- ಡಾ. ಈಶ್ವರ ದೈತೋಟ ಎಂ.ಎ. ಡಿ.ಲಿಟ್
ಗಾಳಿಯಲ್ಲಿ ಪ್ರಾಣವಾಯು ಇರುವಂತೆಯೇ ದೇಹದಲ್ಲಿಯೂ ಪ್ರಾಣ ಶಕ್ತಿ ಇದೆಯೆಂತೆ. ಬಾಹ್ಯ ಆಹಾರ ದೊರೆಯದಿದ್ದಾಗ ಮನುಷ್ಯನನ್ನು ಪೊರೆಯು್ವ ಅಂತಃಶಕ್ತಿ ಅದುವೇ ಅಂತೆ. ಯೋಗಿಗಳಾದರೆ ಒಳ್ಳೆಯದು- ಖಂಡಿತಾ ಭೋಗಿಗಳಾಗದಿರಿ ಎಂದು ಅರಿತವರು ಹೇಳುವುದು ಸುಮ್ಮನೆಯಲ್ಲ!
ಹೃದಯ ಬಡಿತ, ಆಹಾರ ಪಚನ, ಉಸಿರಾಟ ಪ್ರಕ್ರಿಯೆ ಇಂಥವಕ್ಕೆಲ್ಲಾ ಇಂಧನ ಬೇಕು- ವಾಹನಗಳ ಅಥವಾ ಗುಂಡಂಗಡಿಗಳ ಶರ್ಬತ್ತುಗಳಲ್ಲಾ. ನಾವು ಅರಿಯಬೇಕಾದುದು ಸಮರ್ಥ ಆರೋಗ್ಯವಂತ ಅಂಗಾಂಗಳಿದ್ದರೆ ಸಂಬಂಧ ಪಟ್ಟ ಬದುಕಿನ ಜೇವಕ್ಕೆ ಸುಖವಿದೆ. ಕೆಲಸ-ಕಾರ್ಯಗಳಿಗೆ ಎಂದು ನಮ್ಮ ಚಟುವಟಿಕೆಗಳಿಗೆಲ್ಲಾ ಅನಿವಾರ್ಯವಾದ ನೀರು-ಆಹಾರ ದೊರೆಯುತ್ತದೆ. ಚೆನ್ನಾಗಿ ಅರಗುತ್ತದೆ. ಇದರಿಂದ ಕ್ಯಾಲೋರಿ ಕರಗುವಿಕೆಯೂ ಕಮ್ಮಿ ಮತ್ತು ಕಮ್ಮಿ ತಿಂದುಂಡರೆ ಜೀರ್ಣಕ್ಕೆ ತ್ರಾಣ ಬರುತ್ತದೆ. ದೇಹಕ್ಕೆ ಖುಶಿ ಇರುತ್ತದೆ. ಮಾಡಬೇಕಾದ ಚಟುವಟಿಕೆಗಳಿಗೆ ತಾಕತ್ತು ಬರುತ್ತದೆ.
ಬಿಗಿಯಾದ ದೇಹ, ಗಡಿಬಿಡಿಯ ಉಸಿರಾಟ, ಉದ್ವೇಗದ ಮನಸ್ಸುಗಳು ಹೊಟ್ಟೆಗಿಳಿದ 3000 ಕ್ಯಾಲೋರಿಗಳಲ್ಲಿ ಮೂರನೇ ಎರಡು ಭಾಗ ಸುಟ್ಟು ಬಳಕೆಯಾಗುತ್ತಿದೆ. ಮನಸ್ಸು-ದೇಹಗಳು ಖುಶಿ ಪಡುತ್ತವೆಂದು ಮನೆಯಜ್ಜಂಮಂದಿರೂ ಅರಿತಿದ್ದರು. ಅಗತ್ಯ ಬಿದ್ದರೆ ವೈದ್ಯರುಗಳೂ ಮನವರಿಕೆ ಮಾಡುತ್ತಾರೆ. ಉಳಿದ ಪ್ರಮಾಣ ಇನ್ನಿತರ ಚಟುವಟಿಕೆಗಳಿಗೆ ಶಕ್ತಿ ಪೂರೈಕೆ ಮಾಡುತ್ತದೆ. ಅರಗದುದನ್ನು ದೇಹದಿಂದ ಹೊರತಳ್ಳಿ ಆರಾಮ ಕೊಡುತ್ತದೆ ಎಂದು ಅರಿತವರು ಹೇಳುತ್ತಿರುತ್ತಿರುತ್ತಾರೆಂದು ಅನುಭವಿಗಳಿಗೆ ಗೊತ್ತಿರುತ್ತದೆ.
