"ಭಾರತವನ್ನು ನೆಗೆಟಿವ್ ರೀತಿಯಲ್ಲಿ ಚಿತ್ರಿಸುವುದರ ಮೂಲಕ ಬಾಲಿವುಡ್ ಕೆಲವೊಂದು ಸಿನಿಮಾಗಳು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ರಿಷಭ್ ಶೆಟ್ಟಿಯವರು ಸಂದರ್ಶನ ಸಂದರ್ಭದಲ್ಲಿ ಹೇಳಿರುವ ಮಾತು ಸಿನಿ ಪ್ರಪಂಚದಲ್ಲಿ ಒಂದಿಷ್ಟು ಬಿಸಿಬಿಸಿ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ. ಆದರೆ ಇಂತಹ ನೆಗೆಟಿವ್ ಚಿತ್ರ ವಸ್ತುಗಳಿಂದಲೇ ಬಾಲಿವುಡ್ ಇರಬಹುದು; ಹಾಲಿವುಡ್ ಇರಬಹುದು; ಸ್ಯಾಂಡಲ್ ವುಡ್ ಇರಬಹುದು- ಈ ಎಲ್ಲಾ ವುಡ್ ಗಳ ಸಿನಿಮಾ ಬಾಕ್ಸ್ ತುಂಬುವುದೇ ಇಂತಹ ನೆಗಟಿವ್ ಕಥೆಗಳ ಮೂಲಕ. ಎಲ್ಲವನ್ನೂ ಸುಖಾಂತ ವಾಗಿ ತೇೂರಿಸಿದರೆ ಸಿನಿಮಾ ನೇೂಡುವರೇ ಬರಲಿಕ್ಕಿಲ್ಲ. ಈ ವಾಸ್ತವಿಕತೆಯನ್ನು ತಿಳಿದ ಚಿತ್ರ ನಿದೇ೯ಶಕರು, ತಯಾರಕರು, ಕಥೆಗಾರರು ಪ್ರತಿ ಚಿತ್ರದ ಮೊದಲಿಗೆ ಒಂದಿಷ್ಟು ನೆಗೆಟಿವ್ ಭರಿತವಾದ ದುರಂತ ಮಯಾವಾದ ಸನ್ನಿವೇಶಗಳನ್ನು ತುಂಬಿಸಿ ಚಿತ್ರೀಕರಣ ಮಾಡುವುದು ಸಾಮಾನ್ಯವಾದ ಸನ್ನಿವೇಶವಾಗಿ ಬಿಟ್ಟಿದೆ.
ಲೈಂಗಿಕ ಶೇೂಷಣೆ ಆರ್ಥಿಕ ಶೇೂಷಣೆ ಸಾಮಾಜಿಕ ಪಿಡುಗು ಒಂದೇ ಎರಡೇ, ಈ ಎಲ್ಲವನ್ನೂ ಚಿತ್ರದಲ್ಲಿ ತುಂಬಿಸಿದರೆ ಮಾತ್ರ ಅಂತಹ ಸಿನಿಮಾಗಳಿಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳು ಬರುವುದು ಅನ್ನುವ ಸತ್ಯ ಎಲ್ಲಾ ನಿರ್ಮಾಪಕರಿಗೂ ಗೊತ್ತಿರುವ ಸಂಗತಿ. ಇದನ್ನೇ ಚಿತ್ರ ವಿಮರ್ಶಕರು ವಿಶ್ಲೇಷಿಸುವಾಗ "ಈ ಚಿತ್ರ ತುಂಬಾ ವಾಸ್ತವಿಕವಾದ ಸಿನಿಮಾ ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ. ಇದನ್ನೆಲ್ಲಾ ನೇೂಡಿ ನಮ್ಮ ಸಮಾಜ ಬದಲಾಗಬೇಕು ಎಂದೆಲ್ಲಾ ಹೇಳಿ ತೀರ್ಪು ನೀಡುವುದು ಸಾಮಾನ್ಯ ವಿಷಯವೂ ಹೌದು.
