ಗೋವಿಂದ ದಾಸ ಕಾಲೇಜಿನಲ್ಲಿ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮ

Upayuktha
0



ಸುರತ್ಕಲ್:  ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ನಿಶಾ ರವರು ಚಂದ್ರಹಾಸ ಕಣಂತೂರು  ರವರು  ಬರೆದ ಮೈಮೆ – ಓಂಜಿ ಕೋಪೆ ಪಾಡ್ದನದ ಕತೆಕುಲು  ಎಂಬ ಪುಸ್ತಕವನ್ನು ಪರಿಚಯಿಸಿದರು. ತುಳುನಾಡ ಜನರ ಜೀವನ ಶೈಲಿ, ಅವರ ಕೆಲಸ ಕಾರ್ಯ, ಪಾಡ್ದನದಲ್ಲಿ  ಬರುವ ದೇವ ದೈವರ ಮಹಿಮೆ ಬಹು ಸೊಗಸಾಗಿ ಈ ಕೃತಿಯಲ್ಲಿ ಮೂಡಿದೆ ಎಂದರು. 


ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಕೃಷ್ಣಮೂರ್ತಿಯವರು , ನಿಶಾ ರವರಿಗೆ  ಸ್ಮರಣಿಕೆ ನೀಡಿ ಗೌರವಿಸಿದರು. ಬಿ.ಸಿಎ ವಿಭಾಗದ ಮುಖ್ಯಸ್ಥೆ ಗೀತಾ,  ಉಪನ್ಯಾಸಕರುಗಳಾದ, ಡಾ. ಆಶಾಲತಾ.ಪಿ, ಶೈಲಜಾ, ವೀಣಾ,  ಪೂರ್ಣಿಮಾ ಗೋಖಲೆ, ಗ್ರಂಥಪಾಲಕಿ ಡಾ.ಸುಜಾತಾ ಬಿ, ಗ್ರಂಥಾಲಯದ ಸಿಬ್ಬಂದಿಗಳು  ಉಪಸ್ಥಿತರಿದ್ದರು. ಪ್ರಥಮ ಬಿ.ಸಿ.ಎ  ವಿದ್ಯಾರ್ಥಿನಿ ಸಿಂಚನ ಸ್ವಾಗತಿಸಿ ವಂದಿಸಿದರು. 


ಕಾಲೇಜಿನ ಹಳೇ ವಿದ್ಯಾರ್ಥಿ ಖ್ಯಾತ ಕೊಂಕಣಿ ಸಾಹಿತಿ ಹಾಗು ಸಂಘಟಕ ರೊನಾಲ್ಡ್ ಸಿಕ್ವೇರಾ ಮತ್ತು ಪ್ರಸಿದ್ಧ ತುಳು ಜಾನಪದ  ವಿದ್ವಾಂಸ ಹಾಗು ಸಾಹಿತಿ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ರವರಿಗೆ ನುಡಿನಮನ ಸಲ್ಲಿಸಲಾಯಿತು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top