ಆದರೆ, ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಯಂತ್ರದ ಹಾಗೆ ದುಡಿಯುವಲ್ಲಿ ಸಂದಾಯದ ಮೂರನೇ ಎರಡಂಶ ಸಂಬಳ ಸಾರಿಗೆಗೆ ಒಂದಷ್ಟು, ಸಮಾಜೋದ್ಧರಕ್ಕೆಂದು ಉಳಿದುದು ಹೊಟ್ಟೆಪಾಡಿಗೆ ಎಂದು ರೇಗಿಸುವುದೂ ಇದೆ. ಏಕೆಂದರೆ, ನಮ್ಮಲ್ಲಿ ಕೋಟ್ಯಾಂತರ ಮಂದಿ ದಿನವಿಡೀ ದುಡಿದರೂ, ವೈಜ್ಞಾನಿಕವಾಗಿ ಮಾನವ ದೇಹವೊಂದಕ್ಕೆ ಇಷ್ಟು ಬೇಕು ಎಂದು ನಿರ್ಧರಿತ ಪ್ರಮಾಣಕ್ಕಿಂತ ಎಷ್ಟೋ ಕಮ್ಮಿ ಹೊಟ್ಟೆಗೆ ದೊರೆತರೂ ದೇವರ ನಂಬಿಕೆಯಲ್ಲಿ ಧೀರ್ಘಕಾಲ ಬದುಕಿ ಬಿಡುವ ಬಿಡು ಸನ್ಯಾಸಿಗಳ ಕಥೆಗಳು ಅಯ್ಯಯೋ ಇವರಿಷ್ಟೇ ತಿಂದು ಬದುಕಿ ಬಿಡುತ್ತಾರಯೇ! ಎಂದು ಆಶ್ಚರ್ಯ ಪಡಬೇಕಾಗುತ್ತದೆಂದು ಅನುಭವಿಗಳು ಹೇಳುತ್ತಿರುತ್ತಾರೆ, ಎಷ್ಟೋ ಬಿಡುಸನ್ಯಾಸಿಗಳ ಬದುಕಿನ ರಹಸ್ಯವೇನೆಂದು ಹೇಳುವುದು ಕಷ್ಟ- ದೈವಬಲವೇ ಎಂದು ಕೈಮುಗಿಯಬೇಕಷ್ಟೆ! ನನಗೂ ಅದು ನಿಜವೆನಿಸುತ್ತದೆ. ಏಕೆಂದರೆ, ನಮ್ಮ ತೊಂಡಜ್ಜಿ ನೆರಿಗಟ್ಟಿದ ಮುಖದ ವಯಸಿನಲ್ಲೂ ಒಂದಿಷ್ಟು ಕೊಯಿಶಕ್ಕಿ ಗಂಜಿ ಮತ್ತು ಮಜ್ಷಿಗೆಯಲ್ಲಿ ದಿನದೂಡುತ್ತಿದ್ದದನ್ನು ನಾನೇ ಕಂಡಿದ್ದೇನೆ!
ಗಾಳಿಯಲ್ಲಿ ಪ್ರಾಣವಾಯು ಇರುವ ಹಾಗೆಯೇ ದೇಹದಲ್ಲಿಯೇ ಪ್ರಾಣಶಕ್ತಿ ಇರುತ್ತದೆಂದು ಅವರು ಹೇಳುತ್ತಲಿದ್ದರು. ಆಹಾರ ದೊರೆಯದಾಗ ಅಥವಾ ಮನಃಪೂರ್ವಕವಾಗಿ ತ್ಯಜಿಸಿದಾಗ ಪೊರೆಯುವ ಅಂತಃಶಕ್ತಿ ಅದುವೇ ಎಂದು ಅರಿತವರು ಹೇಳುತ್ತಲೇ ಬಂದಿದ್ದಾರೆ. ಭೋಗಿಗಳಾಗಬೇಡಿ, ಯೋಗಿಗಳಾಗಿ ಎಂದು ಅರಿತವರು ಶತಮಾನಗಳಿಂದ ಹೇಳುತ್ತಲೇ ಬಂದಿರುವುದು ತಾಳೆಗ್ರಂಥಗಳಲ್ಲಿವೆಯಂತೆ.
