ಅನ್ವಯಿಕ ಪ್ರಯೋಗಗಳಿಂದ ಸುಸ್ಥಿರ ಬೆಳವಣಿಗೆ: ಡಾ.ಸತೀಶ್ಚಂದ್ರ ಎಸ್.

Upayuktha
0

ಎಸ್.ಡಿ.ಎಂ ರಸಾಯಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ



ಉಜಿರೆ: ಅತ್ಯಾಧುನಿಕ ಸಂಸ್ಕರಿತ ಭೌತವಸ್ತು ಸಂಬಂಧಿತ ರಾಸಾಯನಿಕ ಮತ್ತು ಜೈವಿಕ ಅನ್ವಯಿಕತೆಯ ಪ್ರಯೋಗಗಳು ಸುಸ್ಥಿರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಆಶಾದಾಯಕ ಸಂಗತಿ ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.


ಅವರು ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತç ಅಧ್ಯಯನ ವಿಭಾಗ ಹಾಗೂ ಅಭಿವೃಧ್ದಿ ಕೋಶದ ಸಹಯೋಗದೊಂದಿಗೆ "ಅಡ್ವಾನ್ಸಡ್ ಮೆಟೀರಿಯಲ್ಸ್ ಫಾರ್ ಕೆಮಿಕಲ್ ಬಯೋಲಾಜಿಕಲ್ ಅಪ್ಲಿಕೇಶನ್ಸ್" ಕುರಿತು ಆಯೋಜಿತ ಎರಡು ದಿನಗಳ ರಾಷ್ಟೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.


ಅತ್ಯಾಧುನಿಕ ತಂತ್ರಜ್ಞಾನದ ಪರಿಕಲ್ಪನೆಗಳು ಪ್ರಯೋಗಕ್ಕೊಳಪಟ್ಟ ತದನಂತರ ತಾಂತ್ರಿಕತೆಯ ಪ್ರಯೋಜನಗಳು ವ್ಯಾಪಕವಾದವು. ಇವುಗಳ ನೆರವಿನೊಂದಿಗೆ ಕಚ್ಚಾವಸ್ತುಗಳು ಸಂಸ್ಕರಿತಗೊಂಡು ಹೊಸರೂಪ ಪಡೆದವು. ಹೀಗೆ ವಿಸ್ತೃತಗೊಂಡ ಭೌತವಸ್ತುಗಳ ರೂಪಾಂತರವು ರಾಸಾಯನಿಕ ಮತ್ತು ಜೈವಿಕ ಶಾಸ್ತçಗಳ ವಲಯದಲ್ಲಿ ವಿನೂತನ ಪ್ರಯೋಗಗಳಿಗೆ ಸಹಕಾರಿಯಾಗಿದೆ. ಇದರ ಆಧಾರದಲ್ಲಿ ನಿರ್ವಹಿಸಲ್ಪಟ್ಟ ಸಂಶೋಧಕ ಹೆಜ್ಜೆಗಳ ಫಲಿತಾಂಶಗಳಿಂದ ಹೊಸದಾದ ಕೌಶಲ್ಯಪೂರ್ಣ ತಾಂತ್ರಿಕ ಅವಕಾಶಗಳನ್ನು ಸೃಷ್ಟಿಯಾದವು. ಇವುಗಳಿಂದ ವಿಜ್ಞಾನ, ತಂತ್ರಜ್ಞಾನ ಮಾತ್ರವಲ್ಲದೇ ಕೃಷಿ, ಆರೋಗ್ಯ ಸೇರಿದಂತೆ ಮನುಷ್ಯನ ದೈನಂದಿನ ಬದುಕಿಗೆ ಸಹಾಯಕವಾಗುವ ಕ್ಷೇತ್ರಗಳು ಪ್ರಯೋಜನ ಪಡೆಯಲು ಸಾಧ್ಯವಾಗಿದೆ ಎಂದರು.


