ನಾಳೆ ಕೊಪ್ಪದ ಮನೆಯಂಗಳದಲ್ಲಿ ಯಕ್ಷಗಾನ ತಾಳಮದ್ದಳೆ
ಮಹಾಭಾರತದಲ್ಲಿ ಅತ್ಯಂತ ಹಿರಿಯ ಮತ್ತು ಅತ್ಯಂತ ಗಂಭೀರ ವ್ಯಕ್ತಿತ್ವದ ಮೇರು ವ್ಯಕ್ತಿ ಅಂದರೆ ಅದು ಭೀಷ್ಮಾಚಾರ್ಯರು.
ಇವತ್ತಿಗೂ ಯಾವುದೇ ಕ್ಷೇತ್ರದಲ್ಲಿ ಸಾಧನೆಯ ಹಿರಿತನದ ವ್ಯಕ್ತಿಗಳನ್ನು 'ಭೀಷ್ಮ' ಎಂದು ಗೌರವಿಸಿ ಸಂಬೋಧಿಸುವುದು ವಾಡಿಕೆ.
ಹಸ್ಥಿನಾವತಿಯ ಸಾಮ್ರಾಜ್ಯದ ರಕ್ಷಣೆಯ ಹೊಣೆ ಹೊತ್ತು ನಿಂತ ಭೀಷ್ಮಾಚಾರ್ಯರ ಮೇಲೆ ಮಹಾಭಾರತ ಕಾಲದಲ್ಲೇ ಪ್ರಶ್ನೆಗಳಿದ್ದವು. ಈಗಲೂ ಆ ಪಾತ್ರದ ಮೇಲೆ ಪ್ರಶ್ನೆಗಳಿವೆ, ಚರ್ಚೆಗಳಿವೆ!!:
ಮಹಾಭಾರತದಲ್ಲಿನ ಒಂದು ದುರಂತ ಸನ್ನಿವೇಶ ಅಂದರೆ ಅದು ದ್ರೌಪದಿಯ ಮಾನ ಹರಣ ಪ್ರಯತ್ನ ಸಂದರ್ಭ. ತನ್ನ ಮೊಮ್ಮಗನಿಗೆ ಸಮನಾದ ವ್ಯಕ್ತಿಯಿಂದ ಮಹಿಳೆಯ ಮಾನ ಹರಣವಾಗುವಂತಹ ಸಂದರ್ಭದಲ್ಲಿ ಪ್ರತಿರೋಧಿಸದೆ, ತಲೆ ತಗ್ಗಿಸಿ ಕುಳಿತುಕೊಳ್ಳುವ ಭೀಷ್ಮರ ಮೌನ ಸಾರ್ವಕಾಲಿಕ ಚರ್ಚಾ ಪ್ರಶ್ನೆ.
ಅಜ್ಞಾತವಾಸದಲ್ಲಿದ್ದ ಪಾಂಡವರನ್ನು ಗುರುತಿಸಲು ಕೌರವ ಹೋಡಿದ ಗೋಗ್ರಹಣವೆಂಬ ನಾಟಕದಲ್ಲಿ ದುರ್ಯೋಧನನ ತಂತ್ರದ ಸೂತ್ರಕ್ಕೆ ಸಿಕ್ಕಿದ ಪಾತ್ರದಂತೆ ವರ್ತಿಸುವ ಭೀಷ್ಮರ ಹೋರಾಟ ಸಾರ್ವಕಾಲಿಕ ಚರ್ಚಾ ಪ್ರಶ್ನೆ.