ಅಷ್ಟೇ ಅಲ್ಲ! ಶತಕ ಹೊಡೆಯುವ ಮೊದಲೇ ಉಸಿರಾಟ ನಿಲ್ಲದಿರಬೇಕೇ? ಹಾಗಿದ್ದರೆ ಉಸಿರಾಡುವುದನ್ನು ಕಮ್ಮಿ ಮಾಡಿ, ದೀರ್ಘಕಾಲ ಬದುಕಿರಿ ಎಂಬ ಬದುಕಿನ ಸೂತ್ರದ ಬಗ್ಗೆಯೂ ನಾನು ಓದಿರುವುದು ನೆನಪಿನಲ್ಲಿವತ್ತೂ ಉಳಿದಿದೆ. ಸರಾಸರೀ ಶ್ವಾಸೋಚ್ಚಾಸ ಪ್ರಮಾಣವನ್ನು ಇಳಿಸಿದರೆ, ಅಂದರೆ ನಿಮಿಷಕ್ಕೆ ಎರಡೇ ಸಲ ಉಸಿರೆಳೆದು ಬಿಡುತ್ತಲಿದ್ದರೆ 175 ವರ್ಷಗಳ ಕಾಲ ಬದುಕಬಹುದು ಎಂಬ ಸಂಶೋಧನೆ ಮಾಡಿದವರು ಪುಸ್ತಕದಲ್ಲಿಯೂ ಅದನ್ನು ದಾಖಲಿಸಿದ್ದಾರೆ.
ಅದಕ್ಕೆ ಆಧಾರವೇನೆಂದರೆ ಶ್ರೀಸಾಮಾನ್ಯರು ಒಂದು ನಿಮಿಷಕ್ಕೆ 15-16 ಸಲ ಉಸಿರೆಳೆದು ಬಿಡುತ್ತಿರುತ್ತಾರೆ. ಆದರೆ 120 ವರ್ಷ ಬದುಕಿದವರು ನಿಮಿಷಕ್ಕೆ 10-12 ಸಲ ಮಾತ್ರ ಉಸಿರಾಟ ನಡೆಸುವ ಜಾಣರೆಂದೂ ದಾಖಲೆಯಲಿದೆ. ವಿರಾಮ ಹೊಂದಿ, ಶಾಂತ ಮನಸ್ಸು, ಹದಭಾವನೆಯುಳ್ಳವರು ಸರ್ವೇ ಸಾಮಾನ್ಯ ಕಮ್ಮಿ ಉಸಿರಾಟ ನಡೆಸುವುದಾಗಿ ಸೈಂಟಿಫಿಕ್ ಆಗಿಯೂ ಕಂಡು ಬಂದಿದೆಯಂತೆ. ಅದಲ್ಲದೆ, ಅವರು ಕಡಿಮೆ ತಿಂಡಿ, ಊಟ ಮಾಡುತ್ತಾರೆಂಬುದೂ ಕಂಡು ಬಂದಿದೆಯಂತೆ. ನನಗಿದೆಲ್ಲಾ ಗಮನ ಸೆಳೆಯುವಂತಾದುದು ಇತ್ತೀಚೆಗೆ 80-90 ರ ನಡುವೆ ಜೀವತ್ಯಜಿಸಿದ ಹಲವಾರು ಮಂದಿ ಬಗ್ಗೆ ದೇಶವಿದೇಶಗಳಲ್ಲಿಯೂ ಸುದ್ದಿ ಬರುತ್ತಲಿದೆ. ದಶಕಗಳ ಹಿಂದೆ ಮಾನ್ಯ ವಿಶ್ವೇಶ್ವರಯ್ಯರು ಶತಕ ಬಾರಿಸಿ ತೆರಳಿದುದನ್ನು ಪತ್ರಿಕೆಗಳಲ್ಲಿ ಅಕ್ಷರ ಜೋಡಿಸಿ ಓದಿದುದು ನನಗಿವತ್ತೂ ನೆನಪಿದೆ. ಅಂಥವರೆಲ್ಲಾ ತಮಗೆಷ್ಟು ಬೇಕೋ ಅಷ್ಟೇ ಉಣ್ಣುವುದಲ್ಲದೆ, ಮನಸ್ಸು, ದೇಹಗಳಿಗೆ ಕೊಡಬೇಕಾದ ಕಾರ್ಯಶಕ್ತಿಯನ್ನು ಕೊಟ್ಟು ಬಳಸುತ್ತಲೇ ಇದ್ದವರೆಂದೂ ಗುರುತಿಸಲ್ಪಟ್ಟಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