸರಾಗಿದ್ದ ಪ್ರಸ್ತುತ ಸಮಯದಲ್ಲಿ ಡಾ॥ ಬಂದಗದ್ದೆ ನಾಗರಾಜ ಅವರು ಪುಣ್ಯ ಕಥಾಲೋಕದ  ಕೃತಿಯನ್ನು ರಚಿಸಿ, ನಂಬಿಕೆಯಲ್ಲಿರುವ ನಿತ್ಯ ಸತ್ಯ ಮತ್ತು ಸತ್ವವನ್ನು ತೋರಿದ ಮಹನೀಯರು ಹಾಗೂ ಬದುಕಿಗೆ ದಾರಿದೀಪ ವ್ಯಕ್ತಪಡಿಸಿದ ವಿದ್ವಾಂಸರು! ಆಧ್ಯಾತ್ಮಿಕದ ಬೃಹತ್ ಕಾವ್ಯಗಳನ್ನು ಸುಂದರವಾಗಿ ಭಾಮಿನಿ ಷಟ್ಪದಿಗಳಲ್ಲಿ ಬರೆದು, ಪ್ರಥಮವಾಗಿ ಕವಿ ಮಹಾಶಯರು ಎನಿಸಿದ ಪಂಡಿತರು. ಹುಲಿ ಮನೆತನದ ಲಕ್ಷ್ಮೀನಾರಾಯಣ ಭಟ್ಟರು ಮತ್ತು ಪದ್ಮಾವತೀ ಅಮ್ಮನವರ ಪುತ್ರರಾಗಿ, ಬಾಲ್ಯದಲ್ಲಿ ಕಥೆ, ಪುರಾಣ, ಹಾಡುಗಳನ್ನು ಕೇಳುವ ಸೌಭಾಗ್ಯ ಪೋಷಕರಿಂದ ದೊರಕಿ, ಮಹಾನ್ ಕವಿಯಾಗುವ ಅವಕಾಶ ದೊರಕಿದ್ದು, ಆಧ್ಯಾತ್ಮಿಕ ಜಗತ್ತಿಗೆ ಉತ್ತಮ ಕೊಡುಗೆಯಾದರು.  ಸಂಸ್ಕೃತ ಭಾಷೆಯಲ್ಲಿ ಎರಡು ಸೂತ್ರ ಗ್ರಂಥಗಳು, ಎರಡು ಪ್ರಕರಣ ಗ್ರಂಥಗಳು, ಏಳು ಅಪ್ರಕಟಿತ ಸಂಸ್ಕೃತ ನಾಟಕ ಚಕ್ರಂ, 19 ಸ್ತೋತ್ರಗಳು, ಸ್ತೋತ್ರ ಗ್ರಂಥಗಳು, ಕನ್ನಡದಲ್ಲಿ ಮೂರು ನಾಟಕಗಳು, ಅದರಲ್ಲಿ ದೃಶ್ಯ ರಾಮಾಯಣ (12 ನಾಟಕಗಳ ಸಂಗ್ರಹ) ಮೂರು ಮಹಾಕಾವ್ಯಗಳು, ಐದು ನೃತ್ಯ ರೂಪಕಗಳನ್ನು ರಚಿಸಿ, ನಾಡಿಗೆ ಡಾ॥ ಬಂದಗದ್ದೆ ನಾಗರಾಜ ಅವರು ನೀಡಿದ್ದಾರೆ.


