ಶತಮಾನೋತ್ಸವ ಕಟ್ಟಡಕ್ಕೆ ಸರಕಾರದಿಂದ ನೆರವಿಗೆ ಪ್ರಯತ್ನ: ಡಾ.ಭರತ್ ಶೆಟ್ಟಿ ವೈ

Upayuktha
0


ಕಾವೂರು:ಕಾವೂರು ಹಳೆ ವಿದ್ಯಾರ್ಥಿ ಸಂಘದ  ಸಭೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ  ಶಾಲೆಗೆ ಭೇಟಿ ನೀಡಿ ಶತಮಾನೋತ್ಸವದ ಕಾರ್ಯಕ್ರಮ ಕುರಿತು ಚರ್ಚಿಸಿದರು.


ಕಟ್ಟಡದ ನೀಲಿನಕ್ಷೆಯನ್ನು ಪರಿಶೀಲಿಸಿ ಸರಕಾರದಿಂದ ಅನುಮತಿ ಹಾಗೂ ಆರ್ಥಿಕ  ನೆರವು ದೊರಕಿಸುವ ಕುರಿತಂತೆ ಭರವಸೆ ನೀಡಿದರು.


ಈ ಸಂದರ್ಭದಲ್ಲಿ  ಕಾವೂರು ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಚಂದ್ರಾವತಿ ಇವರ ಬೀಳ್ಕೊಡುಗೆ  ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನೆನಪಿನ ಕಾಣಿಕೆ  ನೀಡಿ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೇಶವ ಅಮೀನ್, ಉಪಾಧ್ಯಕ್ಷರಾದ  ಚಂದ್ರಹಾಸ್, ಕಾರ್ಯದರ್ಶಿ ವಿಕೇಶ್, ಕಾವೂರು ಮಹಾಶಕ್ತಿ1ರ ಅಧ್ಯಕ್ಷರಾದ ಶಿತೆಶ್ ಕೊಂಡೆ, ಅವರು 15ನೇ ವಾರ್ಡ್ ಅಧ್ಯಕ್ಷರಾದ ಅಜಿತ್ ಶೆಟ್ಟಿ, ರಾಜು ಜ್ಯೋತಿ ನಗರ,ನಿತೇಶ್ ಕಾವೂರು, ಹಸನಬ್ಬ, ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೆಯೇ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top