ಧರ್ಮದ ಪಕ್ಷಕ್ಕೆ ಸೇರುವ ಅವಕಾಶವಿದ್ದರೂ, ಅಧರ್ಮದ ಪಕ್ಷದೊಂದಿಗೆ ಗುರುತಿಸಿಕೊಂಡು, ಹಸ್ತಿನಾವತಿಯ ರಕ್ಷಣೆಯ ಹೊರೆ ಹೊತ್ತ ಮಹಾಪುರುಷರಾಗಿದ್ದ ಭೀಷ್ಮರು, ಆ ಪಕ್ಷದಿಂದ ಪ್ರಧಾನಿ ಸೇನಾಧಿಪತ್ಯದಲ್ಲಿ ಕಾಣಿಸಿಕೊಳ್ಳುತ್ತ ಚುಕ್ಕಾಣಿ ಹಿಡಿದು, ರಾಜಕಾರಣದ ನಿವೃತ್ತಿಯ ನಂತರ (ಶರಶಯ್ಯೆಗೆ ಬಂದ ಮೇಲೆ), ಧರ್ಮದ ಪಕ್ಷದ ಧರ್ಮರಾಯನಿಗೆ ಬೆಂಬಲ ಸೂಚಿಸುವ ಭೀಷ್ಮರ ಅಂತರಂಗದ ಮನಸ್ಥಿತಿಯೂ ಒಂದು ಸಾರ್ವಕಾಲಿಕ ಚರ್ಚಾ ಪ್ರಶ್ನೆ.
ಇಂತಹ ಹತ್ತಾರು ಪ್ರಶ್ನೆಗಳು ಆಗಲೂ ಇದ್ದವು, ಈಗಲೂ ಇದೆ, ಮುಂದೆಯೂ ಕೂಡ.
ಭೀಷ್ಮರ 800 ಪುಟಗಳಷ್ಟು (ವರ್ಷಗಳ) ದೀರ್ಘವಾದ ಬದುಕಿನ ಕಥಾನಕದ ಬಹುತೇಕ ಪ್ರತಿ ಅಧ್ಯಾಯದಲ್ಲೂ ಸಾರ್ವಕಾಲಿಕ ಕರ್ಮ ಬಂಧದ ಚರ್ಚಾ ಪ್ರಶ್ನೆಗಳಿವೆ.
ಅಂತಹ ಆ ಎಲ್ಲ ಅಧ್ಯಾಯಗಳ ಈ ಚರ್ಚಾ ಪ್ರಶ್ನೆಗಳಿಗೆ ಅದೇ ಮಹಾಭಾರತದಲ್ಲಿ ಉತ್ತರಗಳಿವೆ. ಅಲ್ಲಿ ಇಲ್ಲದೇ ಇರಬಹುದಾದ ಉತ್ತರಗಳು ಈಗ ಚರ್ಚೆಯಲ್ಲಿ ಸಿಗಲಿವೆ!!
ಆ ಜಿಜ್ಞಾಸ್ಯ ಪ್ರಶ್ನೆಗಳನ್ನು, ಅದರ ಉತ್ತರಗಳನ್ನು ಒಂದು ಚರ್ಚಾ ವೇದಿಕೆಯ ಮುಂಭಾಗದಲ್ಲಿ ಕುಳಿತು ನೇರವಾಗಿ ಗ್ರಹಿಸುವ ಅವಕಾಶ ನಮಗೆಲ್ಲ!!!
ಸುಮಾರು 5 ಗಂಟೆಗಳ ಸುದೀರ್ಘ ಚರ್ಚೆ!!! ಸಾಧ್ಯತೆ.
ಚರ್ಚೆಯಲ್ಲಿ ಕರ್ಮ ಬಂಧಿ ಭೀಷ್ಮ ರಿರುತ್ತಾರೆ,
ಛಲದಿಂದ ಪ್ರಜ್ವಲಿಸುವ ಮೊಮ್ಮಗ ದುರ್ಯೋಧನ ಇರುತ್ತಾನೆ,
ಕೆಣಕುವ ಪ್ರಶ್ನೆಗಳೊಂದಿಗೆ ಅರ್ಜುನ ಆಸೀನನಾಗಿರುತ್ತಾನೆ.
ಚರ್ಚೆಯ ನ್ಯಾಯಾದೀಶನೋ ಎಂಬಂತೆ ಭಗವಂತ ಶ್ರೀಕೃಷ್ಣನೇ ಗೀತೆಯ ಮೂರನೇ ಅಧ್ಯಾಯದೊಂದಿಗೆ(!!?) ಚರ್ಚಾ ವೇದಿಕೆಯಲ್ಲಿರುತ್ತಾನೆ!!