ಇವರ ಕಾವ್ಯದ ವಿಶೇಷವೇನೆಂದರೆ, ಛಂದಸ್ಸನ್ನು ಹಾಗೂ ಛಂದೋದೇವತೆಯನ್ನು ಗುರುತಿಸಿ, ಅದಕ್ಕೆ ಸರಿಯಾದ ಸ್ತೋತ್ರ ರಚಿಸಿ, ನಿತ್ಯ ಪಠಿಸಲು, ಸಹಾಯ ಮಾಡಿದ್ದಾರೆ. ವಿನಯಪರ ವ್ಯಕ್ತಿತ್ವವನ್ನು ಹೊಂದಿರುವ, ಸದಾ ಪರಹಿತಕ್ಷೇಮವನ್ನು ಸವ೯ರಿಗೂ ಬಯಸುವ ಡಾ॥ ಬಂದಗದ್ದೆ ನಾಗರಾಜ  ಅವರು,ಅನೇಕ ಸಂಘ ಸಂಸ್ಥೆಗಳಿಂದ, ಮಠಾಧಿಪತಿಗಳಿಂದ ಸನ್ಮಾನಿತರಾಗಿದ್ದಾರೆ. ಕನ್ನಡ ಸಾರಸ್ವತ ಲೋಕದ ಸಾಹಿತ್ಯ ಪ್ರಪಂಚಕ್ಕೆ, ಅದ್ಭುತ ಕೃತಿಗಳನ್ನು ನೀಡಿದ್ದಾರೆ. ಅದರಲ್ಲೂ, ಹೆಸರಿಸಬಹುದಾದ ಗ್ರಂಥಗಳು, ಶ್ರೀಮದ್ ವಿಷ್ಣು ಪುರಾಣ, ಶ್ರೀಮದ್ ಗಣೇಶ ಪುರಾಣ, ಕನಾ೯ಟಕ ಶ್ರೀಮದ್  ಭುವನೇಶ್ವರಿ ಕಥಾ ಮಂಜರೀ ಮತ್ತು ಇತ್ತೀಚೆಗೆ ಲೋಕಾರ್ಪಣೆಗೊಂಡ "ಶ್ರೀಮದಾತ್ಮಲಿಂಗವೈಭವಂ". ಭಾಮಿನಿ ಪಟ್ಪದಿಯಲ್ಲಿ ರಚಿಸಿದ ಅಧ್ಭುತ ಗ್ರಂಥ!   ಈ ನಾಲ್ಕು ಮಹಾನ್ ಗ್ರಂಥಗಳು ನಾಡಿನ ಮನೆಮನೆಗಳಲ್ಲಿ  ವಾಚನ ಮಾಡುವ ಯೋಗ್ಯತೆ ಪಡೆದಿವೆ. ಐವತ್ತೊಂದು ವಿವರದ ಸಂಧಿಗಳೊಳಗೊಂಡ  "" ಶ್ರೀಮದಾತ್ಮಲಿಂಗವೈಭವಂ"ದಲ್ಲಿ, ಶಿವಚರಿತೆ, ದೇವತೆಗಳ ವರ್ಣನೆ, ತೀರ್ಥಕ್ಷೇತ್ರದ ವಣ೯ನೆ, ಗೋಕಣ೯, ಕೋಟಿತೀರ್ಥದ ವರ್ಣನೆ, ವಿಶ್ವಾಮಿತ್ರ, ಭೃಗು, ಕಾಮಧೇನು ಮುಂತಾದ ವಿವರ ಅರಿಯಬಹುದು.

ಬದುಕಿಗೆ ಭಗವತ್ಪ್ರಾಪ್ತಿ, ಭಾರತೀಯ ಪರಂಪರೆಯ ಜ್ಞಾನ, ಮತ್ತು ಇವುಗಳನ್ನು ಸಾಧಿಸಲು, ಜೀವಿಗೆ ಮಾರ್ಗದರ್ಶನ ಅವಶ್ಯ! ಭಗವಂತನ ಅನುಸಂಧಾನಕ್ಕಾಗಿ, ಪೂವ೯ಜರು, ಮಹಾ ಪುರಾಣಗಳನ್ನು ಆವಿಷ್ಕರಿಸಿ, ಜೀವಿಗಳಿಗೆ ನೀಡಿ, ಮಹದುಪಕಾರ ಮಾಡಿದ ಮಹನೀಯರು. ಅಪಾರ ಪ್ರತಿಭೆ ಮತ್ತು ಪರಿಶ್ರಮ ವಹಿಸಿ, ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಲು, ಆಸ್ತಿಕ ಜನರಿಗೆ ಆಧ್ಯಾತ್ಮಿಕ ಗ್ರಂಥಗಳನ್ನು ನೀಡಿ ಜೀವನದ ವಿಧಾನ ಸರಿದಾರಿಯಲ್ಲಿರಲು ಕೊಡುಗೆ ನಾಡಿಗೆ ನೀಡಿದ ಮಹನೀಯರು ಇತ್ತೀಚೆಗೆ ಬಿಡುಗಡೆ ಆದ ಉತ್ಕೃಷ್ಟ ಗ್ರಂಥವಾದ "ಶ್ರೀಮದಾತ್ಮಲಿಂಗ ವೈಭವಂ"ದಲ್ಲಿ, ಗೋಕರ್ಣದ ಆತ್ಮಲಿಂಗದ ಮಹಿಮೆ, ಶಿವರಾತ್ರಿ ಮಹಿಮೆ, ಅರುಣಾಚಲ ಕ್ಷೇತ್ರದ ಮಹಿಮೆ, ಶಿವನ ಸೃಷ್ಟಿ, ಮನುಷ್ಯನ ಸೃಷ್ಟಿ, ಸಂಧ್ಯಾ ಸೃಷ್ಟಿ, ಪುರುಷ ಸೃಷ್ಟಿ, ರತಿ ಮನ್ಮಥರ ಮದುವೆ, ಶಿವ ಶಿವೆಯರ ವಿವಾಹ, ದಕ್ಷ ಯಜ್ಞ, ಗಣಪತಿ ಮಹಿಮೆ, ಕುಮಾರೇಶ್ವರನ ಮಹಿಮೆ, ಕಪಿಲ ತೀಥ೯ಗಳ ವಣ೯ನೆ,  ಪಠಿಸಬಹುದು. ಭಾರತೀಯ ಸರಕಾರ ನೀಡುವ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಎಲ್ಲಾ ರೀತಿಯಿಂದ ಅರ್ಹರು ಎಂದು ಡಾ॥ ವೀರೇಂದ್ರ ಹೆಗ್ಗಡೆಯವರು ಹಾರೈಸಿದ್ದಾರೆ.


