ಅಯೋಧ್ಯೆ: ಮಾಜಿ ಸಚಿವ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಗುರುವಾರ ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಭಾಗವಹಿಸಿ ಕಲಶಪೂಜೆ ಕಲಶಾಭಿಷೇಕ ಸೇವೆ ಸಹಿತ ಪಲ್ಲಕ್ಕಿ ಉತ್ಸವ ತೊಟ್ಟಿಲು ಪೂಜೆಗಳಲ್ಲಿ ಭಾಗವಹಿಸಿದರು. ಉಡುಪಿಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿಯವರೂ ಭಾವಹಿಸಿದರು.
ಉಡುಪಿಯ ಉದ್ಯಮಿ ಡಾ ಜಿ ಶಂಕರ್ ಅವರೂ ಗುರುವಾರ ರಾಮದೇವರಿಗೆ ಕಲಶ ಸೇವೆಯಲ್ಲಿ ಭಾಗವಹಿಸಿದರು ಪೇಜಾವರ ಶ್ರೀಗಳು ಶಾಸಕ ಗುರ್ಮೆ ಮತ್ತು ಶಂಕರ್ ರಿಗೆ ರಜತ ಕಲಶಪ್ರಸಾದ ನೀಡಿ ಅನುಗ್ರಹಿಸಿದರು. ಸುನಿಲ್ ಕುಮಾರ್ ರವರ ಕಲಶ ಸೇವೆ ಶುಕ್ರವಾರ ನಡೆಯಲಿದೆ.
48 ದಿನಗಳ ಮಂಡಲೋತ್ಸವದಲ್ಲಿ ನಿತ್ಯ ನಡೆಯುವ ಪಲ್ಲಕ್ಕಿ ಉತ್ಸವಗಳಲ್ಲಿ ಶ್ರೀ ಕಾಶೀ ಮಠಾಧೀಶರ ಸೂಚನೆಯಂತೆ ಕರಾವಳಿ ಜಿಲ್ಲೆಗಳ ಅನೇಕ ಪ್ರದೇಶಗಳಿಂದ ಜಿಎಸ್ಬಿ ಸಮಾಜದ ಯುವಕರ ತಂಡ ಸರದಿಯಲ್ಲಿ ಆಗಮಿಸಿ ಮಂಡಲೋತ್ಸವದ ವೈಭವಕ್ಕೆ ಮೆರುಗು ತುಂಬುತ್ತಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