ಜಿಹಾದಿ ಮನಸ್ಥಿತಿಗೆ ಕಾಂಗ್ರೆಸ್ ಸರಕಾರದ ಪ್ರಚೋದನೆ: ಶಾಸಕ ಡಾ. ಭರತ್ ಶೆಟ್ಟಿ ಆರೋಪ

Upayuktha
0


ಮಂಗಳೂರು: ಹೆಸರಾಂತ ಗಾಯಕರೊಬ್ಬರು ಶ್ರೀರಾಮ ಭಜನೆ ಗೀತೆ ಹಾಡುವ ವೇಳೆ ನೆರೆದಿದ್ದ ಅನ್ಯಕೋಮಿನ ಯುವಕರು ದಾಂಧಲೆ ಎಬ್ಬಿಸುವ ಮೂಲಕ ರಾಜ್ಯ ಸರಕಾರಕ್ಕೆ ಸವಾಲು ಹಾಕಿದ್ದಾರೆ. ರಾಜ್ಯ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.


ಡಿ.ಜೆ ಹಳ್ಳಿ, ಕೆ ಜೆ ಹಳ್ಳಿ ದುರ್ಘಟನೆ ಕುರಿತಾಗಿ ಕೇಸು ವಾಪಾಸು ಪಡೆಯಲು ಯೋಚಿಸಿರುವುದು ಇಂತಹ ಘಟನೆ ಮರುಕಳಿಸಲು ಕಾರಣ. ಅತಿಯಾದ ಓಲೈಕೆ, ಮೃದು ದೋರಣೆಯಿಂದ ರಾಜ್ಯದಲ್ಲಿ ಮುಸ್ಲಿಂ ಸ್ಲೀಪರ್ ಸೆಲ್‌ಗಳು ಕಾಂಗ್ರೆಸ್ ಸರಕಾರ ಬಂದ ಕೂಡಲೇ ಚುರುಕಾಗಿವೆ.  ದೇಶದ್ರೋಹಿ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ.


ಭಯೋತ್ಪಾದಕ ಮನಸ್ಥಿತಿಯ ಮುಸ್ಲಿಂ ಸಂಘಟನೆಗಳು ಅದೇ ಸಮಾಜದ ಯುವಕರನ್ನು ಜಿಹಾದಿ ಶಕ್ತಗಳನ್ನಾಗಿ ಪರಿವರ್ತಿಸುತ್ತಿವೆ. ಮೈಸೂರಿನಲ್ಲಿ ಶ್ರೀರಾಮನ ಭಜನೆ ಹಾಡನ್ನು ಹೇಳುವ ಸಂದರ್ಭ ಹಿಂದೂಗಳ ಭಜನೆ ಪೂಜೆಯನ್ನು ವಿರೋಧಿಸುವ ಮನಸ್ಥಿತಿಯ ಮುಸ್ಲಿಂ ದಾಂಧಲೆ ಎಬ್ಬಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.


ರಾಜ್ಯ ಸರ್ಕಾರ ಇಂತಹ ಶಕ್ತಿಗಳನ್ನು ಮಟ್ಟ ಹಾಕದೆ ಹೋದರೆ ರಾಜ್ಯ ಮುಂದಿನ ದಿನಗಳಲ್ಲಿ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದ್ದಾರೆ.


ಹಿಂದೂ ಸಮಾಜದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ಭದ್ರತಾದಳ ಬಂಧಿಸಿರುವುದನ್ನು  ಶಾಸಕರು ಶ್ಲಾಘಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top