ಬಹು ಹಿಂದೆ "ಸ್ಲಮ್ ಡಾಗ್ ಮಿಲೆನಿಯರ್" ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನವಾದಾಗ ಈ ಚಿತ್ರದ ಚಿತ್ರ ಕಥೆ ಭಾರತೀಯ ಮೂಲದ ಬಾಲಕಿಯ ಲೈಂಗಿಕ ಶೇೂಷಣೆಯ ಮೇಲೆ ಹೆಣೆದ ಕಥೆ. ಇದೇ ಸಿನಿಮಾಕ್ಕೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ರವರಿಗೂ ಸಂಗೀತಕ್ಕೆ ಪ್ರಶಸ್ತಿ ಬಂದಾಗ ಕೂಡಾ ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿದ್ದು ಇನ್ನೂ ನನಗೆ ನೆನಪಿದೆ. ಈ "ಸ್ಲಮ್ ಡಾಗ್" ಕುರಿತಾಗಿ ಒಂದು ವಿಮರ್ಶೆಯನ್ನು ಅಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದು ನೆನಪಿದೆ. ಅಂದರೆ ಇಲ್ಲಿ ಇಂಗ್ಲೆಂಡಿನ ಸಿನಿಮಾ ನಿದೇ೯ಶಕ ಮೈಕೆಲ್ ವಿಂಟರ್ ಬಾಟಮ್ ರವರು ತ್ರಿಷ್ಣಾ ಅನ್ನುವ ಹೆಸರಿನ ಬಾಲಕಿಯನ್ನು ಚಿತ್ರದ ವಸ್ತುವಾಗಿ ರೂಪಿಸಿದ ಕಥೆಯಾಗಿತ್ತು. ಮತ್ತೆ ಚರ್ಚೆ ಎಲ್ಲಿಯವರೆಗೆ ಮುಂದುವರಿಯಿತು ಕೇಳಿದರೆ ರಾಜಸ್ಥಾನ ಓರ್ವ ಬಡ ಕುಟುಂಬದ ಬಾಲಕಿಯ ಶೇೂಷಣೆಯ ವಾಸ್ತವಿಕ ಕಥೆ ಅನ್ನುವ ಮಟ್ಟಿಗೆ ವಾದ ವಿವಾದ ಚರ್ಚೆ ನಡೆದದ್ದು ಇನ್ನೂ ನೆನಪಿದೆ.
ಹಾಗಾದರೆ ಇಂತಹ ನೆಗೆಟಿವ್ ವಿಷಯಗಳಿಗೆ ಭಾರತವೇ ಉದಾಹರಣೆಯಾಗಬೇಕೇ? ಅದು ಒಬ್ಬ ವಿದೇಶಿ ನಿರ್ದೇಶಕನ ಕೈಯಲ್ಲಿ ಭಾರತೀಯ ಹೆಣ್ಣು ಮಕ್ಕಳ ದುರಂತಮಯ ಕಥೆ ಚಿತ್ರೀಕರಣಗೊಳ್ಳಬೇಕೆ? ಇದು ನಮ್ಮ ಸಿನಿಮಾ ಕಥೆಗಳ ಒಂದು ಮುಖವಾದರೆ ನಮ್ಮ ಭಾರತೀಯ ಸಿನಿಮಾ ಕಥೆಗಳು ಇಂತಹ ನೆಗೆಟಿವ್ ಅಂಶಗಳನ್ನು ಬಿಟ್ಟು ಚಿತ್ರ ಕಥೆ ಕಾದಂಬರಿ ಸಿನಿಮಾ ತಯಾರಿಸಲು ಸಾಧ್ಯವೇ ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ರಿಷಬ್ ಶೆಟ್ಟಿಯವರು ಈ ಬಾಲಿವುಡ್ ಕೆಲವು ಚಿತ್ರಗಳು ಭಾರತವನ್ನು ಅತ್ಯಂತ ನೆಗೆಟಿವ್ ಆಗಿಕಾಣುವ ರೀತಿಯಲ್ಲಿ ಚಿತ್ರೀಕರಿಸಿ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅನ್ನುವ ಹೇಳಿಕೆಯ ಮೇಲೆ ಕೆಲವರು ನೇರವಾಗಿ ಕಾಂತಾರ ಚಿತ್ರವನ್ನೆ ಉದಾಹರಣೆಯಾಗಿಟ್ಟುಕೊಂಡು ಅದರಲ್ಲೂ ಕೂಡಾ ಸಾಕಷ್ಟು ನೆಗೆಟಿವ್ ಸನ್ನಿವೇಶಗಳು ಇದ್ದವು ಅನ್ನುವುದನ್ನು ಬೊಟ್ಟು ಮಾಡಿ ತೇೂರಿಸಿದ್ದಾರೆ. ಹಾಗಂತ ಈ ಟೀಕೆಗಳನ್ನು ಅಲ್ಲಗಳಿಯುವಂತೆಯೂ ಇಲ್ಲ. ಈ ಎಲ್ಲಾ ನೆಗೆಟಿವುಗಳಿಗೆ ಸೆಡ್ಧು ಹೊಡೆದು ನಿಂತ ಕೊನೆಯ ಕ್ಷಣದ ಪಂಜುರ್ಲಿಯ ಪವಾಡವೇ ಇಡೀ ಚಿತ್ರಕ್ಕೆ ಪ್ರಶಸ್ತಿ ಪ್ರದಾನಿಸಿದೆ ಅನ್ನುವುದು ಸತ್ಯ. ಅದು ಕಾರಂತರ ಚೇೂಮನ ದುಡಿಯಲ್ಲೂ ಅಷ್ಟೇ. ಇದೇ ರೀತಿಯಲ್ಲಿ ನೆಗೆಟಿವಿನಿಂದ ಪೊಸಿಟಿವ್ಗೆ ಬಂದ ಕಾರಣ ಅದಕ್ಕೂ ಪ್ರಶಸ್ತಿ ಬಂತು. ಇನ್ನೂ ಅದೆಷ್ಟೋ ಚಿತ್ರಗಳ ಉದಾಹರಣೆ ನಮ್ಮ ಮುಂದಿದೆ.
ಒಂದಂತೂ ಸತ್ಯ ಇಂತಹ ಶೇೂಷಣೆ ಅನ್ಯಾಯ ಇದನ್ನೆಲ್ಲಾ ನಮ್ಮೆಲ್ಲರ ನೆಲದಲ್ಲಿ ನಾವು ನೇೂಡುವಾಗ ಇದೆಲ್ಲವೂ ನೆಗೆಟಿವ್ ಅನ್ನಿಸುದಿಲ್ಲ. ಬೆಳವಣಿಗೆ ಸುಧಾರಣೆಗೆ ಅಭಿವೃದ್ಧಿಯಾಗಿಯೇ ಕಾಣುತ್ತದೆ. ಆದರೆ ಇದನ್ನೇ ವಿದೇಶಿಯ ನೆಲದಲ್ಲಿ ನಿಂತು ನೇೂಡಿದಾಗ ನೆಗೆಟಿವ್ ಆಗಿ ನಮ್ಮ ಸಮಾಜವನ್ನು ನೇೂಡಿದ ಹಾಗೆ ಮುಜುಗರ ಅನ್ನಿಸುವುದು ಸಹಜ ಕೂಡ. ನಮ್ಮ ಮನೆಯ ಕಥೆಯ ವ್ಯಥೆಯನ್ನು ಬೇರೆಯವರ ಮನೆಯ ಅಂಗಳದಲ್ಲಿ ನೇೂಡಿ ಕುಶಿ ಪಡಲು ಯಾರ ಮನಸ್ಸು ಒಪ್ಪುತ್ತದೆ ಹೇಳಿ. ಅದೇ ರೀತಿ ಇದು ಕೂಡಾ. ಇವೆಲ್ಲವನ್ನೂ ನಮ್ಮ ಸಮಾಜದ ಬದಲಾವಣೆಗಾಗಿ ಮಾಡಿಕೊಂಡ ಸಿನಿಮಾಗಳು ಆಗ ಬೇಕೇ ಹೊರತು ಪರದೇಶಿಗರ ಮುಂದೆ ಪ್ರದರ್ಶನಕ್ಕಾಗಿಯೊ ಪ್ರಶಸ್ತಿಗಾಗಿಯೊ ಪ್ರದರ್ಶನಕ್ಕಿಡುವ ಸಿನಿಮಾ ವಸ್ತುಗಳಾಗಬಾರದು. ಅಷ್ಟೇ ಅಲ್ವೇ?
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