ದಾವಣಗೆರೆ: ಖುಷಿ ವೆಲ್‌ಫೇರ್ ತಂಡದಿಂದ ಸರ್ಕಾರಿ ಶಾಲೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ

Upayuktha
0


ದಾವಣಗೆರೆ: ದಾವಣಗೆರೆಯ ಎಸ್ಓಜಿ ಕಾಲೋನಿಯಲ್ಲಿನ ಸರ್ಕಾರಿ ಶಾಲೆಯ ವಿನಂತಿಯನ್ನು ಪರಿಗಣಿಸಿ ಖುಷಿ ವೆಲ್ ಫೇರ್ ತಂಡದಿಂದ ತರಗತಿಯ ಕೊಠಡಿಯೊಳಗೆ ಸಾಕಷ್ಟು ಬೆಳಕು ಬಾರದ ಕಾರಣ ಶಾಲೆಯ ಆವರಣ ಹಾಗೂ ಸುತ್ತಮುತ್ತ ಇರುವ ಹೆಚ್ಚುವರಿ ಗಿಡಗಳ ರೆಂಬೆಗಳನ್ನು ಕತ್ತರಿಸಲಾಯಿತು.


ಸುಮಾರು ಮೂರು ದಿನಗಳ ಕಾಲ ಯಾವುದೇ ಹಣವನ್ನು ಸ್ವೀಕರಿಸದೆ ಈ ಕಾರ್ಯವನ್ನು ಪೂರ್ಣಗೊಳಿಸಿಕೊಡಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಖುಷಿ ವೆಲ್ ಫೇರ್ ನ ಈ ಕಾರ್ಯಕ್ಕೆ ಖುಷಿ ವೆಲ್ ಫೇರ್ ನ ಸ್ವಯಂ ಸೇವಕ ರಘುವೀರ್ ಹಾಗೂ ಖುಷಿ ವೆಲ್ ಫೇರ್ ತಂಡದ ನಿರ್ವಾಹಕ ಪ್ರಜ್ವಲ್.ಕೆ.ಎನ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
To Top