ಅತ್ಯಾಧುನಿಕ ಸಂಸ್ಕರಿತ ಭೌತವಸ್ತುಗಳ ಅನ್ವೇಷಕ ಪ್ರಜ್ಞೆಯು ಅಂತರ್‌ಶಿಸ್ತೀಯ ಅಧ್ಯಯನದ ವ್ಯಾಪಕತೆಯನ್ನು ಹೆಚ್ಚಿಸುತ್ತಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ರಸಾಯನಶಾಸ್ತç ವಲಯದ ಯುವ ಸಂಶೋಧಕರು ಕಾರ್ಯೋನ್ಮುಖರಾಗಬೇಕು. ಇಂಥ ಅಂತರ್‌ಶಿಸ್ತೀಯ ಸಂಶೋಧನಾತ್ಮಕ ಹೆಜ್ಜೆಗಳು ಸಾಮಾಜಿಕವಾಗಿ ಮೌಲಿಕವೆನ್ನಿಸಿಕೊಳ್ಳುತ್ತವೆ ಎಂದರು.


ಬೆಂಗಳೂರಿನ ಆಂಥೆಮ್ ಬಯೋಸೈನ್ಸ್ಸ್ ಸಂಸ್ಥೆಯ ನೂತನ ತಂತ್ರಜ್ಞಾನ ಮತ್ತು ಅಭಿವೃದ್ಧಿ ಘಟಕದ ಮುಖ್ಯಸ್ಥ ಮುಖ್ಯಸ್ಥ ಡಾ.ಕರುಣಾನಿಧಿ ಜ್ಞಾನವೇಲು ಸಮ್ಮೇಳನದ ಪ್ರಧಾನ ಆಶಯ ಪ್ರಸ್ತುತಪಡಿಸಿದರು.


ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಸಾಯನಿಕ ಮತ್ತು ಜೈವಿಕ ಅನ್ವಯಿಕತೆಯ ಪ್ರಯೋಗಗಳಿಂದಾಗಿ ವೈದ್ಯಕೀಯ ರಂಗದಲ್ಲಿ ಮಹತ್ವಪೂರ್ಣ ಪಲ್ಲಟಗಳಾಗಿವೆ. ಕ್ರಾಂತಿಕಾರಕ ಎನ್ನಿಸುವಂಥ ವೈದ್ಯಕೀಯ ಹೆಜ್ಜೆಗಳು ರೂಪುಗೊಂಡಿವೆ. ಹ್ಯುಮುಲಿನ್‌ನ ಆವಿಷ್ಕಾರವು ಅಂಥದ್ದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಇಂಥ ಅನ್ವೇಷಣೆಯು ಮನುಷ್ಯರ ಆರೋಗ್ಯಕ್ಕೆ ಅಡ್ಡಪರಿಣಾಮ ಉಂಟುಮಾಡದೆಯೇ ಸುಸ್ಥಿತಿಗೆ ತರುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಹೇಳಿದರು,


ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿಯೂ ರಾಸಾಯನಿಕ ಮತ್ತು ಜೈವಿಕ ಶಾಸ್ತç ವಲಯದ ಅನ್ವಯಿಸುವಿಕೆಯ ಅತ್ಯಾಧುನಿಕ ಪ್ರಯೋಗಗಳು ಪ್ರಮುಖ ಪಾತ್ರವಹಿಸುತ್ತಿವೆ. ಯುವಸಂಶೋಧಕರು ಶ್ರೇಷ್ಠ ವಿಜ್ಞಾನಿಗಳು ಮತ್ತು ಸಂಶೋಧಕರ ಬದುಕಿನ ಸಾಧನೆಯ ವಿವರಗಳನ್ನೊಳಗೊಂಡ ಮೌಲಿಕ ಜೀವನ ಚರಿತ್ರೆಯ ಕೃತಿಗಳನ್ನು ಓದಬೇಕು. ಅಂಥ ಅಧ್ಯಯನವು ಅನ್ವೇಷಕ ಪ್ರಜ್ಞೆಯನ್ನು ಮತ್ತಷ್ಟು ನಿಖರಗೊಳಿಸುತ್ತದೆ ಎಂದು ನುಡಿದರು. ಅಥಿತಿಗಳಾದ ಡಾ.ಕರುಣಾನಿಧಿ ಜ್ಙಾನವೇಲು ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.


ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗೂ ರಸಾಯನಶಾಸ್ತç ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ವಿಶ್ವನಾಥ ಪಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ,ನೆಫಿಸತ್.ಪಿ. ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ,ಅಸೋಸಿಯೇಟ್ ಪ್ರೋಪೆಸರ್ ಡಾ.ನವೀನ್ ಕುಮಾರ್ ವಂದಿಸಿದರು. ಎಸ್,ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ.ಸೌಮ್ಯ ಬಿ.ಪಿ ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top