ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತೆರಡನೆ ವರ್ಧಂತ್ಯುತ್ಸವದ ಅಂಗವಾಗಿ ಗುರುವಾರ ತೋರಣಮುಹೂರ್ತ, ವಿಮಾನಶುದ್ಧಿ, ಶೋಡಷ ಕಲಶಾಭಿಷೇಕ, ಸಂಜೆ 4 ಗಂಟೆಯಿಂದ ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಪೂಜ್ಯ ದಿವ್ಯಸಾಗರ ಮುನಿಮಹಾರಾಜರು, ಪೂಜ್ಯ ಆದಿಸಾಗರ ಮುನಿಮಹಾರಾಜರು, ಪೂಜ್ಯ ನಿರ್ದೋಷಸಾಗರ ಮುನಿಮಹಾರಾಜರು ಮತ್ತು ಕ್ಷುಲ್ಲಕ ನಿರ್ವಾಣಸಾಗರ ಮಹಾರಾಜರು ಉಪಸ್ಥಿತರಿದ್ದರು.
ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶುಕ್ರವಾರ ಬೆಳಿಗ್ಗೆ ಗಂಟೆ 8.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯುತ್ತದೆ. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು.
ಉಜಿರೆಯಲ್ಲಿ ಪ್ರತ್ಯಕ್ಷರಾದ ದ.ರಾ. ಬೇಂದ್ರೆ
ಮಾತಿನ ಗಾರುಡಿಗ, ಶಬ್ಧಬ್ರಹ್ಮ, ಮಂತ್ರಶಕ್ತಿಯ ವಾಗ್ಮಿ ಎಂದೇ ಚಿರಪರಿಚಿತರಾಗಿರುವ ಜ್ಞಾನಪೀಠ ಪುರಸ್ಕøತ ದ.ರಾ. ಬೇಂದ್ರ ನಿನ್ನೆ ಬುಧವಾರ ಉಜಿರೆಯಲ್ಲಿ ವನರಂಗ ಬಯಲು ಮಂದಿರದಲ್ಲಿ ಪ್ರತ್ಯಕ್ಷರಾದರು. ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘಟನೆ “ಸಮೂಹ” ಉಜಿರೆಯ ಆಶ್ರಯದಲ್ಲಿ ಬುಧವಾರ ರಾತ್ರಿ ಉಜಿರೆಯ ವನರಂಗ ಮಂದಿರದಲ್ಲಿ ಎಸ್.ಡಿ.ಎಂ. ಕಲಾ ಕೇಂದ್ರದ ವಿದ್ಯಾರ್ಥಿಗಳು “ಬೇಂದ್ರೆ ಅಂದ್ರೆ ...? ನಾಟಕವನ್ನು ಸಾದರಪಡಿಸಿದರು. ದಕ್ಷ ಆಡಳಿತದಾರ ಹಾಗೂ ಶಿಕ್ಷಣತಜ್ಞ ಕೀರ್ತಿಶೇಷ ಡಾ. ಬಿ. ಯಶೋವರ್ಮರ ಪರಿಕಲ್ಪನೆಯಲ್ಲಿ, ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸೋನಿಯಾ ಯಶೋವರ್ಮ ನೇತೃತ್ವದಲ್ಲಿ ನಾಟಕ ಪ್ರದರ್ಶನಗೊಂಡಿತು.
- ರಚನೆ: ಸದಾನಂದ ಬಿ. ಮುಂಡಾಜೆ
ನಿರ್ದೇಶನ ಮತ್ತು ವಿನ್ಯಾಸ: ಯಶವಂತ ಬೆಳ್ತಂಗಡಿ
ಉಜಿರೆಗೆ ಬೇಂದ್ರೆ ಬಂದಾರಂತ, ಎಲ್ಲರೂ ಬರ್ರೀ ಲಘುನಾ ನೋಡಾಕೆ ಹೋಗೂಣ ಅಂತ ಸಾವಿರಾರು ಮಂದಿ ಕುತೂಹಲದಿಂದ ನಾಟಕ ವೀಕ್ಷಿಸಿದರು. ಜೀವನದಲ್ಲಿ ಬೆಂದ್ರೆ ನೀ ಬೇಂದ್ರೆ ಆಗುವೆ ಎಂದು ಅರ್ಥೈಸಿಕೊಂಡ ಪ್ರೇಕ್ಷಕರು ಪ್ರತಿಭಾನ್ವಿತ ಯುವ ಕಲಾವಿದರ ಪ್ರೌಢ ಅಭಿನಯ, ವಾಕ್ಚಾತುರ್ಯ, ಧಾರವಾಡ ಕನ್ನಡದ ಸೊಗಡು, ಹಾವ_ಭಾವ, ಕಂಡು ಮಂತ್ರಮುಗ್ಧರಾದರು. ದ.ರಾ. ಬೇಂದ್ರೆ, ನಾಕುತಂತಿ, ಮೂಡಲಮನೆಯ, ಮುತ್ತಿನ ನೀರಿನ .. .. ದ.ರಾ. ಬೇಂದ್ರೆಯವರ ಉದಾರ ಮನೋಭಾವ, ದೃಢಸಂಕಲ್ಪ, ಇತ್ಯಾದಿ ಕಂಡು ಎಲ್ಲರೂ ಆಶ್ಚರ್ಯ ಚಕಿತರಾದರು. ಒರಿಯರ್ದ್ ಒರಿ ಅಸಲ್ ಎನ್ನುವಂತೆ ಎಲ್ಲಾ ಕಲಾವಿದರು ಉತ್ತಮ ರೀತಿಯಲ್ಲಿ ನಾಟಕ ಸಾದರ ಪಡಿಸಿದರು. “”ಅಯ್ಯಯ್ಯ ಎಂಚ ಪೊರ್ಲಾಂಡ್” ಎಂದು ಎಲ್ಲರೂ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