ವಿದ್ವಾಂಸರು, ಕವಿಗಳು, ಸಾಹಿತಿಗಳು ಆಗಿರುವ ಡಾ॥ ಬಂದಗದ್ದೆ ನಾಗರಾಜ ಅವರು, ಶಿವಮೊಗ್ಗ ಜಿಲ್ಲೆಯ ಸಾಗರದವರು. ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ  ಆರಂಭಿಸಿ, ಅಲ್ಲಿಯೇ ನಿವೃತ್ತಿ ಹೊಂದಿ, ತಮ್ಮ ವಿಶ್ರಾಂತ ಜೀವನದಲ್ಲಿ ಅದ್ಭುತ ಕಾವ್ಯ ರಚನೆಯಲ್ಲಿ ತೊಡಗಿದ  ವಿದ್ವಾಂಸರು. ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್ ಫ್ಲೋರಿಡಾದ ಡಾಕ್ಟರೇಟ್ ಪದವಿ ಪಡೆದ, ಪುರಸ್ಕೃತರು. ಇವರು ರಚಿಸಿದ "ಕರ್ನಾಟಕ  ಶ್ರೀಮದ್ ಭುವನೇಶ್ವರಿ ಕಥಾಮಂಜರೀ "ಮಂಗಳೂರು ಟೌನ್ ಹಾಲ್‌ನಲ್ಲಿ, 25-10-2023 ರಂದು ಸಂಭ್ರಮದಿಂದ ಬಿಡುಗಡೆಗೊಂಡು ಕನ್ನಡ ಸಾರಸ್ವತ ಲೋಕಕ್ಕೆ, ನಾಡಿನ ಜನರು ಓದಲು, ಸಹಾಯ ಮಾಡಿದ ಮಹನೀಯರು.

 

ದೈವಿ ಶಕ್ತಿಗಲ್ಲದೇ, ಧನಶಕ್ತಿ, ಅಧಿಕಾರ ಶಕ್ತಿ, ದೇಹಶಕ್ತಿ ಮೊದಲಾದ ಯಾವ ಶಕ್ತಿಗೂ ಇಂತಹದೊಂದು ಕೃತಿಯನ್ನು ನಿಮಾ೯ಣ ಮಾಡಿಸಲು ಸಾಧ್ಯವಿಲ್ಲ ಎಂಬುದನ್ನು, ಈ ಕೃತಿಯಾದ ಶ್ರೀ ಮದಾತ್ಮಲಿಂಗ ವೈಭವಂವನ್ನು ಅವಲೋಕನ ಮಾಡಿದರೆ, ಯಾರಾದರೂ ಹೇಳಲೇಬೇಕಾಗುತ್ತದೆ. ಈ ಕೃತಿಯಲ್ಲಿ ವಿಫುಲ ತತ್ವಾನುಸಂಧಾನವಿದೆ, ದಶ೯ನಗಳ ಕ್ಲಿಷ್ಟ ಸಂಗತಿಗಳ ಸರಳ ವ್ಯಾಖ್ಯಾನವಿದೆ. ಇವರ ವಿದ್ವತ್, ಪೂರ್ಣಜ್ಞಾನ, ಪಾಂಡಿತ್ಯ ಪೂರ್ಣವಾದ  ಕವಿತಾಶೈಲಿ, ಪುರಾಣಶೈಲಿ ಅದ್ಭುತ! ಆಧ್ಯಾತ್ಮಿಕ ಲೋಕಕ್ಕೆ ಡಾ॥ ಬಂದಗದ್ದೆ ನಾಗರಾಜ ಅವರು ಶ್ರೇಷ್ಠ ಕೊಡುಗೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top