ಮಂಗಳೂರು: ಬಂಟ್ವಾಳ ತಾಲೂಕಿನ ಸಮೀಪದ ಮಂಜೇಶ್ವರ ಸರಹದ್ದಿನ ಬಾಕ್ರಬೈಲ್ನಲ್ಲಿ ಕಣಚೂರು ವೈದ್ಯಕೀಯ ಹಾಗೂ ಆಯುರ್ವೇದ ಆಸ್ಪತ್ರೆಗಳ ವತಿಯಿಂದ ಕದ್ರಿಹಿಲ್ಸ್ ಲಯನ್ಸ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವು ಇಂದು (ಆ.18) ಯಶಸ್ವಿಯಾಗಿ ನೆರವೇರಿತು.
ಲಯನ್ಸ್ ಅಧ್ಯಕ್ಷ ಲ.ಪ್ರಕಾಶನ್ ರವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಣಚೂರು ವೈದ್ಯಕೀಯ ಸಂಸ್ಥೆಯ ಕಿವಿ ಮೂಗು ಗಂಟಲು ತಜ್ಞ ಡಾ.ಅಶೋಕ್ ಮಾತನಾಡುತ್ತಾ ಸುಂದರ ಹಸಿರು ತಾಣದಲ್ಲಿ ನಡೆಸಿದ ಈ ಶಿಬಿರವು ಹಲವು ರೋಗಿಗಳಿಗೆ ವರದಾನವಾಗಲಿ ಎಂದರು.
ಅಯುರ್ವೇದ ಆಸ್ಪತ್ರೆಯ ವೈದ್ಯಕೀಯ ಸಲಹಾ ಮುಖ್ಯಸ್ಥ ಲ.ಡಾ. ಸುರೇಶ ನೆಗಳಗುಳಿಯವರು ಕಣಚೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನೂ ತಾವು ನೀಡಲಾಗುವ ಉಚಿತ ಆರೋಗ್ಯ ಕಾರ್ಡನ್ನೂ ಪಡೆಯಲು ಕರೆ ನೀಡಿದರು.
ಲ.ಪ್ರವೀಣ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಲಯನ್ ಸೇವಾ ಸಪ್ತಾಹದ ರೂವಾರಿ ಲ. ಎನ್ ಟಿ ರಾಜ, ಲ.ರತ್ನಾಕರ ಲ.ಗೋವಿಂದ ಶರ್ಮ, ಲ.ಸಂಜೀವ ಶೆಟ್ಟಿ, ಲ ಹರಿ ಪ್ರಸಾದ್, ಲ. ಚೆನ್ನಕೇಶವ, ಲ.ಭಾಸ್ಕರ ಶೆಟ್ಟಿ, ಲ.ಜಗಜೀವನ ಶೆಟ್ಟಿ, ಲ.ಸುಧಾಕರ ಶೆಟ್ಡಿಗಾರ್, ಲ.ಕೇಶವ ಭಟ್, ಡಾ ಸೌಮ್ಯ ಅಶೋಕ್, ಡಾ ಅಂಜಲಿ, ಡಾ ಚರಣ್ ರಾಜ್, ಮತ್ತಿತರ ವೈದ್ಯರೂ ವೈದ್ಯಕೀಯ ಸಿಬಂದಿಗಳು, ಬಾಕ್ರಬೈಲಿನ ಶಾಲಾ ಶಿಕ್ಷಕರು, ಪಂಚಾಯತ್ ಅಧ್ಯಕ್ಷರು ಮತ್ತಿತರ ಗಣ್ಯರು ಭಾಗವಹಿಸಿದರು.
ಕಣಚೂರು ಯೋಜನಾಧಿಕಾರಿ ರಶೀದ್ರವರು ಶಿಬಿರದ ವ್ಯವಸ್ಥೆ ಮಾಡಿದರು. ಲ.ಎನ್ ಟಿ ರಾಜಾ ಧನ್ಯವಾದ ಸಮರ್ಪಿಸಿದರು. ಶಿಬಿರದಲ್ಲಿ ನೂರೈವತ್ತಕ್ಕೂ ಹೆಚ್ಚಿನ ರೋಗಿಗಳು ತಪಾಸಣೆ ಹಾಗೂ ಚಿಕಿತ್ಸೆ ಪಡೆದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