ಬೆಂಗಳೂರು: ಪ್ರೇಕ್ಷಕರ ಮನಸೆಳೆದ ಗಾಯನ

Upayuktha
0


ಬೆಂಗಳೂರು: ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ (ವಜ್ರಕ್ಷೇತ್ರ)ದಲ್ಲಿ ಏಪ್ರಿಲ್ 26, ಶುಕ್ರವಾರ ಸಂಜೆ ಏರ್ಪಡಿಸಿದ್ದ "ಹರಿದಾಸ ಮಂಜರಿ" ಕಾರ್ಯಕ್ರಮದಲ್ಲಿ ಗಾನ ಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಮತ್ತು ಶ್ರೀಮತಿ ರಂಜಿತಾ ವಿಜಯ್ ಹಾಗೂ ಗುರುಗಳಾದ ರಮ್ಯಾ ಸುಧೀರ್ ಇವರುಗಳು ಹರಿದಾಸರ ಕೀರ್ತನೆಗಳ ಗಾಯನ ಸೇವೆ ನಡೆಸಿಕೊಟ್ಟರು. 


ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಅಮಿತ್ ಶರ್ಮಾ ತಬಲಾ ವಾದನದಲ್ಲಿ  ಸರ್ವೋತ್ತಮ ಸಾಥ್ ನೀಡಿದರು. ದೇವಸ್ಥಾನದ ಮುಖ್ಯಸ್ಥರಾದ ವಾದಿರಾಜಾಚಾರ್ ಮತ್ತು ನರಹರಿ ಆಚಾರ್ ಅವರುಗಳು ಗುರುಗಳಿಗೆ, ಮಕ್ಕಳಿಗೆ ಹಾಗೂ ವಾದ್ಯ ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಸ್ವಾಮಿಯ ಪ್ರಸಾದ ನೀಡಿದರು. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಕಿಕ್ಕಿರಿದು ನೆರೆದಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top