ಚರ್ಚೆ ನೆಡೆಯುವುದು: ನಾಳೆ ಭಾನುವಾರ ಅಂದರೆ 12.05.2024 ಮಧ್ಯಾಹ್ನ 3.00 ಗಂಟೆಯ ಸರಿಯಾದ ಮುಹೂರ್ತದಿಂದ!!!
ಚರ್ಚಾ ಸ್ಥಳ: ಜಿ.ಆರ್.ಅಶೋಕ, ಕುಮರಿಗದ್ದೆ (ಸಿಗದಾಳು) ಇವರ ಮನೆಯಂಗಳ
ಚರ್ಚೆಯ ಸ್ವಾದ ಸವಿಯಲು ನಾವು ನೀವುಗಳೆಲ್ಲ ವೇದಿಕೆಯ ಕೆಳ ಭಾಗದಲ್ಲಿ!!!
**
ಯಕ್ಷಗಾನ ತಾಳಮದ್ದಲೆ.
ಪ್ರಸಂಗ: ಭೀಷ್ಮ ಸೇನಾಧಿಪತ್ಯ-ಸುದರ್ಶನ ಗ್ರಹಣ
ಭಾಗವತರು: ಪ್ರಸನ್ನ ಭಟ್ ಬಾಳ್ಕಲ್
ಮದ್ದಲೆ: ರಾಘವೇಂದ್ರ ಹೆಗ್ಗಡೆ, ಯಲ್ಲಾಪುರ
ಚಂಡೆ: ಹೆಚ್.ಎಸ್.ಗಣೇಶಮೂರ್ತಿ ಹುಲುಗಾರು
ಮುಮ್ಮೇಳದಲ್ಲಿ:
ವಾಸುದೇವ ರಂಗಾ ಭಟ್, ಉಡುಪಿ,
ಗಣಪತಿ ಭಟ್, ಸಂಕದಗುಂಡಿ,
ಪವನ್ ಕಿರಣ್ಕೆರೆ,
ಸೀತಾರಾಮಚಂದು ಹೆಗಡೆ, ಶಿರಸಿ,
ಅಶೋಕ, ಸಿಗದಾಳ್.
ಅಭಿರಾಮ, ಸಿಗದಾಳ್.
ಅರವಿಂದ ಸಿಗದಾಳ್, ಮೇಲುಕೊಪ್ಪ
ಮುಖ್ಯ ಅತಿಥಿ: ಹೆಚ್.ಎಂ.ನಾಗರಾಜರಾವ್ ಕಲ್ಕಟ್ಟೆ.
**
ರಸಮಯ ಚರ್ಚಾರೂಪದ ವಿಶಿಷ್ಟ ತಾಳಮದ್ದಳೆಗೆ ಎಲ್ಲರಿಗೂ ಆತ್ಮೀಯ ಸ್ವಾಗತ. ಮನೆಗೇ ಬಂದು ಕರೆಯಬೇಕೆಂಬ ಅಭಿಲಾಷೆ ಇದ್ದರೂ, ಎಲ್ಲರ ಮನೆಗೆ ಬಂದು ಕರೆಯಲಾಗಲಿಲ್ಲ.
ಇದು ಮನೆಯಂಗಳದಲ್ಲಿ ನಡೆಯುವ ಕಾರ್ಯಕ್ರಮವಾದರೂ, ಕಲಾಪ್ರೇಮಿಗಳು, ಹಿತೈಷಿಗಳೂ ಆದ ನಿಮ್ಮ ಮನದಂಗಳದ ಕಾರ್ಯಕ್ರಮ ಅಂತ ಭಾವಿಸಿ, ಇದನ್ನೇ ಆತ್ಮೀಯ ಕರೆಯೋಲೆ ಅಂತ ತಿಳಿದು, ಪರಿಚಿತ ಕಲಾಪ್ರೇಮಿಗಳನ್ನ ಕರೆದುಕೊಂಡು ತಾಳಮದ್ದಲೆಗೆ ಬನ್ನಿ.
ಒಂದು ಲೈವ್ ಚರ್ಚೆಗೆ ನಾವು ನೀವುಗಳೆಲ್ಲ ಸಾಕ್ಷಿಯಾಗೋಣ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